ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೋವು
"ಓಟ್ಲು ಇಡಿಸ್ಕೊಟು ನಮ್ಮವನೇ ಒಬ್ಬ ಹುಡುಗನಿಗೆ ಜೀವನಕ್ಕೆ ದಾರಿ ಮಾಡೊಡೋ
ಣಾಂತಿದೀನಿ. ಅನುಮತಿ ಕೊಡ್ಬೇಕು. ಹೋಟ್ಲಿಗಾಗಿ ಸಣ್ಣದೊಂದು ಕಟ್ಟಡ ಬಾಡಿಗೆಗೆ ಕೊಡಿಸ್ಬೇಕು.”
" ಇಷ್ಟೇ ತಾನೆ? ಆಗಲಪ್ಪ, ನಾನು ಬೇಡ ಅನ್ನೋದಿಲ್ಲ. ಊರಿನ ಬೇರೆ ಪ್ರಮುಖರೂ
ಬೇಡ ಅನ್ನೆಲಾರರು."
"ಉಪಕಾರವಾಯ್ತು." " ಯಾವಾಗ ಶುರುಮಾಡ್ತೀರಾ ?" "ಆಷಾಢಮಾಸ ದಾಟಿದ್ಮೇಲೇ ಒಳ್ಳೆ ದಿನ ನೋಡಿ..." "ಉ೦." " ತಾವು ಉದ್ಘಾಟನೆ ಮಾಡ್ಬೇಕು." ಗೋವಿಂದ ಚಕಿತನಾಗಿ ವಿಷ್ಟುಮೂರ್ತಿಯವರನ್ನು ದಿಟ್ಟಿಸಿದ. ತಲೆದೂಗುವಂತಿತ್ತು
ಅವರ ವ್ಯವಹಾರ ಕೌಶಲ.
ಗೌಡರೆಂದರು: "ಏನು? ಭಾಷಣವೊ? ಹಹ್ಹ್ಹ ! ಗೋವಿಂದಪ್ಪ ಸೊಸೈಟಿ ಶುರು ಮಾಡ್ಯಾಗ
ಒಮ್ಮೆ ಆ ಕೆಲಸ ಒಪ್ಕೋ೦ಡಿದ್ವಿ. ಅದೂ ನಮಗೂ ಸರೊಗೋದಿಲ್ಲ . ಅದೇನಿದ್ದರೂ ಗೋವಿಂದಪ್ಪನಂಥವರಿಗೇ ಸೈ. ಸಭೆ ಭಾಷಣ ಅಂದರೆ ಅವನಿಗೆ ಭೋ ಇಷ್ಟ.”
ಗೋವಿಂದನಿಗೆ ಕಚಗುಳಿ ಇಟ್ಟಂತಾಯಿತು. ವಿಷ್ಟುಮನೂರ್ತಿ ಅ೦ದರು: "ನಮ್ಮ ಹೋಟ್ಲಿನ ಹೊಸ ಕಟ್ಟಡದ ಉದ್ಘಾಟನೆಗೆ ಸಚಿವ ಮಾರಪ್ಪನವರನ್ನ
ಕರೆಸಿದ್ವಿ.”
" ಹಾಗೋ?" " ತಮ್ಮ ಊರಿನ ಕೆಲಸ; ತಮ್ಮ ಅಮೃತ ಹಸ್ತದಿಂದಲೇ...” " ನೋಡಾನ, ನೋಡಾನೆ,...ಇನ್ನೂ ಟೈಮೈತೆ..." ಮೂಸಂಬಿ ಹಣ್ಣುಗಳತ್ತ ಮತ್ತೊಮ್ಮೆ ನೋಡಿದ ಗೌಡರೆಂದರು: “ನೀವು ತರಬಾರದಾಗಿತ್ತು, ತಂದಿದೀರಿ. ಮೊನ್ನೆಯಿಂದ ನನ್ನ ಮಗಳಿಗೆ ಸಲ್ಪ
ಜ್ವರ, ರಸ ಹಿಂಡಿ ಕೊಡೋದಕ್ಕಾಯ್ತದೆ. ತಗೋತೀವಿ."
ವಿಷಯ ತಿಳಿದ ಗೋವಿಂದ ನಸುನಕ್ಕ. ಅಷ್ಟು ಹೇಳಿ ಅವರು ಆಳನ್ನು ಕರೆದರು: " ಏ ಕರಿಯ ! ಈ ಅಯ್ಯೋರ ಚೀಲತುಂಬಾ ಒಳ್ಳೆ ರಸಪುರಿ ಹಣ್ಣು ತುಂಬಿಸ್ಕೊಡು. ಅವರ ಹಿಂದೆ ಹೊತ್ತೊಂಡೋಗು." “ಬೇಡ ಬೇಡ, ಎಲ್ಲಾದರೂ ಉಂಟೆ ?" "ಏನು ಬೇಡ? ಗೋವಿಂದಪ್ಪ, ಕೊಡು ಆ ಚೀಲಾನ ಕರಿಯನಿಗೆ. ನಿಮ್ಮ ತೋಟದಲ್ಲಾ
ಮಾವಿನ ಫಸಲು ಚೆಂದಾಕಿ ಆಗೈತೆ ಅಂತ ಗೊತ್ತು, ಆದರೂ ನಮ್ಮನೇದೂ ಇರಲಿ.”
ಹತ್ತಿರ ಬಂದ ಕರಿಯನಿಗೆ ಗೋವಿಂದ ಚೀಲವನ್ನು ಕೊಟ್ಟ.
5