ಈ ಪುಟವನ್ನು ಪರಿಶೀಲಿಸಲಾಗಿದೆ
ನೋವು ೬೭
" ಹುಂ," ಎಂದರು ಶ್ರೀನಿವಾಸಯ್ಯ. "ಈಗ ಹೊರಟರೆ ಹನ್ನೊಂದು ಘಂಟೆಯ ಬಸ್ಸು ಸಿಗುತಾ ?” ಎಂದು ವಿಷ್ಣುಮೂತ್ರಿ ಕೇಳಿದರು. "ಏನವಸರ ? ಇದ್ದು ಹೋಗಿ. ಊಟ ಮಾಡ್ಕೊ೦ಡು..." ಎಂದರು ಶ್ರೀನಿವಾಸಯ್ಯ, " ಗ್ರಾಮ ಚಾವಡಿ ಹತ್ತಿರದ ಮನೆ ಬೇರೆ ನೀವು ನೋಡ್ಬೇಕು," ಎಂದು ಗೋವಿಂದ ನೆನಪು ಹುಟ್ಟಿಸಿದ. " ಹೋಗ್ತಾ ನೋಡ್ತೀನಿ. ನಗರದಲ್ಲಿ ಕೆಲಸ ಧಂಡಿಯಾಗಿ ಬಿದ್ದಿದೆ." " ಎರಡು ಘಂಟೆಗೆ ನಿಮಗೊಂದು ಬಸ್ಸು ಸಿಗುತ್ತೆ, ಸೀಟು ಕೊಡಿಸಿ ಕಳಿಸೋ ಜವಾ ಬ್ದಾರಿ ನನ್ದು," ಎಂದ ಗೋವಿಂದ.
“ ಸರಿ.”
ಗೋವಿಂದ ಅಜ್ಜಿಗೆ ತಿಳಿಸಬೇಕಾದ ವಿಷಯದ ನೆನಪಾಗಿ, " ದೊಡ್ಡಮ್ಮ!" ಎಂದು ಕೂಗುತ್ತ ಒಳಕ್ಕೆ ಹೋದ ವಿಷ್ಣುಮೂತ್ರಿ ಶ್ರೀನಿವಾಸಯ್ಯನವರ ಕಡೆ ತಿರುಗಿ, " ಬಂದ ಕೆಲಸ ಅರ್ಧ ಆಯ್ತು," ಎ೦ದರು.
" ಅರ್ಧ ?"
" ಹೌದು. ಉಳಿದದ್ದು ನಿಮ್ಮ ಹತ್ತಿರ ಈಗ ನಾನು ಪ್ರಸ್ತಾಪಿಸಬೇಕು." "ಹೇಳೋಣಾಗಲಿ." ವಿಷ್ಣುಮೂರ್ತಿ ಅರ್ಧ ಕ್ಷಣ ಸುಮ್ಮನಿದ್ದು, ಗಂಟಲು ಸರಿಪಡಿಸಿಕೊಂಡರು. ೯
ಗೋಪಾಲ ಮರಗಳಿಂದ ಕಾಯಿ ಇಳಿಸಲು ಮಾವಿನ ತೋಪಿಗೆ ಆಳುಗಳೊಡನೆ ಹೋಗಿದ್ದ. ಅವನ ಹೆ೦ಡತಿ ಭಾಗೀರಥಿ ಅಡುಗೆಮನೆಯಲ್ಲಿದ್ದಳು. ಆ ಬೆಳಗ್ಗೆ ಅವಳು ಕೇಳಿದ್ದ ಮಾತುಕತೆ ಒಂದು ಬಗೆಯ ಗೊಂದಲದಲ್ಲಿ ಆಕೆಯನ್ನು ಕೆಡವಿತ್ತು; ವಿಸ್ಮಯ ಒಂದೆಡೆ, ಸಂತೋಷ ಇನ್ನೊಂದೆಡೆ. ಗೋವಿ೦ದ ಮತ್ತು ಅಜ್ಜಿ....... "ದೊಡ್ಡಮ್ಮ, ಕೇಳಿದೆಯಾ ? ಸುಬ್ಬಿಗೆ ಜ್ವರವಂತೆ." "ಹೌದೆ?" "ಮೊನ್ನೆಯಿಂದ." "ಆಹಾ? ಶಾಮಣ್ಣ ನಿನ್ನೆ ಬಂದಿದ್ದ ಹೇಳ್ಳೇ ಇಲ್ಲ." "ಅವರು ಬಂದು ಹೇಳೋ ಕಾಲ ಕಳೆಧ್ಹೋಯ್ತು, ದೊಡ್ಡಮ್ಮ." "ಹಾಗಂದರೇನು ಗೋವಿಂದೂ ?"