ಪುಟ:ಪರಂತಪ ವಿಜಯ ೨.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೨

೧೧೧


ಬ್ಬನಿಗೆ ನಾವಿಬ್ಬರೂ ಅಧೀನರಾಗಿರುವೆವು. ನಮ್ಮ ಕಷ್ಟಗಳಿಗೆ ಅವಸಾನವೆಲ್ಲಿಯದು? ಶುಕ್ಲಪಕ್ಷವನ್ನು ಎದುರು ನೋಡುವ ಸಂತೋಷವು ನಮಗೆ ಎಲ್ಲಿ ಬರುವದು? ಈ ಕೃಷ್ಣ ಪಕ್ಷದಲ್ಲಿಯೇ ನಾವಿಬ್ಬರೂ ಲೋಕಾಂತರವನ್ನು ಹೊಂದುವಂತೆ ತೋರುತ್ತದೆ. ನಿನ್ನನ್ನು ನೋಡಿ ಮಾತನಾಡಿದ ಸಂತೋಷವು ನನಗೆ ಸಾಕು. ಯಮನು ನಮ್ಮಲ್ಲಿ ಕರುಣವನ್ನಿಟ್ಟು ಈ ನಮ್ಮ ದೇಹಗಳನ್ನ ಬಿಡುವಂತೆ ಮಾಡಿದರೆ ಕೃತಕೃತ್ಯರಾಗುವೆವು. ನಿನ್ನ ಸ್ಥಿತಿಯು ನನ್ನ ಸ್ಥಿತಿಗಿಂತಲೂ ಶೋಚನೀಯವಾದುದು. ನಾನು ಅನುಭವಿಸುತ್ತಲಿರುವ ಕಷ್ಟಗಳು, ನನ್ನ ದೇಹಕ್ಕೆ ಮನಸ್ಸಿಗೂ ವ್ಯಥೆಯನ್ನುಂಟು ಮಾಡುತ್ತಲಿರುವೆವು ; ನಿನಗೆ ಉಂಟಾಗಿರತಕ್ಕೆ ಕಷ್ಟಗಳೋ, ನಿನ್ನ ಪಾತಿವ್ರತ್ಯ ಕ್ಕೂ ಭಂಗವನ್ನು ತರುವಂತೆ ತೋರುತ್ತವೆ. ಇಂಥ ಅವಸ್ಥೆಯು ಬರುವುದರೊಳಗಾಗಿ ದೇವರು ನಿನ್ನ ಪ್ರಾಣವನ್ನು ಪರಿಗ್ರಹಿಸಿದರೆ, ಇದೇ ಪರಮ ಸುಖವೆಂದು ನಾನು ಭಾವಿಸುವೆನು.
ಕಾಮಮೋಹಿನಿ - ತಂದೆಯೇ ! ಈ ವಿಷಯಗಳನ್ನೆಲ್ಲಾ ನಾನು ಬಲ್ಲೆನು. ದುರಾತ್ಮನಾದ ಶಂಬರನು ನನ್ನ ಪಾತಿವ್ರತ್ಯ ಭಂಗವನ್ನು ಮಾಡ ಬೇಕೆಂದು ಸಂಕಲ್ಪ ಮಾಡಿರುವನು. ಇದು ಸಾಮಾನ್ಯವಾದ ಸಂಕಲ್ಪವೆ? ರಾವಣಾದಿಗಳು ಇಂಥ ದುಷ್ಟ ಸಂಕಲ್ಪವನ್ನು ಮಾಡಿ ಯಮಾಲಯವನ್ನು ಹೊಂದಲಿಲ್ಲವೆ? ನಿನ್ನ ಮಗಳಾದ ಕಾಮಮೋಹಿನಿಯು ಪತಿವ್ರತಾಶ್ರೇಷ್ಠಳಲ್ಲವೆ? ಅವಳ ಪಾತಿವ್ರತ್ಯಕ್ಕೆ ಭಂಗ ಬರುವ ಸಂದರ್ಭ ಬಂದರೆ, ಅವಳಿಗೆ ದೇವರ ಸಹಾಯವುಂಟಾಗಲಾರದೆ? ಈ ವಿಷಯದಲ್ಲಿ ನೀನು ಭಯ ಪಡಬೇಡ.
ತಂದೆ- ನಿನ್ನ ಧೈರ್ಯವು ಅಸಾಧಾರಣವಾದುದು. ಆದರೆ, ಅದು ಆಧಾರ ರಹಿತವಾದುದೆಂದು ನನಗೆ ತೋರುವುದು, ನೀನು ದೇವರಲ್ಲಿ ಸಂಪೂರ್ಣ ಭಕ್ತಿಯನ್ನಿಟ್ಟಿರುವೆ; ದೇವರು ಮಾತ್ರ ಕಣ್ಣುಗಳನ್ನು ಮುಚ್ಚಿಕೊಂಡಿರುವಂತೆ ತೋರುತ್ತದೆ. ಹಾಗಿಲ್ಲದ ಪಕ್ಷದಲ್ಲಿ, ಇಂಥ ಕಷ್ಟಕ್ಕೆ ಗುರಿಯಾಗ ತಕ್ಕ ಪಾತಿತ್ಯವನ್ನು ನಾವು ಏನುಮಾಡಿರುವೆವು?
ಕಾಮಮೋಹಿನಿ-ಎಲೈ ತಂದೆಯೇ! ಕಷ್ಟದಿಂದ ಪರವಶನಾಗಿ ನೀನು ಈರೀತಿಯಲ್ಲಿ ಮಾತನಾಡುವೆ. ದೇವರು ಎಂದಿಗೂ ಕಣ್ಣು ಮುಚ್ಚಿ