ಪುಟ:ಪರಂತಪ ವಿಜಯ ೨.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೨೨

ಪರಂತಪ ವಿಜಯ


ಹೀಗೆ ಹೇಳಿ, ಏಕಾಂತವಾದ ಒಂದು ಸುರಂಗದ ಮಾರ್ಗದಿಂದ ಅವನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲಿದ್ದ ಒಂದು ಕೀಲಿನ ಬಾಗಿಲಿನ ಗುಂಡಿಯನ್ನು ಮುಟ್ಟಿದನು. ಕೂಡಲೆ ಬಾಗಿಲು ತೆಗೆದುಕೊಂಡಿತು. ಆ ಬಾಗಿಲನ್ನು ಹಾಕುವುದಕ್ಕೆ ಸಾಧಕವಾದ ಮತ್ತೊಂದು ಕೀಲನ್ನು ಅವನಿಗೆ ತೋರಿಸಿ, ಆ ಸುರಂಗ ಮಾರ್ಗದ ಏಕಾಂತಗಳನ್ನೆಲ್ಲ ಅವನಿಗೆ ಹೇಳಿ, ಕಾವಲುಗಾರನು ಕಳುಹಿಸಿಕೊಟ್ಟನು.


ಅಧ್ಯಾಯ ೧೬
----

ರಂತಪನು ರತ್ನಾಕರವನ್ನು ಬಿಟ್ಟು ಕಲ್ಯಾಣಪುರಕ್ಕೆ ವೇಷಧಾರಿಯಾಗಿ ಹೋದನು. ಅ ಪಟ್ಟಣದ ಕಲ್ಪತರುವೆಂಬ ಭೋಜನಶಾಲೆಯನ್ನು ಪ್ರವೇಶಿಸಿ, ಏಕಾಂತವಾಗಿ ಸಮರಸಿಂಹನ ಬಳಿಗೆ ಹೋಗಿ, ನಡೆದ ವಿದ್ಯಮಾನಗಳನ್ನೆಲ್ಲ ಹೇಳಿದನು.
ಸಮರಸಿಂಹ- ದುರಾತ್ಮನಾದ ಶಂಬರನನ್ನು ಶಿಕ್ಷಿಸಿ ನಿನ್ನ ಹೆಂಡತಿ ಮಾವ ಮೊದಲಾದವರನ್ನು ಬಿಡುಗಡೆ ಮಾಡುವದಕ್ಕೆ ನನ್ನ ಸಹಾಯವನ್ನು ಅಪೇಕ್ಷಿಸುತ್ತಿಲ್ಲವೆ?
ಪರಂತಪ- ಅದಕ್ಕೆ ಸಂದೇಹವೇನಿದೆ? ನಿನ್ನ ಸಹಾಯವಿಲ್ಲದಿದ್ದರೆ ಈ ಕೆಲಸ ನಡೆಯುವುದಿಲ್ಲ.
ಸಮರಸಿಂಹ- ಈ ದುಷ್ಟನನ್ನು ನಿಗ್ರಹಿಸುವುದಕ್ಕೋಸ್ಕರ ನಾನು ಪ್ರಾಣವನ್ನಾದರೂ ಕೊಡುವೆನು.
ಪರಂತಪ- ಹಾಗಾದರೆ ನನ್ನ ಕೆಲಸವಾಯಿತೆಂದು ಭಾವಿಸಿರುವೆನು. ಅದು ಹಾಗಿರಲಿ: ಈ ಪಟ್ಟಣಕ್ಕೆ ಮ್ಯಾಜಿಸ್ಟ್ರೇಟರು ಯಾರು?
ಸಮರಸಿಂಹ-ನಾನೇ ಇಲ್ಲಿಗೆ ಮ್ಯಾಜಿಸ್ಟ್ರೇಟಾಗಿ ಇರುವೆನು?
ಪರಂತಪ-ಹಾಗಾದರೆ, ಬಲಿಷ್ಠರಾಗಿಯೂ ಯುದ್ಧ ಮಾಡುವುದರಲ್ಲಿ ಸಮರ್ಥರಾಗಿಯೂ ಇರತಕ್ಕ ಪೊಲೀಸಿನವರನ್ನು ಕರೆದುಕೊಂಡು ಹೊರಡು.