ಪುಟ:ಪರಂತಪ ವಿಜಯ ೨.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೪

೩೫


ಟಪಡುತ್ತಿರುವ ನನ್ನನ್ನು ಕಾಪಾಡು. ಸುಮಿತ್ರನು ಈ ನೀಚನಿಗೆ ನನ್ನನ್ನು ಕೊಡುವುದು ನಿಜ. ನಿನ್ನಲ್ಲಿ ನಾನು ಶರಣಾಗತಳಾಗಿರುವೆನು. ಮುಚ್ಚು ಮರೆಯೇಕೆ? ನನ್ನ ಅಂತರಂಗವನ್ನು ಹೇಳುವೆನು,ಕೇಳು. ನೀನು ಇಲ್ಲಿಗೆ ಬಂದುದು ಮೊದಲು, ನನಗೆ ನಿನ್ನ ವಿಷಯದಲ್ಲಿ ಅನುರಾಗವೂ ಗೌರವವೂ ದಿನೇದಿನೇ ವೃದ್ಧಿ ಹೊಂದುತ್ತಿರುವುವು. ಆದುದರಿಂದ, ನೀನು ನನ್ನನ್ನು ವರಿಸಿದ ಪಕ್ಷದಲ್ಲಿ, ನಾನು ಜೀವಿಸಿರುವವರೆಗೂ ಮನೋವಾಕ್ಕಾಯಕರ್ಮಗಳಲ್ಲಿಯೂ ನಿನ್ನ ಇಷ್ಟಾನುವರ್ತಿನಿಯಾಗಿರುವೆನು. ಹೀಗಲ್ಲದೆ ಶಂಬರನನ್ನೇ ವಿವಾಹ ಮಾಡಿಕೊಳ್ಳಬೇಕಾದ ಪಕ್ಷದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳುವುದೇ ನಿಜ. ಆದುದರಿಂದ, ನನ್ನ ಕಷ್ಟವನ್ನು ನಿವಾರಣೆ ಮಾಡಿ ನನ್ನನ್ನು ಬದುಕಿಸುವುದು ನಿನಗೆ ಸೇರಿದೆ. ಇದು ಮೊದಲುಗೊಂಡು ನನ್ನ ಪ್ರಾಣಮಾನಗಳೆರಡಕ್ಕೂ ನೀನೇ ನಿಯಾಮಕನಾಗಿರುತ್ತೀಯೆ.
ಪರಂತಪ-ಶರಣಾಗತ ರಕ್ಷಣೆ ಮಾಡುವುದಕ್ಕಿಂತ ಉತ್ಕೃಷ್ಟವಾದ ಬೇರೆ ಧರ್ಮವಾವುದೂ ಇಲ್ಲ. ನಿನ್ನನ್ನು ಈ ಕಷ್ಟದಿಂದ ಬಿಡಿಸುವೆನು. ಈ ವಿಷಯದಲ್ಲಿ ನನಗೆ ಎಷ್ಟು ವಿಪತ್ತುಗಳು ಪ್ರಾಪ್ತವಾದಾಗ್ಗೂ ಆಗಲಿ. ಆದರೆ, ನಿನ್ನನ್ನು ವಿವಾಹ ಮಾಡಿಕೊಳ್ಳಬೇಕೆಂಬ ಅಭಿಲಾಷೆಯಿಂದ ನಾನು ಎಂದಿಗೂ, ಈ ಕೆಲಸವನ್ನು ಮಾಡತಕ್ಕವನಲ್ಲ. ಅದು ಹಾಗಿರಲಿ; ಪ್ರಕೃತದಲ್ಲಿ ನಾನು ನಿನ್ನ ಬಂಧನವನ್ನು ಬಿಡಿಸಿ ಕಷ್ಟನಿವಾರಣೆ ಮಾಡುವೆನು. ಅನಂತರದಲ್ಲಿ ನಿನಗೆ ನನಗಿಂತಲೂ ಉತ್ತಮನಾದವನು ಯಾವನಾದರೂ ದೊರೆಯುವನು. ಹಾಗೆ ಯಾರೂ ದೊರೆಯದ ಪಕ್ಷದಲ್ಲಿ, ಆಗ ಪರ್ಯಾಲೋಚಿಸೋಣ. ಆದರೆ ನನಗೆ ಇನ್ನೊಂದು ಅನುಮಾನವು ಭಾಧಿಸುತ್ತಿರುವುದು. ಏನೆಂದರೆ; ನೀನು ಶಂಬರನನ್ನು ವಿವಾಹ ಮಾಡಿಕೊಳ್ಳದಿದ್ದ ಪಕ್ಷದಲ್ಲಿ, ಬಾಲ್ಯದಿಂದ ಇದುವರೆಗೂ ನಿನ್ನನ್ನು ನೋಯಿಸದೆ ಸುಖದಿಂದ ಸಾಕುತ್ತಿದ್ದ ಸುಮಿತ್ರನಿಗೆ ಅತ್ಯಂತ ಕ್ಲೇಶವುಂಟಾಗುವುದು. ಆಗ ನೀನು ಕೃತಘ್ನುಳೆಂಬ ಲೋಕಾಪವಾದಕ್ಕೆ ಗುರಿಯಾಗಬೇಕಾಗುತ್ತದೆಯಲ್ಲವೆ?
ಕಾಮಮೋಹಿನಿ- ಈ ಸುಮಿತ್ರನು ನನಗೆ ಮಹೋಪಕಾರ ಮಾಡಿರತಕ್ಕವನೇ ಅಹುದು, ತಂದೆತಾಯಿಗಳ ಮುಖವನ್ನೇ ಕಾಣದ ನನ್ನನ್ನು ತಂದು ಇದುವರೆಗೂ ಅತಿ ಪ್ರೇಮದಿಂದ ಪೋಷಿಸಿದನು. ಇವನೇ ನನ್ನ ಭಾಗಕ್ಕೆ