ಪುಟ:ಪರಂತಪ ವಿಜಯ ೨.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೮

೬೩


ಅನುರಾಗವಿಲ್ಲ; ಅಲ್ಲದೆ, ಮಾಧವನ ಆಸ್ತಿಗೆ ನಿನಗೆ ಹಕ್ಕೂ ಇಲ್ಲ. ಹೀಗಿರುವಲ್ಲಿ, ಅವನ ಧರ್ಮವು ಅವನನ್ನು ಕಾಪಾಡಲಾರದೆ? ನೀನು ಎಷ್ಟು ಬಲಿಷ್ಟನಾದರೂ, ನಿನ್ನ ಅಧರ್ಮವು ನಿನ್ನನ್ನು ಕೆಡಿಸಲಾರದೆ?
ಶಂಬರ- ಆಡಿದ್ದರಿಂದ ಪ್ರಯೋಜನವೇನು? ಈ ವಿಷಯವು ಕಾರ್ಯತಃ ಗೊತ್ತಾಗುವುದು.
ಸುಮಿತ್ರ- ಹಾಗಾದರೆ ನಿನ್ನ ಇಷ್ಟ ಬಂದಂತೆ ಮಾಡು. ನಾನು ಕಲಾವತಿಯ ಹೆಸರಿಗೆ ಬರೆದಿರುವ ಉಯಿಲನ್ನು ಸ್ಥಿರಪಡಿಸುವೆನು. (ಎಂದು ಹೇಳಿ ಹೊರಟುಹೋದನು.)


ಅಧ್ಯಾಯ ೮.



   ಪರಂತಪನು, ತನಗೂ ಕಾಮಮೋಹಿನಿಗೂ ವಿವಾಹ ಪೂರಯಿಸಿದ ಕೂಡಲೆ, ಮುಂದೆ ನಡೆಯ ಬೇಕಾದ ಕಾರ್ಯ ನಿರ್ವಾಹಕೊಸ್ಕರ ಕಲ್ಪತರುವಿಗೆ ಹೋದನು. ಅಲ್ಲಿಗೆ ಹೋದಕೂಡಲೆ, ಶಂಬರನ ಕಡೆಯ ಸೇವಕನೊಬ್ಬನು ಒಂದು ಕಾಗದವನ್ನು ತಂದುಕೊಟ್ಟನು. ಅದನ್ನು ಪರಂತಪನು ಒಡೆದು ಓದಿದನು,
        ಪರಂತಪನ ಸನ್ನಿಧಿಯಲ್ಲಿ,
           ಶಂಬರನ ವಿಜ್ಞಾಪನೆ,
  ಮಾಧವನ ಅವಸಾನಕಾಲದಲ್ಲಿ, ನೀನು ಉಪಾಯಾಂತರದಿಂದ ಅವನ ಕೈಪೆಟ್ಟಿಗೆ ಮೊದಲಾದುವುಗಳನ್ನು ಸ್ವಾಧೀನಪಡಿಸಿಕೊಂಡು, ಕೃತ್ರಿಮವಾದ ಒಂದು ಉಯಿಲನ್ನು ಸೃಷ್ಟಿಸಿ, ಆತನ ಆಸ್ತಿಯನ್ನೆಲ್ಲ ಸ್ವಾಧೀನ ಪಡಿಸಿ ಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದುದಲ್ಲದೆ, ಇಲ್ಲಿ ನನ್ನಲ್ಲಿ ಪೂರ್ಣಾನುರಾಗವುಳ್ಳ ಕಾಮಮೋಹಿನಿಗೆ ದುರ್ಬೋಧನೆಯನ್ನು ಮಾಡಿ, ನಮ್ಮಿಬ್ಬರ ವಿವಾಹಕ್ಕೆ ವಿಫಾತವನ್ನುಂಟುಮಾಡಿದೆ. ಈ ತಪ್ಪಿತವನ್ನು ನೀನು ಒಪ್ಪಿ