ಪುಟ:ಪರಂತಪ ವಿಜಯ ೨.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೮

೬೭


ಎಣಿಸಿದಕೂಡಲೆ, ನಿಮ್ಮ ಪಿಸ್ತೂಲನ್ನು ಏಕಕಾಲದಲ್ಲಿ ಹಾರಿಸತಕ್ಕುದು” ಎಂದು ಹೇಳಲು, ಪ್ರತ್ಯರ್ಥಿಗಳಿಬ್ಬರೂ, ತಮ್ಮ ತಮ್ಮ ಆಯುಧಗಳನ್ನು ಸಿದ್ಧ ಪಡಿಸಿಕೊಂಡು ಸನ್ನದ್ಧರಾದರು. ಸುಮಿತ್ರನು, ಶಂಬರನ ಜಯವನ್ನು ನಿರೀಕ್ಷಿಸುತ್ತ ಪರಂತಪನ ಬಲಗಡೆಯಲ್ಲಿ ನಿಂತಿದ್ದನು.
ಸಮರಸಿಂಹ- ಇನ್ನು ಸಿದ್ಧರಾಗಿ, ಒಂದು! ಎರಡು! ಮೂರು!!!
   ಕೂಡಲೇ ಎರಡು ಪಿಸ್ತೂಲುಗಳು ಹಾರಿಸಲ್ಪಟ್ಟುವು. ಶಂಬರನ ಗುಂಡು ಗುರಿತಪ್ಪಿ, ಪರಂತಪನ ಬಲಗಡೆಯಲ್ಲಿ ನಿಂತಿದ್ದ ಸುಮಿತ್ರನಿಗೆ ತಗುಲಿ, ಕೂಡಲೆ ಅವನು ಕೆಳಕ್ಕೆ ಬಿದ್ದು ಒದ್ದಾಡಿ ಮೃತನಾದನು. ಪರಂತಪನ ಗುಂಡು ಶಂಬರನ ಬಲಭುಜಕ್ಕೆ ತಗುಲಿ ಅವನೂ ಕೆಳಗೆ ಬಿದ್ದನು. ಕೂಡಲೇ ಪಂಚಾಯಿತರಲ್ಲಿ ಒಬ್ಬನಾಗಿದ್ದ ವೈದ್ಯನೊಬ್ಬನು, ಶಂಬರನಿಗೆ ಬಿದ್ದ ಏಟನ್ನು ಪರೀಕ್ಷಿಸಿ, ಕೂಡಲೇ ಬಾಹುಚ್ಛೇದವನ್ನು ಮಾಡಿ ಚಿಕಿತ್ಸೆ ಮಾಡಿದರೆ ಅವನು ಬದುಕಬಹುದೆಂದು ಹೇಳಿದನು. ಸ್ವಲ್ಪ ಹೊತ್ತಿನಲ್ಲಿಯೇ ಶಂಬರನು ಪ್ರಜ್ಞೆ ಹೊಂದಿ, ವೈದ್ಯನ ಅಭಿಪ್ರಾಯವನ್ನು ಕೇಳಿ, ಅವನ ಹೇಳಿಕೆಯಂತೆ ತನ್ನ ಬಾಹುಚ್ಛೇದಕ್ಕೆ ಒಪ್ಪಿಕೊಂಡನು. ಕೂಡಲೇ ಆ ವೈದ್ಯನು ಅವನನ್ನು ವೈದ್ಯಶಾಲೆಗೆ ಕರೆದುಕೊಂಡು ಹೋಗಿ, ಇತರ ವೈದ್ಯರ ಅಭಿಪ್ರಾಯವನ್ನೂ ಕೇಳಿ, ಇವನ ಬಲದ ಭುಜವನ್ನು ತೆಗೆಸಿದನು. ಮೂರು ತಿಂಗಳೊಳಗಾಗಿ ಆ ವ್ರಣವು ವಾಸಿಯಾಯಿತು. ಅದುವರೆಗೂ ಆ ಯಾತನೆಯಿಂದ ಅವನು ಬಹಳ ಕೃಶನಾಗಿದ್ದನು. ಆಮೇಲೆ ಪಂಚಾಯಿತರೆಲ್ಲರೂ ಸೇರಿ, ಪರಂತಪನನ್ನು ಮುಂದಿರಿಸಿಕೊಂಡು, ಶಂಬರನನ್ನು ನೋಡಿ,ಅಯ್ಯಾ! ಶಂಬರ! ನಿಮ್ಮಿಬ್ಬರ ಯುದ್ಧವೂ ಪೂರಯಿಸಿ ಮೂರು ತಿಂಗಳುಗಳಾದುವು. ನೀನು ಅವನ ಪ್ರಹಾರದಿಂದ ಮೃತನಾಗಿಯೇ ಹೋಗಿದ್ದ ಪಕ್ಷದಲ್ಲಿ, ಆ ಪರಂತಪನು ನಿರ್ದೋಷಿಯೆಂದು ಆಗಲೇ ತೀರ್ಮಾನಿಸುತ್ತಿದ್ದೆವು. ಈಗಲೂ ಹಾಗೆ ತೀರ್ಮಾನಿಸುವ ವಿಚಾರದಲ್ಲಿ ಯಾವ ಅಭ್ಯಂತರವೂ ಇಲ್ಲ. ಆದರೂ ನಿನ್ನ ಅಭಿಪ್ರಾಯವೇನು?-ಹೇಳು,
ಶಂಬರ- ಈ ನೀಚನಾದ ಪರಂತಪನು, ನನ್ನನ್ನು ಕೊಲ್ಲದೆ, ನಾನು ಜೀವಿಸಿದ್ದು ಮನಃಕ್ಲೇಶವನ್ನು ಅನುಭವಿಸಬೇಕೆಂಬ ಅಭಿಪ್ರಾಯದಿಂದ, ಜೀವಚ್ಛವವನ್ನಾಗಿ ಮಾಡಿದನು. ಆದರೂ ಚಿಂತೆಯಿಲ್ಲ; ಈ ಯುದ್ದದಿಂ