ಪುಟ:ಪರಂತಪ ವಿಜಯ ೨.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ಪರಂತಪ ವಿಜಯ


ಸಮರಸಿಂಹ- ಅದು ಹಾಗಿರಲಿ; ಶಂಬರನು ಗುರಿಹಿಡಿದು ಹೊಡೆಯುವ ವಿಷಯದಲ್ಲಿ ಸಮರ್ಥನೆಂದು ನೀನು ನಂಬಿರುವೆಯೋ?

ಪರಂತಪ- ಎಂದಿಗೂ ಇಲ್ಲ; ಹಾಗೆ ಅವನು ಶಕ್ತನಾಗಿದ್ದ ಪಕ್ಷದಲ್ಲಿ, ನನ್ನ ಪಾರ್ಶ್ವದಲ್ಲಿ ಬಹುದೂರದಲ್ಲಿ ನಿಂತಿದ್ದ ಸುಮಿತ್ರನಿಗೆ ಎಂದಿಗೂ ಗುಂಡು ತಗುಲುತ್ತಿರಲಿಲ್ಲ. ಅವನ ಗಂಡು ಅಕಸ್ಮಾತ್ತಾಗಿ ಸುಮಿತ್ರನಿಗೆ ತಗುಲಿರಬಹುದು.

ಸಮರಸಿಂಹ- ಅವನು ಮನಃಪೂರ್ವಕವಾಗಿ ಕ್ಷಮಾಪಣೆಯನ್ನು ಕೇಳಿಕೊಂಡಿರುವನೆಂದು ನಂಬಿರುವೆಯೋ?

ಪರಂತಪ- ಆ ಅಭಿಪ್ರಾಯವೂ ವ್ಯಕ್ತವಾಗಿಯೇ ಇರುವುದು. ನಾನು ಏನು ಮಾಡಿದ್ದಾಗ್ಯೂ, ಅವನಿಗೆ ನನ್ನಲ್ಲಿ ಮನಃಪೂರ್ವಕವಾಗಿ ಪ್ರೀತಿಯು ಎಂದಿಗೂ ಉಂಟಾಗುವುದಿಲ್ಲ. ಸಾಧ್ಯವಾದ ಪಕ್ಷದಲ್ಲಿ ಅವನು ನನ್ನನ್ನು ಕೊಲ್ಲುವುದಕ್ಕೂ ಹಿಂಜರಿಯುವವನಲ್ಲ. ಸುಮಿತ್ರನು ತನ್ನ ಆಸ್ತಿಯು ಕಲಾವತಿಗೆ ಸೇರತಕ್ಕುದೆಂದು ಉಯಿಲಿನಲ್ಲಿ ಕಾಣಿಸಿರುತ್ತಾನೆ. ಮಾಧವನ ಆಸ್ತಿಯು ನನಗೆ ಸೇರತಕ್ಕುದಾಗಿದೆ. ಇವೆರಡೂ ಈತನಿಗೆ ಪಿತ್ರಾರ್ಜಿತವು. ಇವು ಹೊರತು ಈತನಿಗೆ ಇನ್ನೇನೂ ಗತಿಯಿಲ್ಲ. ಇವನ ದುರವಸ್ಥೆಯನ್ನು ನೋಡಿ, ನಾನು ನನ್ನ ಭಾಗಕ್ಕೆ ಬಂದ ಮಾಧವನ ಆಸ್ತಿಯನ್ನು ಈತನಿಗೇ ಕೊಡಬೇಕೆಂದು ಯೋಚಿಸಿದೆನು. ಆದರೆ ಇವನು ಇವುಗಳನ್ನು ಪರಿಗ್ರಹಿಸಿ ಬದುಕತಕ್ಕವನಲ್ಲ. ಏನಾದರೂ ದುರ್ವೃತ್ತಗಳನ್ನು ನಡೆಸಿ ತಕ್ಕ ಫಲ ವನ್ನು ಅನುಭವಿಸುವನೆಂದು ತೋರುತ್ತದೆ.

ಸಮರಸಿಂಹ- ನೀನು ಹೇಳುವುದೆಲ್ಲ ನಿಜ. ಶಂಬರನ ಪೂರ್ವಾಪರಗಳನ್ನೆಲ್ಲ ನಾನು ಕೇಳಿರುವೆನು. ಅವನು ಕಾಲಾಂತರದಲ್ಲಿ ನಿನಗೆ ಮೃತ್ಯುವಾಗುವನೆಂದು ಊಹಿಸುವೆನು.

ಪರಂತಪ- ಮನುಷ್ಯ ಯತ್ನದಂತೆಯೇ ದೈವವು ನಡೆಸುವುದೆಂದು ನಂಬುವುದು ಹೇಗೆ? ದೈವವು ನನ್ನ ಕಡೆಗೆ ಅನುಕೂಲವಾಗಿರಬಾರದೆ? ನಾವು ಇದಕ್ಕೆ ಚಿಂತಿಸುವುದೇಕೆ?
  

ಹೀಗೆ ಪರಸ್ಪರ ಸಲ್ಲಾಪಗಳನ್ನು ಮಾಡುತ, ಎಲ್ಲರೂ ಪುರಪ್ರವೇಶವನ್ನು ಮಾಡಿ, ತಮ್ಮ ತಮ್ಮ ವಾಹನಗಳನ್ನಿಳಿದು, ಆ ಪುರದ ಒಂದು