ಪುಟ:ಪರಂತಪ ವಿಜಯ ೨.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೯

೭೫


ಅರ್ಥಪರ- ಆತನ ಮರಣವು ನಿನಗೆ ಅಭಿಮತವಾಗಿಯೇ ಇರುವುದಷ್ಟೆ! ಇನ್ನು ಅವನ ಆಸ್ತಿಯೆಲ್ಲ ನಿನಗೇ ಸೇರುವುದು. ಇದಕ್ಕಾಗಿ ನಾನು ಸಂತೋಷಿಸುವೆನು.
ಶಂಬರ- ಅದೇನೋ ನಿಜವೆ ! ಆದರೆ, ಸುಮಿತ್ರನು, ತನ್ನ ಆಸ್ತಿಯನ್ನೆಲ್ಲ ಕಲಾವತಿಯ ಹೆಸರಿಗೆ ಉಯಿಲು ಬರೆದಿರುವುದಾಗಿಯೂ, ಅವಳನ್ನು ವಿವಾಹವಾದರೆ ಅವನ ಆಸ್ತಿಯನ್ನು ಅನುಭವಿಸಬಹುದೆಂಬುದಾಗಿಯ ನನಗೆ ಹೇಳಿದ್ದನು.
ಅರ್ಥಪರ-ಹಾಗೋ! ಹಾಗಾದರೆ ಈ ವಿಷಯವನ್ನು ಯಾರಿಗೂ ಹೇಳಬೇಡ. ಆ ವುಯಿಲನ್ನು ಉಪಾಯಾಂತರದಿಂದ ತೆಗೆದು ಸುಟ್ಟುಬಿಡು. ಅವನ ಆಸ್ತಿಯೆಲ್ಲ ನಿನ್ನ ವಶವಾಗುವುದು.
ಶಂಬರ- ಹಾಗಾದರೆ, ಈ ಕೆಲಸವು ಮೊದಲು ಮಾಡತಕ್ಕುದಾಗಿದೆ. ಅದು ಹಾಗಿರಲಿ; ಇನ್ನೇನು ಸಮಾಚಾರ?
ಅರ್ಥಪರ - ಪರಂತಪನಿಗೂ ಕಾಮಮೋಹಿನಿ ಉಪವನದಲ್ಲಿ ನಡೆದ ಸಂಭಾಷಣೆಯನ್ನು ನಿನಗೆ ಮೊದಲೇ ತಿಳಿಸಿರುವೆನಷ್ಟೆ! ಈಚೆಗೆ ಆಕೆಯು ಸತ್ಯಶರ್ಮನ ಮನೆಯಲ್ಲಿರುವುದಾಗಿ ಕೇಳಿ, ವೇಷಾಂತರದಿಂದ ಹೋಗಿ, ಅವನ ಮನೆಯನ್ನು ಪತ್ತೆ ಮಾಡಿ, ಅಲ್ಲಿಯೇ ತಿರುಗಾಡುತ್ತಿದ್ದನು. ಅಷ್ಟರಲ್ಲಿ ಪರಂತಪನು ಬಂದು ಆ ಮನೆಯನ್ನು ಪ್ರವೇಶಿಸಿದನು. ಕೂಡಲೇ ಸತ್ಯಶರ್ಮ ಮೊದಲಾದವರು ಈತನನ್ನು ಕರೆದುಕೊಂಡು ಹೋಗಿ ಕೂರಿಸಿ ಕೊಂಡು, ಅನೇಕ ವಿಷಯಗಳನ್ನು ಕುರಿತು ಮಾತನಾಡುತಿದ್ದರು.
ಶಂಬರ- ಶಹಬಾಸ್! ಮಿತ್ರನೇ!! ಶಹಬಾಸ್ !!! ನೀನು ಬಹಳ ಚತುರನು. ಇದಕ್ಕಾಗಿ ನಿನಗೆ ನಾನು ಎಷ್ಟು ಬಹುಮಾನ ಮಾಡಿದಾಗ್ಗೂ ಕಡಮೆಯಾಗಿರುವುದು. ಇದಕ್ಕೆ ತಕ್ಕಂತೆ ನಾನು ಕೈಲಾದ ಮಟ್ಟಿಗೂ ಕೃತಜ್ಞತೆಯನ್ನು ತೋರಿಸುವೆನು. ಅವರ ಸಂಭಾಷಣೆಯಲ್ಲಿ ನೀನು ಗ್ರಹಿಸಿದ ಸಾರಾಂಶಗಳನ್ನು ಹೇಳು.
ಅರ್ಥಪರ- ಇನ್ನೇನೂ ಇಲ್ಲ ; ಸತ್ಯಶರ್ಮನು ರತ್ನಾಕರದ ಮಾಹಾತ್ಮ್ಯವನ್ನೂ ಅಲ್ಲಿನ ಭಯಾವಹವಾದ ಸಂಗತಿಗಳನ್ನೂ ವಿಸ್ತಾರವಾಗಿ ಹೇಳುತ್ತಿದ್ದನು.