ಪುಟ:ಪರಂತಪ ವಿಜಯ ೨.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ಪರಂತಪ ವಿಜಯ


ಶಂಬರ- ಅದಕ್ಕೆ ಪರಂತಪನೇನು ಹೇಳಿದನು ?
ಅರ್ಥಪರ - ಅದನ್ನು ವಿಸ್ಮಯದಿಂದ ಕೇಳುತ್ತ ಇದ್ದರೂ-ಭೀತಿಪಡದೆ, ತಾನು ಕೆಲವು ದಿವಸಗಳವರೆಗೂ ರತ್ನಾಕರದಲ್ಲೇ ವಾಸಮಾಡುತ್ತಿರುವುದಾಗಿ ಹೇಳಿದನು.
ಶಂಬರ- ಅದಾಗತಕ್ಕುದಲ್ಲ. ರತ್ನಾಕರವು ಇವನ ವಶವಾಗದಂತೆ ಮಾಡತಕ್ಕ ಕೆಲಸವು ನನ್ನದಾಗಿರಲಿ. ಇನ್ನೇನು ವಿಶೇಷ?
ಅರ್ಥಪರ- ಆ ದಿವಸವೇ ಕಾಮಮೋಹಿನಿಗೂ ಪರಂತಪನಿಗೂ ವಿಧಿ ಪೂರ್ವಕವಾಗಿ ವಿವಾಹವು ನಡೆಯಿತು.
ಈ ಮಾತನ್ನು ಕೇಳಿದಕೂಡಲೆ, ಶಂಬರನು ಮೂರ್ಛಿತನಾಗಿ, ಸ್ವಲ್ಪ ಹೊತ್ತಿನ ಮೇಲೆ ಚೇತರಿಸಿಕೊಂಡು, ಮಿತಿಮೀರಿದ ಕೋಪಾವೇಶದೊಡನೆ, ಅರ್ಥಪರನನ್ನು ನೋಡಿ “ಎಲೈ ಕಪಟಿಯೆ! ನೀನು ನನಗೆ ಬಹಳ ಮೋಸವನ್ನು ಮಾಡಿದೆ. ಇವರ ವಿವಾಹ ಪ್ರಾರಂಭ ಕಾಲದಲ್ಲಿ ನೀನು ನನಗೇಕೆ ತಿಳಿಸದೆ ಹೋದೆ? ನಾನು ಆ ಕ್ಷಣದಲ್ಲಿ ವಿವಾಹವನ್ನು ನಿಲ್ಲಿಸುತಿದ್ದೆನು ಈಗ ನನ್ನ ಪ್ರಯತ್ನಗಳೆಲ್ಲವೂ ನಿಪ್ಪಲವಾದುವಲ್ಲಾ! ಅವರಿಬ್ಬರಿಗೂ ವಿವಾಹವಾದುದು ನಿಜವೇ? ನೀನು ನೋಡಿದೆಯಾ? ಎಂದನು.
ಅರ್ಥಪರ- ಅಯ್ಯಾ! ಕೋಪಿಸಬೇಡ; ಕೇಳು. ವಿವಾಹ ಪ್ರಾರಂಭದಲ್ಲಿ ನಾನು ನಿನಗೆ ತಿಳಿಸಬೇಕೆಂದು ಬಂದೆನು. ಆಗ ನೀನು ಮನೆಯಲ್ಲಿರಲಿಲ್ಲ. ಒಂದು ಚೀಟಿಯನ್ನು ಬರೆದು ನಿನ್ನ ಮೇಜಿನ ಮೇಲೆ ಇಟ್ಟು, ಮುಂದಿನ ಸಂಗತಿಗಳನ್ನು ಪರೀಕ್ಷಿಸುವುದಕ್ಕಾಗಿ ನಾನು ಹೊರಟುಹೋದೆನು. ಇವರಿಬ್ಬರ ವಿವಾಹವೂ ನಿರ್ವಿಘ್ನವಾಗಿ ನೆರವೇರಿತು. ನೆರೆಹೊರೆಯವರೆಲ್ಲರೂ ಬಂದಿದ್ದರು. ವಿವಾಹದ ಕರಾರೂ ಬರೆಯಲ್ಪಟ್ಟಿತು. ಅದನ್ನು ಸತ್ಯಶರ್ಮನೇ ಬರೆದು, ಇನ್ನೂ ತನ್ನ ಬಳಿಯಲ್ಲೇ ಇಟ್ಟುಕೊಂಡಿರುವನು.
ಶಂಬರನು ಈ ಮಾತನ್ನು ಕೇಳಿದಕೂಡಲೆ ತನ್ನ ಮೇಜನ್ನು ಹುಡುಕಲು, ಅರ್ಥಪರನು ಬರೆದಿಟ್ಟಿದ್ದ ಕಾಗದವು ಸಿಕ್ಕಿತು. ಇದನ್ನು ನೋಡಿ, ತನ್ನನ್ನೇ ತಾನು ನಿಂದಿಸಿಕೊಂಡು "ಎಲೈ ಅರ್ಥಪರನೇ! ಈಗ ಕೆಲಸವು ಕೈ ಮೀರಿತು. ಈ ವಿವಾಹದ ಸಂಗತಿಯು ಯಾರಿಗೂ ತಿಳಿಯಕೂಡದು. ಪರಂತಪನನ್ನು ಕೂಡಲೇ ಕೊಂದು, ಕಾಮಮೋಹಿನಿಗೆ ನನ್ನಲ್ಲಿ ಅನುರಾಗ