ಪುಟ:ಪೈಗಂಬರ ಮಹಮ್ಮದನು.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಮರಣ ಹೊಂದಿದಳು. ಗರ್ಭಿಣಿಯಾಗಿದ್ದ ಆಕೆಯ ಮರಣಕ್ಕೆ ಆ ಪಾಪಿಯೇ ಕಾರಣವೆಂದು ತಿಳಿದಿದ್ದರೂ, ಅಂಥವನು ಕ್ಷಮೆಯನ್ನು ಬೇಡಿದಾಗ, ಮಹಮ್ಮದನು ಆ ಅಧಮನನ್ನೂ ಕೃಮಿಸಿ, ಎಲ್ಲರನ್ನೂ ಆಶ್ಚರ್ಯಮಗ್ನರನ್ನಾಗಿ ಮಾಡಿದನು. ಅಸಾಧಿಗಳಿಗೆಲ್ಲ ಹೀಗೆ ಕ್ಷಮೆಯನ್ನು ತೋರಿಸಿದುದರಿಂದ ಜನ ರೆಲ್ಲರಿಗೂ ಮಹಮ್ಮದನಲ್ಲಿ ಪ್ರೀತಿ ಗೌರವಗಳು ಹೆಚ್ಚಿದುವು. ಮಕ್ಕಾ ನಗರದವರಿಗೆ ಆತನಲ್ಲಿದ್ದ ದ್ವೇಷ ಬು ಯು ಪರಿಣಾಮ ಫಲ ಎಲ್ಲಿಯೋ ಮಾಯವಾಗಿ ಹೋಗಿ, ಜನರು ತಾನಾ ಗಿಯೇ ತಂಡೋಪತಂಡವಾಗಿ ಬಂದು ಇಸ್ಕಾಂ ಮತವನ್ನವಲಂಬಿಸಿದರು. ಈ ಮತಕ್ಕೆ ಸೇರಿಲ್ಲದವರೂ ಅನೇಕ ಮಂದಿಯಿದ್ದರೂ, ತನ್ನ ಮತಕ್ಕೆ ಸೇರಲಿಲ್ಲವೆಂಬ ಕಾರಣದ ಮೇಲೆಯೇ ಮಹಮ್ಮದನು ಅವರಲ್ಲಿ ಯಾರೊಬ್ಬರಿಗೂ ನಿರ್ದಯನಾಗಿರಲಿಲ್ಲ. ಅಂತು, ಮಕ್ಕಾ ನಗರ ನಿವಾಸಿಗಳಲ್ಲಿ ಬಹು ಮಂದಿ ಇಸ್ಲಾಂ ಮತವನ್ನವಲಂಬಿ ಸಿದರು ; ಉಳಿದವರೂ ಕೂಡ ಮಹಮ್ಮದನ ಸದ್ಗುಣಗಳನ್ನು ಶ್ಲಾನ್ ಸುತ್ತ ಅವನಲ್ಲಿ ಸ್ನೇಹ ಭಾವದಿಂದಲೇ ವರ್ತಿಸುತ್ತಿದ್ದರು. ಅವರು ಬರಿಯ ವೇಷವನ್ನು ಕಟ್ಟಿರಲಿಲ್ಲವೆಂಬುದಕ್ಕೆ ಹುಸೇನ್ ಕದನದಲ್ಲಿ ಅವರು ಮಹಮ್ಮದನ ಸೈನ್ಯದಲ್ಲಿ ಸೇರಿ ಪರಾಕ್ರಮದಿಂದ ಯುದ್ಧ ಮಾಡಿದುದೇ ಸಾಕ್ಷಿ. ಮಹಮ್ಮದನು ಮೆದೀನಾ ನಗರವನ್ನು ಬಿಟ್ಟು ಒಂದು ತಿಂಗಳೊಳ ಗಾಗಿಯೇ ಹುನೇನ ಕದನವ ಕೈಗಟ್ಟಿತು. ಹವಾಜಿನ್ ಬುಡಕಟ್ಟಿ ನವರು ಮಹಮ್ಮದನ ಮೇಲೆ ಯುದ್ಧ ಮಾಡಲು ಹುನೇನ್ ಕದನ ಸೈನ್ಯವನ್ನು ಜೊತೆಗೊಳಿಸಿ ತಾಕೀಫ್ ಮುಂತಾದ ಇತರ ಕೆಲವು ಗುಂಪುಗಳವರನ್ನೂ ತಮ್ಮ ಜೊತೆಗೆ ಸೇರಿಸಿಕೊಂಡು ಯುದ್ಧ ಸನ್ನಾಹ ಮಾಡತೊಡಗಿದರು. ಮಕ್ಕಾ ನಗರವು ಮುಹಮ್ಮದನ ಸ್ವಾಧೀನವಾಗಿ ಅನೇಕರು ಇಸ್ಲಾಂ ಮತಕ್ಕೆ ಸೇರಿ ದುದೇ ಅವರ ಹೊಟ್ಟೆಯ ಕಿಚ್ಚಿಗೆ ಕಾರಣವಾಗಿ, ಸರ್ವ ಸಾಹಸದಿಂದಲೂ