ಪುಟ:ಪ್ರತಾಪರುದ್ರದೇವ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕೆ ೧ ಸ್ಥಾನ . ತಿರುವದು, ನನ್ನ ಗಾಯಗಳು ಆದರಣೆಯನ್ನ ಸೆಕ್ಷಿಸುತ್ತಿರುವವು. ವಿಜಯಧ್ವಜ -ನಿನ್ನ ಯೋಗ್ಯತೆಯನ್ನು ನಿನ್ನ ಮಾತುಗಳುಮಾತ್ರ ವಲ್ಲದೆ ನಿನ್ನ ಗಾಯಗಳೂ ತೋರಿಸುತ್ತಿರುವವು. ಇವೆರಡರಿಂ ದಲು ನಿನ್ನ ಘನತೆ ವ್ಯಕ್ತವಾಗುತ್ತಿರುವದು. ನಿಮ್ಹಾರಾದರು ಇವ ನನ್ನು ವೈದ್ಯಶಾಲೆಗೆ ಕರೆದೊಯ್ಯುದು, (ಊಳಿಗದವನು ಪದಾತಿ ಯನ್ನು ಕರೆದುಕೊಂಡು ಹೋಗುವನು ) ಪ್ರವೇಶ - ನಂದರಾಜ, ಅಕ್ಕಿ ಬರುತ್ತಿರುವವರಾರು ? ಪ್ರತಾಪರುದ್ರದೇವ.- ಜೆರಾ ! ಈ ಕೃತವರಾದ ನಂದರಾಜರಂತೆ ಕಾಣುವದು. ನಂದರಾಜ – ಪ್ರಭುಗಳಿಗೆ ದೈವಾನುಗ್ರಹವಿರಲಿ, ವಿಜಯಧ್ವಜ -ಎಲೈ ಮಿತ್ರನ! ಸುಖಾಗಮನವೆ ? ನೀನೀಗೆಲ್ಲಿಂದ ಬಂದಿರುವೆ? ನಂದರಾಜ -ಜಿಯಾ ! ಮುನವಳ್ಳಿಕಣವೆಯಿಂದ ಬಂದಿರುವನು. ಅಲ್ಲಿ ವಿದರ್ಭನ ಪತಾಕೆಗಳು, ಸೂ‌ಕಿರಣಗಳಿಗೆಡೆಗೊಡದೆ ನಮ್ಮ ಸೈನ್ಯಕ್ಕೆ ಭಯೋತ್ಪಾತವನ್ನುಂಟುಮಾಡುತ್ತಿದ್ದವು. ಅದರಜೊತೆಗೆ ನಮಗೆ ಸಾಮಂತನಾಗಿದ್ದ ಬರ್ಬರನು ಕೂಡ :- ಕಂದ | ಎಣಿಸಲಾಗದ ಬಲದಿಂ || ರಣದೋಳ್ಳರೆಯುವ ವಿದರ್ಭಸೈಸ್ಟವಸೇರ್ದಾ |