ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬನಶಂಕರಿ ೪
ಹೊಲಗಳಾಚೆ ದಟ್ಟನೆಯ ಮರಗಳ ನಡುವೆ ಕಾಲುಹಾದಿ ಹಿಡಿದು ಅವರಿಬ್ಬರೂ ನಡೆದು ಬರು ತ್ತಿರಬೇಕು- ಅಂಚೆಯವನು ಮತ್ತು ಅವರು.. ಸ್ವಲ್ಪ ಹೊತ್ತಿನಲ್ಲಿ ಪಟಾಕಿ ಸುಟ್ಟು ಮುಗಿಯಿತು ಅತ್ತೆ ಅಡುಗೆ ಮನೆಗೆಂದು ಒಳ
ಹೋದರು ,
ಮಾವ ಎಳೆಯರನ್ನು ಉದ್ದೇಶಿಸಿ "ಇನ್ನು ಸಾಕು, ಬನ್ನಿರೋ ಒಳಕ್ಕೆ" ಎಂದರು. ಅಮ್ಮಿ ಅಂಗಳದ ಬಲಮೂಲೆಯಲ್ಲಿ ತಟನಿಗಳು ಮರೆಮಾಡಿದ್ದ ಬಚ್ಚಲು ಮನೆಗೋದಳು, ಮುಂಜಾವದ ಹಬ್ಬದ ಸ್ನಾನಕ್ಕೆಂದು ನೀರು ಹೊತ್ತು ನಿಂತ್ತಿತ್ತು ದೊಡ್ಡ ಗುಡಾಣ. ಅತ್ತೆ ಅದರ ಸುತ್ತಲೂ ಚಿತ್ತಾರ ಬರೆದಿದ್ದರು. ಅಮ್ಮಿ ಅದರ ಕೊರಳಿಗೆ ಹೂವಿನ ಹಾರಕಟ್ಟಿದಳು. ...ಬೆಳಗು ಮುಂಜಾನೆ ಅತ್ತೆ ಎಲ್ಲರನ್ನೂ ಬೇಗಎಬ್ಬಿಸಿದರು.ಆಬಳಿಕ ದೇವರ ದೀಪದ ಮುಂದೆ ಕುಳ್ಳರಿಸಿ ಹಸಿ ಗರಿಕೆ ಹುಲ್ಲಿನ ಚಿಗುರಿನಿಂದ ಅಮ್ಮಿ ಮೂರುಬಾರಿ ಅವನ ಮೈಗೆ ಎಣ್ಣೆ
ಇಳಿಸಬೇಕು. ಆಮೇಲೆ ಆತ ಬೇಡವೆನ್ನದೇ ಹೋದರೆ ಆ ಮೈ ಕೈಗಳಿಗೆ ತಾನೇ ಎಣ್ಣೆ ತೀಡಬೇಕು.
ಆ ಯೋಚನೆಯಿಂದಲೇ. ಗುಡಾಣವನ್ನು ಮುಟ್ಟಿನಿಂತಿದ್ದ ಅಮ್ಮಿಯ ಮುಖ ಕೆಂಪಗಾಯಿತು ಮದುವೆಯಾದೊಡನೆಯೇ ಮಾವನ ಮನೆಗೆ ಬಂದಿದ್ದಳು ಅಮ್ಮಿ-ತಾಯಿ ತಂದೆಯರಿಲ್ಲದ ತಬ್ಬಲಿ ಹುಡುಗಿ. ತವರಿನಲ್ಲಿ ಒಂದೆ ಉಳಿದವನೊಬ್ಬನೇ ವಯಸಿನಲ್ಲಿ ನಾಲ್ಕುವರುಷ ಹಿರಿಯನಾದ ಆಕೆಯ ಅಣ್ಣ. ಗಂಡನ ಮನೆಗೆ ಬಂದ ಪುಟಾಣಿ ಹುಡುಗಿ ಅಮ್ಮಿ ಗೃಹಲಕ್ಷ್ಮಿಯಾದಳು; ಮಾವ ಅತ್ತೆಯರ ಪ್ರೀತಿಪಾತ್ರಳಾದ ಮುದ್ದಿನ ಸೊಸೆಯಾದಳು. ಇದು ಈಮನೆಯ ಎರಡನೇ ದೀಪಾವಳಿ, ಕಳೆದ ಬಾರಿ ಗಂಡ ಊರಲ್ಲೇ ಇದ್ದ ಹದಿನೇಳರ ಆ ಅಣ್ಣ ತಾನು ಮದುವೆಯಾದ ಸದ್ಗೃಹಸ್ತನೆಂಬುದನ್ನೂ ಮರೆತು.ತಮ್ಮಂದಿರ ಜತೆಸೇರಿ ಪಟಾಕಿ ಸುಟ್ಟಿದ್ದ,ಅದು ಅವರತಂದೆ ಹಿಂದೆಯೇ ನಗರದಿಂದ ತಂದು ತೆಗೆದಿರಿಸಿದ್ದ ಪಟಾಕಿ... ಆ ಸಾರೆಯೂ ಗಂಡನಿಗೆ ಎಣ್ಣೆ ತೀಡೆಂದು ಅತ್ತೆ ತನಗೆ ಹೇಳಿದ್ದರು, ಆದರೆ ತನಗೆ ನಾಚಿಕೆಯಾಗಿತ್ತು ಗಂಡನಿಗೂ ನಾಚಿಕೆಯಾಗಿತ್ತು,ಗರಿಕೆ ಹುಲ್ಲಿನ ಶಾಸ್ತ್ರ ಮುಗಿದೊಡನೆ ತಲೆ ತಗ್ಗಿಸಿ ಕೇಳಿಯೂ ಕೇಳಿಸದ ದ್ವನಿಯಲ್ಲಿ "ನಾನೇ ಹಚ್ಕೋತೀನಿ" ಎಂದಿದ್ದ. ಇಲ್ಲ ಈಸಾರೆ ಹಾಗಾಗಬಾರದು. ಅತ್ತೆಯ ಸ್ವರ ಒಳಗಿಂದ ಬಂತು "ಅಮ್ಮಿ ಎಲ್ಲೋದೆಯೆ" "ಬಂದೇ ಅತ್ತೆ.." ಪಡಸಾಲೆಯಲ್ಲಿ ನಾಣಿ ಮತ್ತು ರಂಗ "ಹಾಗಲ್ಲಹೀಗೆ" ಎಂದುಏರುದನಿಯಲ್ಲಿ ಏನೋ ಚರ್ಚೆ ನಡೆಸಿದ್ದರು. ಅವರತಂದೆ ಬಂದು ಚಾಪೆಯ ಮೇಲೆ ಕುಳಿತೊಡನೆ ರಂಗ ಕೇಳಿದ; "ಅಪ್ಪಯ್ಯ ಕಥೆ ಹೇಳು ಅಪ್ಪಯ್ಯ'