ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬನಶಂಕರಿ ೧೦
ಎಚ್ಚರಗೊಂಡ ಎಳೆಯ ಹುಡುಗರು ತಾಯಿ- ರೋದನ ಕೇಳುತ್ತಲೇ ತಾವೂ ಅಳುತ್ತ ಬಂದರು.... ..ಚೇತರಿಸಿಕೊಂಡ ಮಾವ ಹೇಳುತಿದ್ದರು; "ಅಳಬೇಡಿ ಯಾರೂ ಅಳಬೇಡಿ ಅಳಬಾರದು !" ಹಾಗೆ ಹೇಳುತ್ತಾ ಅವರು ಮಾತ್ರ ಅಳುತಿದ್ದರು ಗೊಳೋ ಎಂದು. ಮುನಿಯನೊಬ್ಬನೇ ಮಾತು ಬಂದವನಂತೆ ತಿರುತಿರುಗಿ ಹೇಳಿದ; "ಮೂರು ದಿವಸದ ಜ್ವರ...ದಾಕ್ಟಾರು ಬಂದ್ರು..ಎಲ್ಲಾ ಬಂದ್ರು...ನಮ್ಮಪ್ಪ ಉಳೀಲಿ ಲ್ಲಪ್ಪ...ಎಂಗ್ಮಾಡ್ದ ಆ ಪರಮಾತ್ಮ!.. ಎಲ್ಲ ಕಡೆಗಳಿಂದ ರೋದನದ ಸ್ವರಗಳು ಹೊರಟು ಒಂದರೊಳಗೊಂದು ಬೆರೆತು ಏಕ ಸ್ವರವಾಗಿ ಗಗನ ಬೇದಿಸುತ್ತಾ ಮೇಲೇರಿದವು. ನಗುತ್ತಲೇ ಇದ್ದವು ಸಾಲು ದೀಪಗಳು, ಆಸೊಡರುಗಳೆಲ್ಲಾ ಕಿರುನಾಲಿಗೆಗಳನ್ನು ಅತ್ತಿತ್ತ ಚಾಚುತ್ತಾ ಅಳುವವರನ್ನು ಅಣಕಿಸುತ್ತಿದ್ದವು. ದೀಪಾವಾಳಿಯ ಸಂಬ್ರಮದಲ್ಲಿ ಮೈಮರೆತಿದ್ದ ಆ ಪುಟ್ಟ ಹಳ್ಳಿ ಅಯ್ಯನವರ ಮನೆಯ ರೋದನ ಕೇಳಿ ಗಾಬರಿಗೊಂಡಿತು, ಜನರು ಒಬ್ಬರ ಮೇಲೊಬ್ಬರಾಗಿ ನಾಲ್ಕು ಮೂಲೆಗಳಿಂದ ಅಲ್ಲಿಗೆ ಬಂದರು. ಯಾರೋ ಎಲ್ಲಿಂದಲೋ ಎಸೆದ ಆಕಾಶ ಬಾಣವೊಂದು ಸುಯ್ ಎಂದು ಎತ್ತರಕ್ಕೆ ಏರಿ ತಿರಿ-ತಿತ್ತಿರಿ-ತಿರಿ-ತಿಂ ಎಂದು ಸ್ವರ ಅಡಗಿ ಬೆಳಕು ಅಳಿದು, ಕತ್ತಲೆಯೊಡನೆ ಲೀನವಾಯಿತು. ೨
"ಲಕ್ಷಣ. ಓ ಲಕ್ಷಣ" ಸಂಜೆಯ ಕತ್ತಲು ಕವಿದು ಆ ಮನೆಯೊಳಗಿಂದ ನರಳುವ ಕ್ಷೀಣ ಸ್ವರ ಮಾತ್ರ ಕೇಳಿಸುತ್ತಿತ್ತು ಹಳ್ಳಿಯ ಜೋಯಿಸರ ಮೂರನೆಯ ಹೆಂಡತಿ ಹೊರಗೆ ನಿಂತು ಕರೆಯುತ್ತಿದ್ದಳು; "ಲಕ್ಷಣಾ-ಓ ಲಕ್ಷಣ.." ಅಮ್ಮಿ ಮೂಗು ಒರೆಸಿಕೊಳ್ತಾ ಕಣ್ಣೊರಿಸಿ ಬಾಗಿಲ ಹಿಂಬದಿಯಿಂದಲೇ ಕೇಳಿದಳು; "ಯಾರು?: "ನಾನು ಸರಸ್ವತಿ-ಹ್ಯಾಗಿದೆ ನಿಮ್ಮತ್ತೆಗೆ?" ಉಸಿರು ಕಟ್ಟಿ ಬಂದು ಉತ್ತರ ಕೊಡಲಾರದ ಅಮ್ಮಿ ಒಂದು ಕ್ಷಣ ನಿಂತಳು. "ಈಗ ಸ್ವಲ್ಪ ವಾಸೀನ? ಔಷದಿ ಕೊಟ್ಟಿದ್ದೀರ?" "ಕೊಟ್ಟಿದೆ ಕಾಯಿಲೆ ಹಾಗೇ ಇದೆ ಸರಸ್ವತಮ್ನೋರೆ" "ಅಳಬೇಡಮ್ಮ ಎಲ್ಲಾ ಗ್ರಹಚಾರ, ಏನ್ಮಾಡೋಕಾಗುತ್ತೆ?"