ಪುಟ:ಬನಶಂಕರಿ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೧೦

    ಎಚ್ಚರಗೊಂಡ ಎಳೆಯ ಹುಡುಗರು ತಾಯಿ- ರೋದನ ಕೇಳುತ್ತಲೇ ತಾವೂ ಅಳುತ್ತ      ಬಂದರು....
    ..ಚೇತರಿಸಿಕೊಂಡ ಮಾವ ಹೇಳುತಿದ್ದರು;
    "ಅಳಬೇಡಿ ಯಾರೂ ಅಳಬೇಡಿ ಅಳಬಾರದು !"
    ಹಾಗೆ ಹೇಳುತ್ತಾ ಅವರು ಮಾತ್ರ ಅಳುತಿದ್ದರು ಗೊಳೋ ಎಂದು.
    ಮುನಿಯನೊಬ್ಬನೇ ಮಾತು ಬಂದವನಂತೆ ತಿರುತಿರುಗಿ ಹೇಳಿದ;
    "ಮೂರು ದಿವಸದ ಜ್ವರ...ದಾಕ್ಟಾರು ಬಂದ್ರು..ಎಲ್ಲಾ ಬಂದ್ರು...ನಮ್ಮಪ್ಪ ಉಳೀಲಿ
ಲ್ಲಪ್ಪ...ಎಂಗ್ಮಾಡ್ದ ಆ ಪರಮಾತ್ಮ!..
    ಎಲ್ಲ ಕಡೆಗಳಿಂದ ರೋದನದ ಸ್ವರಗಳು ಹೊರಟು ಒಂದರೊಳಗೊಂದು ಬೆರೆತು ಏಕ 
ಸ್ವರವಾಗಿ ಗಗನ ಬೇದಿಸುತ್ತಾ ಮೇಲೇರಿದವು.
    ನಗುತ್ತಲೇ ಇದ್ದವು ಸಾಲು ದೀಪಗಳು, ಆಸೊಡರುಗಳೆಲ್ಲಾ ಕಿರುನಾಲಿಗೆಗಳನ್ನು ಅತ್ತಿತ್ತ 
ಚಾಚುತ್ತಾ ಅಳುವವರನ್ನು ಅಣಕಿಸುತ್ತಿದ್ದವು.
    ದೀಪಾವಾಳಿಯ ಸಂಬ್ರಮದಲ್ಲಿ ಮೈಮರೆತಿದ್ದ ಆ ಪುಟ್ಟ ಹಳ್ಳಿ ಅಯ್ಯನವರ ಮನೆಯ
ರೋದನ ಕೇಳಿ ಗಾಬರಿಗೊಂಡಿತು, ಜನರು ಒಬ್ಬರ ಮೇಲೊಬ್ಬರಾಗಿ ನಾಲ್ಕು ಮೂಲೆಗಳಿಂದ
ಅಲ್ಲಿಗೆ ಬಂದರು.
    ಯಾರೋ ಎಲ್ಲಿಂದಲೋ ಎಸೆದ ಆಕಾಶ ಬಾಣವೊಂದು ಸುಯ್ ಎಂದು ಎತ್ತರಕ್ಕೆ ಏರಿ
ತಿರಿ-ತಿತ್ತಿರಿ-ತಿರಿ-ತಿಂ ಎಂದು ಸ್ವರ ಅಡಗಿ ಬೆಳಕು ಅಳಿದು, ಕತ್ತಲೆಯೊಡನೆ ಲೀನವಾಯಿತು.
                              
    "ಲಕ್ಷಣ. ಓ ಲಕ್ಷಣ"
    ಸಂಜೆಯ ಕತ್ತಲು ಕವಿದು ಆ ಮನೆಯೊಳಗಿಂದ ನರಳುವ ಕ್ಷೀಣ ಸ್ವರ ಮಾತ್ರ ಕೇಳಿಸುತ್ತಿತ್ತು
    ಹಳ್ಳಿಯ ಜೋಯಿಸರ ಮೂರನೆಯ ಹೆಂಡತಿ ಹೊರಗೆ ನಿಂತು ಕರೆಯುತ್ತಿದ್ದಳು;
    "ಲಕ್ಷಣಾ-ಓ ಲಕ್ಷಣ.."
    ಅಮ್ಮಿ ಮೂಗು ಒರೆಸಿಕೊಳ್ತಾ ಕಣ್ಣೊರಿಸಿ ಬಾಗಿಲ ಹಿಂಬದಿಯಿಂದಲೇ ಕೇಳಿದಳು;
   "ಯಾರು?:
   "ನಾನು ಸರಸ್ವತಿ-ಹ್ಯಾಗಿದೆ ನಿಮ್ಮತ್ತೆಗೆ?"
   ಉಸಿರು ಕಟ್ಟಿ ಬಂದು ಉತ್ತರ ಕೊಡಲಾರದ ಅಮ್ಮಿ ಒಂದು ಕ್ಷಣ ನಿಂತಳು.
   "ಈಗ ಸ್ವಲ್ಪ ವಾಸೀನ? ಔಷದಿ ಕೊಟ್ಟಿದ್ದೀರ?"
   "ಕೊಟ್ಟಿದೆ ಕಾಯಿಲೆ ಹಾಗೇ ಇದೆ ಸರಸ್ವತಮ್ನೋರೆ"
   "ಅಳಬೇಡಮ್ಮ ಎಲ್ಲಾ ಗ್ರಹಚಾರ, ಏನ್ಮಾಡೋಕಾಗುತ್ತೆ?"