ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬನಶಂಕರಿ ೩
ಕೊನೇಲಿ ನಿಂತ್ಕೊಂಡು ಬಾರಿಸಿ" ಹೂನಪ್ಪಯ್ಯ ಹಾಗೇ ಮಾಡ್ತೀನಿ" ರಂಗ ಮೂಲೆಯಿಂದ ಬಿಚ್ಚಿಕೊಂಡು ಪಟಾಕಿಯನ್ನು ಮೊದಲು ಹಾರಿಸಿದ,ಅದು ಆರಂಭ, ಆ ಬಳಿಕ ಹುಡುಗರ ಹುಚ್ಚು ಕಿರಿಚಾಟದೊಡನೆ ಹಿರಿಯರ ನಗೆ ಸಂತೋಷದೊಡನೆ ಅಮ್ಮಿಯ ಅನಂದೋತ್ಸಾಹ ಪಟಾಕಿಗಳು ಚಟ್ ಚಟಿಲೆಂದವು, ಸುರುಸುರು ಬಾಣಗಳು ಆಕಾಶಕ್ಕೆ
ನೆಟ್ಟವು ನಕ್ಷತ್ರಕಡ್ಡಿಗಳು ಮೌನವಾಗಿ ಬಣ್ಣಬಣ್ಣವಾಗಿ ಉರಿದು ಸಾವಿರ ನಕ್ಷತ್ರಗಳನ್ನು ಉಗುಳಿದವು.
ಆ ಬೆಳಕು ತಾರೆಗಳನೆಲ್ಲಾ ಅಂಗೈಯಲ್ಲಿ, ಸೆರಗಿನಲ್ಲಿ, ಹಿಡಿಯಬೇಕೆಂಬ ಬಯಕೆ ಅಮ್ಮಿಗೆ ಆದರೆ ಗೃಹಿಣಿಯಾದ ಆಕೆ ಹಾಗೆ ಮಾಡಲು ಸ್ವತಂತ್ರಳಲ್ಲ ಇಷ್ಟಿದ್ದರೂ ಒಂದು ವಿಷಯದಲ್ಲಿ ಮಾತ್ರ ಯಾರಿಗೂ ಇಲ್ಲದ ಹೆಮ್ಮೆ ಅವಳ ಆಸ್ತಿಯಾಗಿತ್ತು ಪೇಟೆಯಿಂದ ತನ್ನ ಪತಿದೇವರು ಕಳುಸಿದ್ದಲ್ಲವೇ,ಈದಿನ ಪಟಾಕಿಯಾಟ ಸಾದ್ಯವಾದ್ದದ್ದು? ಆ ಮಧ್ಯಾಹ್ನ ಬಲು ಜಂಬದಿಂದ ನಾಣಿ ಹೇಳಿದ್ದ; "ಐ ಅಮ್ಮ.. ಇವತ್ತು ಸಾಯಂಕಾಲ ಎಂಥೆಂಥ ಪಟಾಕಿ ಹಾರಿಸ್ತೀವಿ ಗೊತ್ತಾ" ರಂಗ ರಾಗವೆಳೆದಿದ್ದ; "ಆನೆ ಪಟಾಕಿ....ಕುದುರೆ ಪಟಾಕಿ.." ಅಮ್ಮಿಗೆ ತನಗೆ ಆ ಬಾಗ್ಯವಿಲ್ಲವೆಂಬ ದು:ಖ ಒಂದೆಡೆ: ಕಳುಹಿಸಿಕೊಟ್ಟದ್ದು ತನ್ನ ಗಂಡ ನೆಂದು ಆ ಮೈದುನರು ಹೇಳಲಿಲ್ಲವೆಂಬ ಸಿಟ್ಟು ಒಂದೆಡೆ, ಆ ಭಾವನೆಗಳಿಂದ ನೊಂದು ಅವಳ ಸುಂದರ ಮುಖ ಸಿಂಡರಿಸಿತು . ನೋವಿನ ದ್ವನಿಯಲ್ಲಿ ಒಂದು ಪ್ರಶ್ನೆ; ಹಾಗೆ "ಆ ಪಟಾಕಿ ಎಲಿಂದ್ಬಂತೋ?" "ಚಿಕ್ಕಮಗಳೂರಿಂದ." "ಹುಂ ಯಾರು ಕಳಿಸ್ಕೊಟ್ಟೋರು?" "ನಮ್ಮಣ್ಣ ಕಣೇ-ನಮ್ಮಣ್ಣ|" ಮತ್ತೆ ಸೋಲು ಅಮ್ಮಿಗೆ ರಾತ್ರೆ ಅಂಚೆಯವನ ಜತೆಗೂಡಿ ಅವರು ಬರುವರು;ಆಗ ಸಮಯ ಸಾದಿಸಿ ಗುಟ್ಟಾಗಿ ಅವರಿಗೆ,ತನಗಾದ ಅವಮಾನದ ವರದಿಯೊಪ್ಪಿಸಬೇಕು-ಎಂದು ಅಮ್ಮಿ ಯೋಚಿಸಿದಳು. ಹಾಗೆ ಎಷ್ಟೋಂದು ಸಾರಿ ಯೋಚಿಸಿಲ್ಲ! ಆದರೆ ಗಂಡ ಬಂದಾಗ ಎಂದೂ ಅಂತಹ ಮಾತನ್ನು ಅಮ್ಮಿ ಹಾಡಿದವಳಲ್ಲ. ಅಷ್ಟೆಕೆ? ಕ್ಶಣಕಾಲ ಎಂದಾದರೊಮ್ಮೆ ಗೋಪ್ಯದಲ್ಲಿ ಸಂದಿಸಿದಾಗ- ಹೂಂ ಹೊರತಾಗಿ ಹೆಚ್ಚು ಮಾತನ್ನೆ ಅವಳು ಆಡಿದವಳಲ್ಲ. "..ಅವರ ಆಗಮನ...ಸಾಲುದೀಪಗಳ ಬೆಳಕಿನ ಆವರಣದೊಳಗೆ ಆ ಹುಡುಗರಿಬ್ಬರೂ ಹುಚ್ಚೆದ್ದು ಕುಣಿಯುತ್ತಿದ್ದಾರೆ, ಕತ್ತಲು-ಬೆಳಕುಗಳ ನಡುವೆ ಕಣ್ಣುಮುಚ್ಚಾಲೆಯಾಟ ನಡೆದಿದೆ ಅದನ್ನುಅಮ್ಮಿ ಬಾಗಿಲ ಬಳಿ ನಿಂತು ನೋಡುತ್ತಿದ್ದಾಳೆ.ಹಾಗೆ ನೋಡುತ್ತಿದ್ದರೂ ಅವಳ ದೃಷ್ಟಿ ಮುಂದಕ್ಕೆ ಹರಿದಿದೆ-ಮುಂದಕ್ಕೆ ದೂರ...ಗುಡ್ಡ ಬೆಟ್ಟಗಳನ್ನು ದಾಟಿ.