ಪುಟ:ಬೆಳಗಿದ ದೀಪಗಳು.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಡೆಯಾಳು ಭೂಪಾಲ 11 ಗHequLu - Whyagarahley" ETAPE: Ria Hafa Agai #1TET I ಹೊಳೆಯುವದೆಲ್ಲ ಒಳಿಶಾದದ್ದೆಂದು ಹೇಳಲಾಗದ ಷ್ಟೆ? ಕೀಳವಾಗಿ ಕಾಣುವದಾದರೂ ಕೆಟ್ಟದ್ದೆಂದು ನಿಶ್ಚಯವಾಗಿ ಹೇಳಲಾಗದು. ಕಣಿ ಗೆ ನುಣ್ಣಗಾಗಿ ಕಾಣುವ ಕೆಲವೊಂದು ಫಲವು ತಿಂದವರ ಪ್ರಾಣಹರಣವನ್ನೇ ಮಾಡುವದು ; ರ್ಕಮಾವು ಕಣ್ಣಿಗೆ ಕೆಟ್ಟದ್ದಾಗಿ ಕಂಡರೂ ಅದರ ರಸವು ಅಮೃತೋಷಮವಾಗಿರುವದು, ಅದರಂತೆಯೇ ಮನುಷ್ಯರ ಗುಣಾವಗುಣ ಗಳ ನಿರ್ಣಯವನ್ನು ಅವರವರ ಸ್ಥಾನಮಾನಗಳ ಮೇಲಿಂದಾಗಲಿ, ಬಣ್ಣ ರೂಪಗಳಿ೦ದಾಗಲಿ, ವಿದ್ಯಾ ವಿಭವಗಳಿ೦ದಾಗಲಿ ಮಾಡಲಾಗದು. ಕನಕದ ಸಿಂಹಾಸನದೊಳ್ | ಶುನಕನ ತಂದಿರಿಸಿ ಪಟ್ಟಗಟ್ಟಲು ಮತ್ತಂ || ಮನದಣಿಯೆ ಬೊಗಳ್ಳು ದಲ್ಲದೆ | ಘನತೆಯನರಿದಪುದೆ ಮುಕ್ತಿ ರಾಮೇಶ್ವರನೆ | ಸಿಂಹಾಸನವನ್ನು ದೂಷಿಸುವವರ ರಾಜಪದಕ್ಕಿಂತಲೂ ಉದಾರ ಬುದ್ಧಿಯವನಾದ ಸತ್ವಶಾಲಿಯ ನೀಚಸ್ಥಿತಿಯು ಎಷ್ಟಾದರೂ ಪ್ರಶಂಸನೀಯ ವಾದದ್ದು. ಈ ಬಗ್ಗೆ ಒಂದು ಕಥೆ ಹೇಳುತ್ತೇವೆ, ಕೇಳಿರಿ, ಹಿಂದಕ್ಕೆ ಕೇರಳ ದೇಶಾಧಿಪತಿಯ ಸೇವೆಯಲ್ಲಿ ಆ ರಾಜೇಶ್ವರನ ಕುದು ರೆಯ ಆರೈಕೆ ಮಾಡುವ ಒಬ್ಬ ಸೇವಕನಿದ್ದನು. ಸ್ವಾಮಿಭಕ್ತ ನಾದ ಆ ಸೇವಕನಿಗೆ ರಾಜನ ಸೇವೆಯ ಹೊರತಾಗಿ ಬೇರೊಂದು ವಿಷಯದಲ್ಲಿ ಧನವೇ ಇಲ್ಲ. ರಾಜನು ರಾವುತನಾಗಿ ಕುದುರೆಯನ್ನೇರಿ ಹೊರಟರೆ, ಸೇವಕನು ರಾಜನ ತಲೆಯ ಮೇಲೆ ದೊಡ್ಡದೊಂದು ಕೊಡೆ ಹಿಡಿದು ಆ ಕುದುರೆಯ ಆರ್ಭಟೆಯ ವೇಗಕ್ಕೆ ಸರಿಯಾಗಿ ಓಡುತ್ತಿದ್ದನು. ಬಡವರಾದ ಆಳುಗಳಿ೦ದ ಇ೦ಥ ಸೇವೆಯನ್ನು ತೆಗೆದುಕೊಳ್ಳುವದು ನಿರ್ದಯದ ಕೆಲಸ ಎಂದು ಪಾದ್ರಿಗಳು ನಮಗೆ ಬೋಧಿಸುತ್ತಿರುವರು, ಮೃಗಯಾಸಕರಾದ ಸಾಹೇಬರು ಅನೇಕ ಜನ ಬೇಟೆಗಾರ ಬಂಟರ ದೇಹಗಳನ್ನು ಹುಲಿ ಕರಡಿಗಳ