ಪುಟ:ಬೆಳಗಿದ ದೀಪಗಳು.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಸಂಪೂರ್ಣ-ಕಥೆಗಳು

ಹೋಯಿತು; ಮತ್ತು 'ಬಾದಶಹರ ಅಪ್ಪಣೆಯು ಹ್ಯಾಗೆ ನಿರರ್ಥಕವಾದೀತೆಂ"ದು ಉತ್ತರವನ್ನು ಕೊಟ್ಟು, ಕೂಡಲೇ ರಾಣಿಯನ್ನು ಮುಕ್ತ ಮಾಡಿದನು.

ಮುಂದೆ ಕೆಲವು ತಿಂಗಳುಗಳ ವರೆಗೆ ಬಾದಶಹ ಮತ್ತು ನೂರಜಹಾನ ಈ ಉಭಯತರ ಮೋಹಬತಖಾನನ ನಜರಕೈದಿನಲ್ಲಿದ್ದರು, ಕೊನೆಗೆ ಬಾದಶಹನು ಪೂರ್ಣ: ಮೆತ್ತಗಾಗಿದ್ದಾನೆಂತಲೂ ತನ್ನ ಮನೆ ಖಂಡಸರು ಪೂರ್ಣವಾಗಿ ತುಂಬಿಬಂದಿತೆಂತಲೂ ಭಾಏಸಿ ಮೋಹಬತಖಾನನು ಆ ಉಭಯತನ್ನು ವಕ್ಷ ಮಾಡಿದನು. ನೋಡಬತಖಾನನ ಪ್ರತಿಬಂಷಕೊದೂಳಗಿಂದ ಮುಕ್ತನಾದ ಕೂಡಲೆ, ಬಾದಶಹನು ನೂರಜಹಾನಳ ಕೇಳುವಿಕೆಯ ಮೇಲಿಂದ ಹಬತಖಾನನ್ನು ರಾಜದ್ರೋಹಿ ಎಂದು ಗೊತ್ತು ಪರಿಸಿ, ಅವನನ್ನು ಕೊಲ್ಲುವವರಿಗೆ ಬಕ್ಷೀಸು ಕೊಡುವೆನೆಂದು ಸಾರಿದನು. ಆದರೆ, ಮೊರಬತಖಾನನ ಯುದ್ಧ ಚಾತುರ್ಯವು ಎಷ್ಟು ಮಹತ್ವವುಳ್ಳದ್ದಾಗಿದೆ೦ಬದನ್ನು ಆ ಸಫಲಾನನು ನೂರಜಹಾನಳಿಗೆ ತಿಳಿಸಿಹೇಳಿ ಅವಳ ರೋಷನ್ನು ಶಾಂತಪಡಿಸಿದನು. ಬಾದಶಹನು ಮೊಸಬತಖಾನನನ್ನು ಕ್ಷಮಿಸಿ, ದಕ್ಷಿಣದಲ್ಲಿದ್ದ ಸೈನ್ಯದ ಮೇಲೆ ಅವನನ್ನು ಮುಖ್ಯಸ್ಥನನ್ನಾಗಿ ನೇಮಿಸಿ, ಅಲ್ಲಿಯ ಸುಭೇದಾರಿಯನ್ನು ಅವನಿಗೆ ಕೊಟ್ಟನು. ಈ ಪ್ರಕಾರ ಬಾದಶಹಾ ಮತ್ತು ಮೋಹಬತಖಾನ ಇವರೊಳಗಿನ ವಿರೋಧವು ನಷ್ಟವಾಗಿ, ಒಡೆಯನ ಮೇಲೆ ಸೇವಕನು ವಿಜಯವನ್ನು ದೊರಕಿಸಿದನು

ಮುಂದೆ ಕೆಲವು ವರ್ಷಗಳ ವರೆಗೆ ನೂರಜಹಾನಳ ಸಾಮ್ರಾಜ್ಯವು ಪೂರ್ವವತ್ ನಡೆಯಿತು. ಆದರೆ ಇಸ್ವಿ ಸನ್ನ ೧೬೨೮ನೇ ವರ್ಷ ಜಹಾಂಗಿರನ ಮರಣದ ಕೂಡ ನೂರಜಹಾನಳ ಸತ್ತೆಯಾದ ರೂ ನಷ್ಟವಾಯಿತು, ಪತಿಯ ಮರಣದ ನಂತರ ೧೮ ವರ್ಷಗಳ ಮೇಲೆ ಅವಳು ಮರಣ ಹೊಂದಿದಳು. ಅವಳಿಗೆ ಪ್ರತಿವರ್ಷ ೨೫ ಲಕ್ಷ ರೂಪಾಯದ ನೇಮಣೂಕವಿತ್ತು. ಅವಳು ಅತ್ಯಂತ ಮಾನೀಸ್ವಭಾವದವಳಿದ್ದದರಿಂದ ಸತ್ತಾ ಹೀನ ಸ್ಥಿತಿಯಲ್ಲಿ ರಾಜಕಾರಣದ ಎಲ್ಲ ವಿಚಾರವನ್ನು ಬಿಟ್ಟು ಕೊಟ್ಟು ಲಾಹೋರದ ಸುಖನಿವಾಸದಲ್ಲಿ ತನ್ನ ಉಳಿದ ಆಯುಷ್ಯವನ್ನು ಕಳೆದಳು.