ಪುಟ:ಭವತೀ ಕಾತ್ಯಾಯನೀ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೧೩-

ಪರಮಾತ್ಮನ ಜ್ಞಾನವಿಲ್ಲ. ಇಂಥ ಪರಮಾತ್ಮನ ಜ್ಞಾನವಿಲ್ಲದವರನ್ನು ಉದ್ಧರಿಸುವದಕ್ಕಾಗಿ, ಅವರವರ ಹೃದಯವನ್ನು ಪ್ರವೇಶಮಾಡುವದರಿಂದ ಪರಮೇಶ್ವರನೇ ನಿನಗೆ “ಶಿಪಿವಿಷ" ಎಂಬ ನಾಮವು ಬಂದಿರುವದು "ಶಿಸಿ" ಅಂದರೆ "ಪಶು" "ವಿಷ್ಟ" ಅಂದರೇ" ಪ್ರವೇಶಮಾಡಿ ದವನು" ಎಂದು ಭಾಸ್ಕರರಾಯರೆಂಬ ವಿದ್ವಾಂಸರು ಹೇಳಿರುತ್ತಾರೆ. ಈ ಅಭಿಪ್ರಾಯವನ್ನು ಶ್ರೀ ಮಚ್ಚಾರೀರಕಭಾಷ್ಯ ಜಿಜ್ಞಾಸಾಸೂತ್ರದಭಾಷ್ಯದಲ್ಲಿ "ಪಶ್ಚಾದಿಭಿಶ್ಚಾ ವಿಶೇಷಾತ್" ಇಲ್ಲಿಂದ ಉಪಕ್ರಮಿಸಿ "ಅತಶ್ಚ ಪಪ್ವಾದಿಭೀಃ‍ ಸಮಾನಃ ಪುರುಷಾಣಾಂ ಪ್ರಮಾಣಪ್ರಮೇಯ ವ್ಯವಹಾರಃ" ಇಲ್ಲಿಯವರೆಗಿನ ಗ್ರಂಥದಿಂದ ವಿವರಿಸಿರುತ್ತಾರೆ. ಕೈಯಲ್ಲಿ ಕೋಲು ಹಿಡಿದು ಬೆದರಿಸಿದರೆ ಇವನು ನಮ್ಮನ್ನು ಹೊಡೆಯುತ್ತಾನೆಂಬ ಭೀತಿಯಿಂದ ಪಶುಗಳುಓಡಹತ್ತುತ್ತವೆ, ಅದೇ, ಎಳೆಯಹುಲ್ಲನ್ನು ಕೈಯಲ್ಲಿ ಹಿಡಿದು ತೋರಿಸುತ್ತ ಕರೆಯಹತ್ತಿದರೆ ಒಂದೊಂದೇ ಹೆಜ್ಜೆಯನ್ನಿಡುತ್ತ ಪ್ರೀತಿಸುತ್ತಿಬರುತ್ತವೆ. ಇದೇ ಮೇರೆಗೆ ಕೈಯಲ್ಲಿ ಶಸ್ತ್ರವನ್ನು ಹಿಡಿದು ಕಣ್ಣು ಕೆಂಪು ಮಾಡಿಕೊಂಡು ಬೆದರಿಸುತ್ತಿರುವ ಬಲಾಢ್ಯಪುರುಷನನ್ನು ಕಂಡರೆ ತಿಳುವ ಳಿಕೆಯುಳ್ಳವನೆನಿಸುವ ಮನುಷ್ಯನಾದರೂ ಓಡಹತ್ತುತ್ತಾನೆ; ಪ್ರೀತಿಯಿಂದ ಕರೆಯುವ ಸೌಮ್ಯನಾದ ಪುರುಷನ ಹತ್ತರ ಮೆಲ್ಲನೆ ಹೋಗುತ್ತಾನೆ, ಆದ್ದರಿಂದ ಪಶುಗಳು ಹೇಗೆ ದೇಹಾಭಿಮಾನಿಗಳಾಗಿ ವಿಷಯಾಸಕ್ತಗಳೋ, ಇದರಂತೆಯೇ ತಿಳುವಳಿಕೆಯುಳ್ಳ ಮನು ಷ್ಯನಾದರೂ ದೇಹಾಭಿಮಾನಿಯಾಗಿ ವಿಷಯಾಸಕ್ತನಾಗಿಹೋದರೆ, ಇವನನ್ನು ಪಶುವೆಂದು ಯಾಕೆ ಹೇಳಬಾರದು? ಇನ್ನು ದೇವತೆಗಳಿಗೆ ದೇಹಾಭಿಮಾನವೂ, ವಿಷಯಾಸಕ್ತಿಯೂ ಅದೆಯೋ, ಇಲ್ಲವೋ ಎಂಬದನ್ನು ಕುರಿತು ವಿಚಾರಿಸುವಾ; ದೇವತೆಗಳು ದೈತ್ಯರಕೂಡ ಹೋರಾಡಿದ್ದು ಪುರಾಣೇತಿಹಾಸಗಳಲ್ಲಿ ಕಂಡುಬರುತ್ತದೆ. ಈ ದೇವತೆಗಳು ಬ್ರಹ್ಮಜ್ಞಾ ನಿಗಳೇ ಆಗಿದ್ದರೆ, ದೈತ್ಯರಕೂಡ ಯಾತರ ಸಲುವಾಗಿ ಹೋರಾಡುತ್ತಿದ್ದರು? ಇದಕ್ಕೆ ವಿಷಯಾಭಿಲಾಷೆಯೇ ಕಾರಣವೆನಿಸುವದು. ಈ ಭೂಲೋಕದಲ್ಲಿ ಯಾರಾದರೂ ಅತ್ಯುಗ್ರ ತಪಸ್ಸನ್ನು ಮಾಡಹತ್ತಿದರೆ, ದೇವತೆಗಳಿಗೆ ಹೊಟ್ಟೆಕಿಚ್ಚು ಯಾಕೆ ? ಸಗರರಾಯನು ಅಶ್ವಮೇಧಯಾಗವನ್ನು ಮಾಡಿದಾಗ ದೇವೇಂದ್ರನು ಅಶ್ವವನ್ನು ಯಾಕೆ ಕದ್ದೊಯ್ಯ ಬೇಕು? ಈ ವಿಷಯದಲ್ಲಿ ಇಂದ್ರನಿಗೆ ತನ್ನ ಪದಚ್ಯುತಿಯಾಗುವದೆಂಬ ಭೀತಿಯೇ ಕಾರ ಣವಾಗಿರುವದು . ಹೀಗೆ ವಿಷಯಗಳು ಬ್ರಹ್ಮಾದಿ ದೇವತೆಗಳನ್ನೂ ಕೂಡ ಅಮಾರ್ಗಕ್ಕೆ ಹಚ್ಚಿದಮೇಲೆ, ನಮ್ಮಂಥವರ ಪಾಡೇನು ?

ಜೀವಾತ್ಮನಿಂದ ಸಂಯುಕ್ತವಾದ ಮನಸ್ಸು ಇಂದ್ರಿಯಗಳಿಂದ ಕೂಡಿಕೊಳ್ಳು, ತ್ತದೆ. ಮನಸ್ಸಿನಿಂದ ಕೂಡಿಕೊಂಡಿರುವ ಜ್ಞಾನೇಯಂದ್ರಿಯಗಳು ವಿಷಯಗಳ ಮೇಲೆ ಹೋಗುತ್ತವೆ. ಆಗ ವಿಷಯಗಳ ಜ್ಞಾನವಾಗುತ್ತದೆ. ಮನಸ್ಸು ಒಂದು ಕಡೆ ಇಂದ್ರಿ ಯಗಳು ಬೇರೆ ಕಡೆಗೆ ಹೀಗಿದ್ದರೆ ವಿಷಯಗಳ ಜ್ಞಾನವು ಎಲ್ಲಿಂದುಂಟಾಗಬೇಕು? ಈ ವಿಷಯಗಳಲ್ಲಿ ಐದುಭಾಗಗಳನ್ನು ಮಾಡಿರುತ್ತಾರೆ. ಅವು ಯಾವವೆಂದರೆ, ೧ ರೂಪ, ೨ ಶಬ್ದ, ೩ ಗಂಧ ೪ ರಸ, ೫ ಸ್ಪರ್ಶ ಎಂಬವು. ಕಣ್ಣಿಗೆ ತೋರುವದು ರೂಪವು. ಕಿವಿಗೆ ಕೇಳುವದು ಶಬವು, ಘ್ರಾಣೇಂದ್ರಿಯಕ್ಕೆ ಗೋಚರವಾಗುವದು ಗಂಥರು. ರಸ