ಪುಟ:ಭವತೀ ಕಾತ್ಯಾಯನೀ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



2

ಹೀಗಿರುವಾಗ ಯಾಜ್ಞವಲ್ಕ್ಯ ರಿಗೂ, ವೈಶಂಪಾಯನರಿಗೂ ವಿವಾದವುಂಟಾಯಿತು.

ವಿವಾದದ ಕಾರಣಗಳು ಬೇರೆಬೇರೆ ಪುರಾಣಗಳಲ್ಲಿ ಬೇರೆಬೇರೆ ವಿಧವಾಗಿ ಹೇಳಲ್ಪಟ್ಟರುವವು, ಈ ಸಂಬಂಧದಿಂದ ಭಾಗವತ, ಹಾಗು ವಿಷ್ಣು ಪುರಾಣಗಳಲ್ಲಿ ಹೇಳಿರುವದರ ಸಾರಾಂಶವೇನಂದರೆ-ವ್ಯಾಸಶಿಷ್ಯರಾದ ವೈಶಂಪಾಯನರು ತಮಗೆ ದೊರೆತ ಯಜುರ್ವೇದದ ಇಪ್ಪತ್ತೇಳು ಶಾಖೆಗಳನ್ನು ಮಾಡಿ, ಶಿಷ್ಯರಿಗೆ ಅಧ್ಯಯನಮೂಡಿಸಿದರು. ಆ ಶಿಷ್ಯರಲ್ಲಿ ಯಾಜ್ಞವಲ್ಕ್ಯರು ಇದ್ದರು. ಅವರು ಅತ್ಯಂತಗುರುಭಕ್ತಿಪರಾಯಣರಾಗಿದ್ದರು. ಮುಂದೆ ಒಂದುದಿವಸ ಎಲ್ಲ ಋಷಿಗಳು ಕೂಡಿ-" ಇಂದು ಎಲ್ಲರೂ ಮೇರುಪರ್ವತಕ್ಕೆ ಹೋಗ ಬೇಕು, ಇದಕ್ಕೆ ಯಾರಾದರೂ ತಪ್ಪಿದರೆ ಅವರಿಗೆ ಏಳುದಿನ ಬ್ರಹ್ಮಹತ್ಯೆಯ ದೋಷವು ಘಟಿಸುವದು ” ಎಂದು ನಿಯಮಮಾಡಿಕೊಂಡರು. ಈ ನಿಯಮವನ್ನು ವೈಶಂಪಾಯನರು ತಪ್ಪಿ ಬ್ರಹ್ಮಹತ್ಯೆಗೆ ಗುರಿಯಾದದ್ದಲ್ಲದೆ, ಅವರು ಕಾರಣವಶಾತ್ ಗಡಿಬಿಡಿಯಿಂದ ಹೋಗುತ್ತಿರುವಾಗ ಪ್ರಾಮಾದದಿಂದ ತಮ್ಮ ತಂಗಿಯ ಸಣ್ಣ ಕೂಸನ್ನು ತುಳಿಯಲು, ಕೂಡಲೆ ಅದರ ಪ್ರಾಣೋತ್ಕ್ರಮಣವಾಗಿ ಬಾಲಹತ್ಯೆಯ ದೋಷವೂ ಘಟಿಸಿತು. ಆಗ ವೈಶಂಪಾಯನರು ತಮ್ಮ ಶಿಷ್ಯರನ್ನೆಲ್ಲ ಕರೆದು “ನಮ್ಮಿಂದ ಬ್ರಹ್ಮಹತ್ಯೆಯ ಪಾತಕವು ಒದಗಿರುವದು. ಅದರ ನಾಶಕ್ಕಾಗಿ ನೀವೆಲ್ಲರೂ ತಪಸ್ಸನ್ನಾಚರಿಸಬೇಕು,” ಎಂದು ಆಜ್ಞಾಪಿಸಿದರು. ಅದನ್ನು ಕೇಳಿ ಯಾಜ್ಞವಲ್ಕ್ಯರು-"ಇಂಥ ತಪಸ್ಸನ್ನಾಚರಿಸಲಿಕ್ಕೆ ಇವರು ಸಮರ್ಥರಲ್ಲ, ಸುಮ್ಮನೆ ಇವರಿಗೆ ಆಯಾಸವನ್ನು ಯಾಕೆ ಉಂಟುಮಾಡುವಿರಿ ? ನಾನೊಬ್ಬನೇ ತಪಸ್ಸನ್ನಾಚರಿಸಿ, ನಿಮ್ಮ ಬ್ರಹ್ಮಹತ್ಯೆಯ ಪಾತಕವನ್ನು ಕಳೆಯುವೆನು” ಅನ್ನಲು, ಶಿಷ್ಯನ ಈ ಔದ್ಧತ್ಯಕ್ಕಾಗಿ ವೈಶಂಪಾಯನರಿಗೆ ಕೋಪವುಂಟಾಯಿತು. ಅವರು ಯಾಜ್ಞವಲ್ಕ್ಯರನ್ನು ಕುರಿತು- "ನೀನು ಇವರನ್ನು ಅಸಮರ್ಥರೆಂದು ಹೀಯಾಳಿಸುವದರಿಂದ ವಿಪ್ರಾವಮಾನಕನಿರುತ್ತೀ; ಮೇಲಾಗಿ ತನ್ನ ಆಜ್ಞಾಭಂಗ ಮಾಡಿರುತೀ; ಆದ್ದರಿಂದ ಇಂಥ ಶಿಷ್ಯನು ನನಗೆ ಬೇಡ. ನೀನು ನನ್ನಲ್ಲಿ ಮಾಡಿದ ಅಧ್ಯಯನವನ್ನು ನನಗೆ ಒಪ್ಪಿಸು,”ಎಂದು ನಿಷ್ಟುರವಾಗಿ ನುಡಿದರು. ಅದಕ್ಕೆ ಯಾಜ್ಞವಲ್ಕ್ಯರು-" ನಾನು ತಮ್ಮ ಮೇಲಿನ ಉತ್ಕಟಭಕ್ತಿಯಿಂದ ಹೀಗೆ ನುಡಿದೆನಲ್ಲದೆ, ವಿಪ್ರಾವಮಾನಕ್ಕಾಗಿ ನುಡಿದವನಲ್ಲ. ನಾನು ನಿರಪರಾಧಿಯಿದ್ದು, ತಾವು ಹೀಗೆ ನುಡಿಯುವದರಿಂದ ನಿಮ್ಮ ವೇದವನ್ನು ನೀವು ತೆಗೆದುಕೊಳ್ಳಿರಿ,ಎಂದು ಗುರುಗಳನ್ನು ನಮಸ್ಕರಿಸಿ, ವೇದವ ವಮನಮಾಡಿ ಹೊರಟುಹೋದರು. ಹೀಗೆ ರಕ್ತರೂಪದಿಂದ ವಮನಮಾಡಿದ ವೇದವನ್ನು ಗುರುಗಳಾದ ವೈಶಂಪಾಯನರ ಆಜ್ಞೆಯಂತೆ ಉಳಿದ ಶಿಷ್ಯರು ತಿತ್ತಿರಿಪಕ್ಷಿಗಳ ರೂಪದಿಂದ ಗ್ರಹಣಮಾಡಲು, ತೈತ್ತಿರೀಯವೆಂಬ ಉತ್ತಮಶಾಖೆಯು ಉಂಟಾಯಿತು. ಮುಂದೆ ಯಾಜ್ಞವಲ್ಕರು ಸೂರ್ಯನ ಆರಾಧನೆಯಿಂದ ಶುಕ್ಲಯಜುರ್ವೇದವನ್ನು ಸಂಪಾದಿಸಿದರು.

ಇದು ವಿಷ್ಣುಪುರಾಣ-ಭಾಗವತಗಳಲ್ಲಿಯ ಸಂಗತಿಯಾಯಿತು. ಇನ್ನು ಮಹಾ ಭಾರತದ ಶಾಂತಿಪರ್ವದ ಮೋಕ್ಫಧರ್ಮದ ೩೧೮ನೆಯ ಅಧ್ಯಾಯದಲ್ಲಿ ವಿವಾದದ ಕಾರಣವು ಬೇರೆ ವಿಧವಾಗಿ ಹೇಳಲ್ಪಟ್ಟಿದೆ. ಆ ಕಾರಣವನ್ನು ಸ್ವತಃ ಯಾಜ್ಞವಲ್ಕ್ಯರೇ