ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Dಜನ ದಿನಚಯ೯ ೧೪ ಹಾಗೆಯೇ ರಾಜನು ಪ್ರಜೆಗಳಿಗಾಗಿ ಪರಿಶ್ರಮ ಪಡುತ್ತಿರಬೇಕೆ೦ದಿ, ದ್ದಾರೆ. ನಿಜವಾಗಿಯೂ, ಹಲವು ರಾಜರು ನಮ್ಮ ದೇಶದಲ್ಲಿ ಪೂರ್ವ ಕಾಲ ರಲ್ಲಿ ತಂದೆಯು ಮಕ್ಕಳನ್ನು ಸಲಹುವಂತೆ ಪ್ರಜೆಗಳನ್ನು ಕಾಪಾಡುತ್ತಿದ್ದ ಬಗ್ಗೆ ಅನೇಕ ದೃಷ್ಟಾಂತಗಳೂ, ಕಥೆಗಳೂ ನಾ ಕ್ಷಿಯಾಗಿವೆ. ಅರಸುಮನೆತನ:- ಅರಸರ ಅರಮನೆಯು ಮುಖ್ಯವಾಗಿ, ಕೋಟೆಯ ಒಳಭಾಗಕ್ಕೆ ಇರುತ್ತಿತ್ತು; ಹೊರಬದಿಗೆ ಅಂದರೆ ಅಂಗಳ ಅಧವಾ ಮು೦ದಣ ತೊಟ್ಟಿಯಲ್ಲಿ (ಚೌಕ) ಎಲ್ಲರಿಗೂ ಬರುವ ಅಪ್ಪಣೆ ಯಿ ತು; ಆದರೆ ಅದರ ಒಳಭಾಗದಲ್ಲಿ ಮಾತ್ರ ಅಧಿಕಾರಿಗಳಿಗಷ್ಟೇ ಅಪ್ಪಣೆ; ಮೂರನೇ ತೊಟ್ಟಿಯಲ್ಲಿ ಯಜ್ಞ ಶಾಲೆಯ, ಅರಸರ ಸ್ನಾನ,. ಭ - ( ಜನಗೃಹಗಳೂ ಇರುತ್ತಿದ್ದುದರಿಂದ ಅಲ್ಲಿ ಅಧಿಕಾರಿಗಳು ಅಥವಾ ಅರಮನೆಯ ಆಳು ತೊತ್ತುಗಳನ್ನು ಇದು ಮತ್ಯಾರಿಗೂ ಒಳಕ್ಕೆ ಹೋಗ ಗೊಡುತ್ತಿರಲಿಲ್ಲ. ನಾಲ್ಕನೇ ತೊಟ್ಟಿಯೇ ಅರಮನೆಯ ಹೆಣ್ಣು ಮಕ್ಕಳಿ' ರುವ ಸ್ಥಳವು; ಈ ತೊಟ್ಟಿಯೊಳಗಣ ಸ್ಥಳವು ಬಹು ವಿಶಾಲವಾಗಿದ್ದು, ಇಲ್ಲಿ ದೊಡ್ಡ ದೊಡ್ಡ ಉದ್ಯಾನಗಳೂ, ಜಲಕ್ರೀಡೆಯ ವಿಹಾರಗಳೂ ಇದ್ದು ಅರಸಿಯ ದು ಸ್ಟೇಚ್ಛೆಯಾಗಿ ವಿಹರಿಸುತ್ತಿದ್ದರು; ರಾಜನ ಅಂತಃ ಪುರದೊಳಗೆ ಅನೇಕ ರಾಷ್ಟ್ರೀಯ ರೂ, ರಾಣಿಯ ರೂ ಇರುತ್ತಿದ್ದರೆಂದು ಮೇಲೆ ರಾಜರು ಅನೇಕ ಹೆಂಗಸರನ್ನು ಮದುವೆಯಾಗುತ್ತಿದ್ದರೆಂಬುದು ಸ್ಪಷ್ಟವಾಯಿತಷ್ಟೆ! ಈ ಹೆಂಗಸರು ಯಾರು, ಎಲ್ಲಿಂದ ತರಲ್ಪಡುತ್ತಿದ್ದ ರೆಂಬುದೊ೦ದು ಸ೦ದೇ ಹಾಸ್ಪದ ಮಾತು; ಆದರೆ ವಿಚಾರಿಸಲಾಗಿ, ವಿವಾಹ ವೇಳೆಯಲ್ಲಿ ಪ್ರತಿವರ್ಷ ಅರಸನಿಗೆ ಸುಂದರವಾದ ಕನೈಯ ರನ್ನು ಅರ್ಪಿಸುವದೊಂದು ಪದ್ಧತಿಯಿತ್ತೆಂದು ಗೊತ್ತಾಗುತ್ತದೆ. ಆದರೂ ರಾಜಕೀಯದೃಷ್ಟಿಯಿಂದ ಅರಸನು ಹೆ೦ಗಸರಲ್ಲಿ ಸಹಸಾ ವಿಶ್ವಾಸವಿಟ್ಟು, ಯಾವ ನಂಬಿಗೆಯ ಅಥವಾ ಗು ಪ್ರವಾರ ಮಾತನ್ನೂ ಡೆಯಕೂಡದು, ಅವರನ್ನು ಸಂತುಷ್ಟವಾಗಿಡಬೇಕೆಂದು ಹೇಳಿದೆ. ರಾಜನ ದಿನಚರ್ಯೆ:- ಭಾರತ ಕಾಲದಲ್ಲಿಯ ರಾಜರ ದಿನಚ ರಿಯು ಹೇಗಿರುತ್ತಿತ್ತೆಂಬದನ್ನರಿಯು ವದು ಹೆಚ್ಚು ಮನೋರಂಜಕವಾ ಗಿದೆ. ಆದುದರಿಂದ ಉದಾಹರಣೆಗಾಗಿ ಧರ್ಮರಾಜನ ದಿನದ ಕಾರ್ಯ