ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಕೀಯ ಸ್ಥಿತಿಯು.

೧೯೯

ಧರ್ಮವು ಉಳಿದುಕೊಂಡಿತು. ಈ ಮೇರೆಗೆ ಸರಿಮುರಿಯ ಒಳದಾರಿಯನ್ನು ಬ್ರಾಮ್ಹಣರು ಹುಡುಕದಿದ್ದರೆ ಬ್ರಾಮ್ಹಣಧರ್ಮವು ಉಳಿಯುತ್ತಿರಲಿಲ್ಲ.

ರಾಜಕೀಯ ಸ್ಥಿತಿಯು:-ಬುದ್ಧನ ಕಾಲದಿಂದ ಚಂದ್ರಗುಪ್ತನವರೆಗಿನ ಸಾಮಾಜಿಕಚಿತ್ರವನ್ನು ತೆಗೆದುದಾಯಿತು. ಇನ್ನು ರಾಜಕೀಯ ಸ್ಥಿತಿಯ ಚಿತ್ರವನ್ನು ನೋಡತೊಡಗಿದರೆ, ರಾಜಕೀಯಾಂಗಣದೊಳಗೆ ಚಂದ್ರಗುಪ್ತನ ವರೆಗೆ ಒಡೆದು ಕಾಣುವಂಧ ಯಾವ ರಾಜರೂ ತಲೆಯೆತ್ತಿದಂತೆ ಕಾಣಲಿಲ್ಲ. ಈ ಅವಧಿಯಲ್ಲಿ ಉತ್ತರಹಿ೦ದುಸ್ಥಾನದೊಳಗೆ ಮಗಧ, ಕೋಸಲ, ವತ್ಸ, ಅವಂತಿ, ಗಾಂಧಾರ, ಕಾಶಿ, ಚೇದಿ, ಪಾಂಚಾಲ, ಕುರು, ವಾತ್ಸ್ಯ, ಶೂರಸೇನ, ಮಲ್ಲ, ಕಾಂಭೋಜ, ವೈಜಿಕ ಅವೇ ಮುಂತಾದ ೧೬ ಚಿಕ್ಕ ದೊಡ್ಡ ರಾಜ್ಯಗಳಿದ್ದವು. ಇವುಗಳಲ್ಲಿ ಹಲವು ಬಹುದಿನಗಳ ವರೆಗೆ ತಮ್ಮ ಪ್ರಜಾಧಿಪತ್ಯವನ್ನು ಕಾಯುಕೊ೦ಡಿದ್ದವೆಂಬುದು ಜ್ಞಾಪಕದೊಳಗಿಡತಕ್ಕ ಸಂಗತಿಯಾಗಿದೆ. ಈ ಅರಸರುಗಳಲ್ಲಿ ಕೆಲಕಾಲ ಕಾಶಿಯ ಶೈಶುನಾಗವಂಶದ ಅರಸರು ಕೆಲ ಮಟ್ಟಿಗೆ ತಮ್ಮ ಬಾಹುಬಲದಿಂದ ರಾಜ್ಯವನ್ನು ಹರಡಲಿಕ್ಕೆ ಪ್ರಯತ್ನಿಸಿದರು. ಅವರಲ್ಲಿ ಬಿಂಬಸಾರನೆಂಬಾತನೇ ಮುಖ್ಯನು; ಈತನ ಆಳಿಕೆಯಲ್ಲಿಯೇ ಬುದ್ಧದೇವನೂ, ಮಹಾವೀರದೇವನೂ ತಮ್ಮ ತಮ್ಮ ಮತ ಪ್ರಸಾರಗೊಳಿಸುವ ಕಾರ್ಯಗಳನ್ನು ಪ್ರಬಲವಾಗಿ ನಡೆಯಸಿದರು. ಅಲ್ಲದೆ ರಾಜರಿ೦ದಲೂ ಪ್ರತ್ಯಕ್ಷವಾಗಿ ಈ ಮತ ಪ್ರಸಾರಕರಿಗೆ ಬೆಂಬಲ ದೊರೆಯಿತು. ಮಗಧರಾಜ್ಯವನ್ನು ಈತನು ಅ೦ಗದೇಶದ ವರೆಗೆ ಬೆಳೆಸಿದನು. ಈ ಕಾಲಕ್ಕೆ ವೈಶಾಲಿಯು ವ್ಯಾಪಾರದ ಕೇಂದ್ರವಾದ್ದರಿ೦ದ, ಈತನು ವೈಶಾಲಿಯ ರಾಜಕನ್ಯೆಯನ್ನು ಮದುವೆಯಾಗಿ ಬಲಾಢ್ಯವಾದ ಲಿಚ್ಛವಿಸಂಘದ ರಾಣ್ಯವನ್ನು ತನ್ನ೦ತೆ ಮಾಡಿಕೊಂಡನು. ಈತನ ಮಗನಾದ ಅಜಾತಶತ್ರುವು ಈತನನ್ನು ಕೊಂದು ತಾನೇ ರಾಜ್ಯವನ್ನಾಳಲಾರಂಭಿಸಿದನು. ಅಜಾತಶತ್ರುವು ತನ್ನ ಆಳ್ವಿಕೆಯಲ್ಲಿ ರಾಜಗೃಹವನ್ನು ಬಿಟ್ಟು ಪಾಟಲಿಪುತ್ರವನ್ನು ರಾಜಧಾನಿಯನ್ನಾಗಿ ಮಾಡಿ ಅದರ ಕೋಟೆಯನ್ನು ಕಟ್ಟಿಸಿದನು. ಪಾಟಲಿಯೆ೦ಬ ಸೂಳೆಯ ಮಗನಿಂದ