ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರಸಿದ್ಧ ಸಾರ. ೧೫ ಇದೇ ಮೊದಲಾದುವು ಪೂಜೆಗೆ ಮಂತ್ರಗಳೆಂದು ತಿಳಿಯತಕ್ಕದ್ದು. ಗಣೇಶಚತುರ್ಥಿ ವಿನಾಯಕ ಚತುರ್ಥಿ:-ಶುದ್ದ ಚತುರ್ಥಿಯಲ್ಲಿ ಸಿದ್ಧಿ ವಿನಾಯಕ ವ್ರು ತವನ್ನು ಮಾಡಬೇಕು. ಇಲ್ಲಿ ಮಧ್ಯಾಹ್ನ ವ್ಯಾಪ್ತಿಯುಳ್ಳ ಚತುರ್ಥಿಯನ್ನು ಗ್ರಹಿಸಬೇಕು. ಎರಡು ದಿನಗಳಲ್ಲಿಯ ಮಧ್ಯಾಹ್ನಕ್ಕೆ ಸಂಪೂಗ್ಗ ವ್ಯಾ ವಿ ಇದ್ದಾಗ್ಯೂ, ಅಥವಾ ಇಲ್ಲದಿದ್ದಾಗ್ಯೂ ಈ ದಿನವನ್ನೇ ಗ್ರಹಿಸಬೇ ಕು, ವಿಷಮ ಕಾಲವ್ಯಾಪ್ತಿ ಇದ್ದಲ್ಲಿ ಹೆಚ್ಚು ವ್ಯಾಪ್ತಿಯು ಎರಡನೆಯ ದಿ ನಕ್ಕಿದ್ದ ಪಕ್ಷದಲ್ಲಿ ಎರಡನೆಯ ದಿನವನ್ನು ಗ್ರಹಿಸಬೇಕೆಂದು ಕೆಲವರು. ಪೂರದಿನದಲ್ಲಿ ಮಧ್ಯಾಹ್ನ ಸ್ಪರ್ಶವು ಸ್ವಲ್ಪವೂ ಇಲ್ಲದೆ, ಪರದಿನದಲ್ಲಿಯೇ ಮಧ್ಯಾಹ್ನ ಸ್ಪರ್ಶವಾದರೆ ಆಗೈವತ್ರನೇ ಎರಡನೆಯದನ್ನು ಗ್ರಹಿಸಬೇ ಕು. ಎರಡು ದಿನಗಳಲ್ಲಿಯ, ಸಮಾನವಾಗಿಯ, ಹೆಚ್ಚು ಕಡಿಮೆಯಾಗಿ ಯೂ ಒಂದುಭಾಗದ ವ್ಯಾಪ್ತಿ ಇದ್ದ ಪಕ್ಷದಲ್ಲಿಯೂ ಈ ದಿನವನ್ನೇರ ಹಿಸಬೇಕು. ಮೊದಲದಿನದಲ್ಲಿ ಮಧ್ಯಾಹ್ನದ ಒಂದು ಭಾಗಕ್ಕೆ ಮಾತ್ರವೇ ವ್ಯಾಪ್ತಿ ಇದ್ದು ಎರಚನೆಯ ದಿನದ ಮಧ್ಯಾಹ್ನ ಕ್ಕೆ ಸಂಪೂಣ್ಣ ವ್ಯಾಪ್ತಿ ಇದ್ದರೆ ಆಗಲೂ ಪರದಿನವೇ ಗ್ರಾಹವು, ಇತರ ಮಾಸಗಳಲ್ಲಿಯೂ ಹೀಗೆಯೇ ನಿಯವು. ಚತುರ್ಥಿಯು ಭಾನು, ಮಂಗಳವಾರದಲ್ಲಿ ಬಂದರೆ ಪ್ರತ ಸ್ವವೆನಿಸುವುದು, ಈ ಚತುರ್ಥಿಯಲ್ಲಿ ಚಂದ್ರದರ್ಶನವನ್ನು ಮಾಡಿದವನಿಗೆ ಮಿಥ್ಯಾ ಪವಾದ (ಇಲ್ಲದ ದೂರು) ದೋಷವುಂಟಾಗುವುದು. ಆದ್ದರಿಂದ ಚತು ರ್ಥಿಯಲ್ಲಿ ಹುಟ್ಟಿದ ಚಂದ್ರನನ್ನು ಪಂಚಮಿಯಲ್ಲಿ ನೋಡುವ ಪಕ್ಷದಲ್ಲಿ ವಿನಾಯಕವತದಿನವಾದಾಗ್ಯೂ ದೋಷವಿಲ್ಲ. ಅಂದರೆ ಪೂರದಿನದ ಕಾಯಾಹ್ನ ಮೊದಲ್ಗೊಂಡು ಪ್ರಾರಂಭವಾದ ಚತುರ್ಥಿಯಲ್ಲಿ, ವಿನಾ ಯಕವ್ರತವನ್ನು ಮಾಡದಿದ್ದಾಗ್ಯೂ, ಆದಿನದಲ್ಲಿಯೇ ಚಂದ್ರದರ್ಶನದಿಂ ದ ದೋಷವುಂಟಾಗುವುದೆಂದು ಸಿದ್ದವಾಗುತ್ತದೆ. ಚತುರ್ಥಿ, ಹು ಟ್ಟದ ಚಂದ್ರನ ದರ್ಶನವು, ಎಂದು ಹೇಳುವ ಪಕ್ಷದಲ್ಲಿ ಮೊದಲರಾತ್ರಿ ಯಲ್ಲಿ ಕಳದುಳಿದ, ಎರಡನೆಯ ದಿನದಲ್ಲಿ ೫ ಅಥವಾ ೬ ಮುಹೂತ್ರ ಈ ಲಮಾತ್ರವಿರುವ ಚತುರ್ಥಿ ದಿನವನ್ನೂ, ಚಂದ್ರದರ್ಶನ ವಿಷಯದಲ್ಲಿ ನಿ