ಪುಟ:ಮಾತೃನಂದಿನಿ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ ೦ ದಿ ಸಿ 197 ಅಭೇದ್ಯರಾಗಿ ವರ್ತಿಸಬೇಕು. ನಿಮ್ಮಲ್ಲಿ ಯಾರಿಗೂ ಪರಸ್ಪರ ವೈಮನಸ್ಯ ಕಾರಣಗಳಾದ ಸಂಶು, ಕೇಶ, ಈರ್ಸ್ಯೆ, ದ್ವೇಷ, ರೋಷ, ದುರಭಿಮಾನ, ವಂಚನೆಗಳೆ ಅದಿಯಾದ ದುರ್ಗುಣಗಳುಂಟಾಗದಂತೆ ಅವಸ್ಥಾತ್ರಯ(ಜಾಗ್ರತ್, ಸ್ವಪ್ನ, ಸುಷುಪ್ತಿ) ಕರಣತ್ರಯ (ಮನಸ್ಸು, ವಾಕ್ಕು, ಕರ್ನು) ಗಳಿಂದ ಪರಿಶುದ್ಧ ರಾಗಿ ನಡೆಯಬೇಕು, ಪತಿಗೆ ಸತಿಯ ಶಕ್ತಿಯಾಗಿಯ, ಸತಿಗೆ ಪತಿಯೇ ಕಾಂತಿಪ್ರದನಾಗಿಯೂ ಇದ್ದು, ಕಾಂತಿ-ಶಕ್ತಿಗಳ ನಾರ್ಥಿ ಕ್ಯತೆಯನ್ನು ಕಾರ್ಯದಿಂದ ಪ್ರದರ್ಶಿಸುತ್ತಿರಬೇಕು. ನಾದಾ+ ಅಚಲ 1. ನಂದಿನಿ + ಸ್ವರ್ಗಾ-ಆಜ್ಞಾಬದ್ಧರಾಗಿರುವವು. ಸತ್ಯಾ:- -ಮತಸಕ್ಷವಾಗಲೀ ಅನ್ಯಮತದೂಷಣೆಯಾಗಲೀ ನಿಮ್ಮಲ್ಲಿರ ಬಾರದು. ಎಲ್ಲಾ ಮತವೂ ಒಂದೇ ದೈವವನ್ನೇ ಪ್ರತಿಪಾದಿಸುತ್ತಿವೆ. ಎಲ್ಲಾ ಮತಗಳಲ್ಲಿಯೂ ಸರ್ವಶಕ್ತನಾದ ಪರಮಾತ್ಮನೊಬ್ಬ ನೇ ನೆಲಸಿರು ವನು. ಈ ತತ್ವವನ್ನರಿತು, ನಮ್ಮ ನಮ್ಮ ಆರ್ಯರ ಹಿತಮಾರ್ಗದಲ್ಲಿ ನೀವಿದ್ದು, ಒಬ್ಬರನ್ನೊಬ್ಬರು ಬಂಧುಪ್ರೇಮದಿಂದ ಪ್ರೀತಿಸುತ್ತ, ಒಬ್ಬರ ಕ್ಷೇಮಾಭ್ಯುದಯವೇ ಮತ್ತೊಬ್ಬರ ಶ್ರೇಯೋಭಿವೃದ್ಧಿಯೆಂದು ಭಾವಿಸಿ, ಎಲ್ಲರೂ ಸಹಜ ಸೌಜನ್ಯದಿಂದ ದೇಶೋನ್ನತಿಯಲ್ಲಿ ಬದ್ದಾದರರಾಗಿರಬೇ ಕೆಂಬುದನ್ನು ಮರೆಯಬಾರದು. ನಾದಾ + ಅಚಲ [... ನಂದಿನಿ + ಸ್ವರ್ಣ - ಒಪ್ಪಿದೆವು; ತಪ್ಪಲಾರೆವು. ಸತ್ಯಾ:-ನಮ್ಮ ಪೂರ್ವಜರಲ್ಲಿ ಮತ್ತು ಗರುಜನರಲ್ಲಿ ಎಂದಿಗೂ ಅವಿಧೇಯರಾಗಿ ನಡೆಯಬಾರದು. ಅವರ ಯಾವುದೇ ಒಂದು ಸಣ್ಣ ನುಡಿ ಗಳನ್ನಾಗಲೀ ಆದರದಿಂದ ಕೇಳಿ ತಿಳಿದು, ಉಚಿತರೀತಿಯಿಂದ ಸನ್ಮಾನಿಸ ಬೇಕು. ನೀವು ಕಲಿಯಬೇಕಾದ ನೀತಿಗಳು ಎಷ್ಟೆ ನ್ಯೂ ಇರುವುವು. ಇರುವೆಯಿಂದ ಮೊದಲು, ಮೃಗರಾಜನ ವರೆಗೆ ನಮಗೆ ಪಾಠವನ್ನು ಕಲಿ ಸುವ ಸುಗುಣಗಳು ಒಂದೊಂದರಲ್ಲಿ ಒಂದೊಂದು ಬಗೆಯಾಗಿ ಇದ್ದೆ ಇರುವುವು. ಯಾವವೇಳೆಯಲ್ಲಿ, ಎಂತಹ ಸಮಯದಲ್ಲಿಯೂ-ಯಾವದನ್ನ ಅಗಲೀ ಅಲ್ಪ ಅಥವಾ ಅಪ್ರಯೋಜಕವೆಂದು ತಿರಸ್ಕರಿಸದೆ, ನಾವಧಾನ ದಿಂದ ಸಮಾಲೋಚಿಸುವುದರಿಂದಲೇ ಮಾನವನು ಅಭ್ಯುದಿತನಾಗುವನು.