ಪುಟ:ಮಾತೃನಂದಿನಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21 ಮಾತೃನ೦ದಿನಿ ಕಣ್ಣು ಮುಚ್ಚಿಕೊಂಡು ಕುರುಡರಂತಿರಬೇಕಾದುದೇ ಮುಖ್ಯವಲ್ಲವೇ? ಆದೀತು ! ಗಣೇಶ: ನಿಮ್ಮ ವಿತಂಡವಾದವು ನಮಗೆ ಬೇಕಾಗಿಲ್ಲ. ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹವೇ ಶ್ರೇಯಸ್ಕರವೆಂಬುದನ್ನು ನಾವು ಎಂದೆಂದೂ ಮರೆಯಲಾರೆ. ನಾರಾ:- ನಂದಿನಿಯನ್ನು ಕುರಿತು, - ( ನಂದಾ? ಕೇಳಿದೆಯೋ ? ತಾತಯ್ಯನವರ ತತ್ತ್ವವನ್ನು ? ಏನೆಂದು ಹೇಳುವೆ?” ನಂದಿಸಿ:--ಹೇಳುವುದೇನು? ಸಕಾರಣವಲ್ಲದ ವಿಚಾರವನ್ನು ನಂಬು ಇದು ಹೇಗೆ?” ವಿಶ್ವನಾಥ: - -ಅದಾರ ಕಂಠ? ಹೆಂಗಸರರೇನು? ಅವಳಾರಮ್ಮಾನಗೇಶರಾಯ? ಏನೇನನ್ನೋ ಹೇಳುತ್ತಿರುವಳು? ನಗೇಶ:--ಅವಳೇ ನನ್ನ ಸಾಕುಮಗಳು: ಇನ್ನೂ ಅವಿವಾಹಿತೆಯಾದ ಸೋಡಾ ! ವಿಶ್ವನಾಥ:-ಬೆದರಿ ನೋಡುತ್ತೆ,--IIಹಾ! ಏನು? ಜನ ಕೇಡುಗಾ ಒದ ಸುದ್ದಿಯಿದು !! ವಯಸ್ಸು ಮಿತಿಮೀರಿ ಹೋಗಿದೆ. ಈ ವಯಸ್ಸಿಗೆ - ಎರಡು ಮಕ್ಕಳಿಗೆ ತಾಯಾಗಿರಬೇಕು. ಇನ್ನೂ ಮದುವೆಯಲ್ಲವಂತೆ ! ಗಣೇಶರಾವ್ -ನೆತ್ತಿಯಾದರೂ ಇಂತಹ ನಿತ್ರವನ್ನು ನೋಡಿರುತ್ತೀ ಯೇನಯ್ಯಾ? ಇನ್ನು ನಮಗೆ ಹೇಗೂ ಮಾನ-ಮರ್ಯಾದೆಗಳು ಉಳಿಯ ಅಕ್ಕಿಲ್ಲ ?” ಗಣೇಶ:- -ನರೇಶನನ್ನು ಕಿಡಿಕಿಡಿಯಾಗಿ ನೋಡುತ್ತೆ, ಮಹರಾಯ! ನಿಮ್ಮ ಅತ್ಯಾಚಾರದಿಂದ ನಾವೆಲ್ಲರೂ ಕರ್ಮ ಭ್ರಷ್ಟ ರಾದೆವು! ಇನ್ನು ಇದ ಾಗಿ ನಾವು ಮಹಾಪ್ರಾಯಶ್ಚಿತ್ರಗಳನ್ನೇ ಮಾಡಿಕೊಳ್ಳಬೇಕಾಯ್ತು. ಕಾಲವೆಷ್ಟು ಕೆಟ್ಟು ಹೋಯ್ತಯ್ಯಾ? ಚಿಃ ! ::: !! ಹಾಳು-ಕಲಕಾಲ!!!” ನರೇಶ:ಾಮೀ! ಕೂಗಾಟದಿಂದ ಕಾರ್ಯವನ್ನು ಕೆಡಿಸಬಾರದು! ತಾಳ್ಮೆಯಿಂದ ವಿಚಾರಮಾಡಿರಿ? ಕಾಲವೇನೂ ಕೆಟ್ಟು ಹೋಗಿಲ್ಲ. ನಿಮಗೆ ವಿಚಾರ-ವಿಮರ್ಶೆ ಮಾತ್ರವೇ ಮರೆಯಾಗಿದೆ! ವಿಶ್ವನಾಥ:- ಮತ್ತೇನಯ್ಯಾ ? ಇಷ್ಟು ದೊಡ್ಡ ಹೆಂಗಸಿಗೆ ಮದುವೆ