ಪುಟ:ಮಾತೃನಂದಿನಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7D 7) ಸತೀಹಿ ತೈಷಿ ಣಿ ನರೇಶ-ತಲೆದೂಗಿ ಸಂತೋಷದಿಂದ,-ನಂದಿಸಿ! ನಿನ್ನ ಸಂದೇಶವು ಲೋಕಾದರಣೀಯವಾಗಬೇಕೆಂಬುದೇ ನನ್ನ ಅಭೀಷ್ಟಲ್ಲ. ಇದಕ್ಕೆಂದೇ ತನೆಗೂ ನಿನ್ನಲ್ಲಿ ತರ್ಕಿಸಿದೆನು. ನಿನ್ನ ಹೃದ್ಧ ತಭಾವಗಳ ನಿಜವಾದ ಸ್ವರೂ ಸವನ್ನು ತಿಳಿದು ನಾನು ಅತ್ಯಾನಂದಗೊ೦ದೆನು. ಹೇಗೂ ನೀನು ನನ್ನ ಪುತ್ರ ವಧುವಾಗಿ ನಮ್ಮ ಕುಲವನ್ನು ನಾವನ ಮದುವೆಯೆಂಬುದೇ ನನ್ನ ಭರವಸೆ ಯಾಗಿದೆ. ಇರಲಿ; ಈಗದರ ಪ್ರಸ್ತಾವನಿನ್ನು ನಾಕು. ತುಂಬಾ ಒಳರರು ವೆಯಾದುದರಿಂದ ಇನ್ನು ನಿನಗೆ ಸಮ್ಮತಿಕೊಟ್ಟೆ ಸು. ನಂದಿನಿಯು ಎದ್ದು ಹೊರಟುಹೋದಳು, ನರೇಶನ ನಾನಾ ಕ ಗಳಿಗೆ ತೆರಳಿದನು. (ನಂದಿನಿಯ ಸಂದೇಶವನ್ನು ಚೆನ್ನಾಗಿ ತಿಳಿದಬಳಿಕಿನ್ಯಾದರೂ, ನಮ್ಮ ವರನ್ನು ಸುತ್ತಿ ಮುತ್ತಿರುವ ದುರಭಿಮಾನಾಗ್ನಿಯು ನಂದಿ, ಜ್ಞಾನಾಮೃತ ವರ್ಷದಿಂದ ನಮ್ಮವರ ಸುಧಾರಣಾ ಕಾರ್ಯವು ತೃಪ್ತಿಕರವಾಗಿ ನೆರೆವೇರು ವದೆಂದು ನನಗೆ ನಿರೀಕ್ಷಿಸುವೆವು.) || ಶ್ರೀ || ಅಷ್ಟಮ ಪರಿಚ್ಛೇದ. ++ ++ (ಸಮಾಜಶಾಸನ) ನಂದಿನಿಯು, ವಿಶ್ವನಾಥ-ಗಣೇಶಸಂತರನ್ನು ವಾಗ್ಯುದ್ದದಲ್ಲಿ ಸೋಲಿಸಿ ಇಂದಿಗೆ ಒಂದು ಪಕ್ಷವಾಗಿರಬಹುದು. ಇಷ್ಟರೊಳಗಾಗಿಯೇ ನಂದಿನಿಯ ಮತ್ತು ನರೇಶರಾಯನ ಮೇಲೆ ಆಚಾರಭ್ರಷ್ಟತೆಯ ಅಪವಾದಾ ರೋಪಗಳು ತಲೆಯೆತ್ತಿ ಶಿವಪುರದ ಅಬಾಲವೃದ್ಧರಾದಿಯಾಗಿ ಎಲ್ಲರ ವದನದ್ವಾರದಲ್ಲಿ ತಾನೇ ತಾನಾಗಿ ನಿಂತು ನರ್ತಿಸುವಂತಾಗಿದೆ.