ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೆನು - ಹುಣ್ಣಿಮೆಗೆ ೩೦ ದಿನಗಳಾಗುವುವು, ಅದರಮೇಲೆ ಒಂದು ಕ್ಷಣ ಕಳೆವುದಾದರೂ ನೀನು ನನ್ನನ್ನು ಬದುಕಿಸಿ ಕೊಳ್ಳಲಾರೆ, ನಾನು ಸಾಯುವೆನು, ನೀನು ನನಗೆ ಪ್ರಾಣದಾನವನ್ನು ಮಾಡು. ನನ್ನ ಈ ಜೀವನವು ಬಹುಕಾಲ ನಿನ್ನ ಅಧಿಕಾರದಲ್ಲಿಯೇ ಇರುವುದು, ನಿನ್ನ ಪ್ರೇಮಕಾಂಕ್ಷಿಣಿ, ಆಮೆಲೆ, ನಾಲ್ಕನೆಯ ಸಂಧಿ, (ಸನ್ನಾಹ) ರಾಮಕೃಷ್ಣನು ಮೇಲ್ಕಂಡಂತೆ ಕಾಗದವನ್ನು ಓದಿ, ಆಶ್ಚರ್ಯದಿಂದ-ಇದೇನಾಶ್ಚರ್ಯ ! ದೇವೇಂದ್ರ, ಅವಳು ನಿಜವಾಗಿಯೂ ಗೋರಿಯಿಂದೆದ್ದು ಹೊರಟುಹೋಗಿರುವಳೇ ! ಎಂದು ಕೇಳಿದನು.ದೇವೇಂದ್ರ .ದೇವೆಂದ್ರನನಗೂ ಹಾಗೆಯೇ ತೋರುವುದು ಯಾವಾಗಲಾದರೂ ಹೀಗಾಗುವುದುಂಟೇ?? ಹೀಗಾಗುವುದುಂಟೇನು ! ಹೀಗೆಯೇ ಆಗಿದೆ' ,,ಶ್ರೀಶಚಂದ್ರನು ಒಂದು ದೊಡ್ಡ ತಪ್ಪು ಮಾಡಿದನು. ಯಾರಹೆಸರಿನಲ್ಲಿ ಕಾಗದವು ಬರೆಯಲ್ಪಟ್ಟಿದೆಯೋ ಆ ಹೆಸರಿದ್ದ ಕಾಗದದ ಚೂರುಗಳನ್ನು ಹುಡುಕಿತುದಿದ್ದರೆ ಬಲುಚನ್ನಾಗಿರುತ್ತಿದ್ದಿತು, (ಎಷ್ಟೋ ಹುಡುಕಿನೋಡಿದನು ; ಸಿಕ್ಕಲಿಲ್ಲ. ರಾಮ ಕೃಷ್ಣ ಬಾಬು, ಈಗೊಂದು ಸಂಗತಿಯನ್ನು ತಿಳಿಸಬೇಕಂ ದಿರುವೆನು. ,,ಅದೇನು?,,