ಪದ್ಯಗಳನ್ನು ಹೀಗೆ ಆರಿಸುವಾಗ, (ಅಂದರೆ ದೊಡ್ಡ ಕೂಟಗಳೆನ್ನುವ
`ಪ್ರಮುಖ ತಾಳಮದ್ದಲೆಗಳಲ್ಲಿ) ಮಾತುಗಾರಿಕೆಗೆ ಅವಕಾಶವಿರುವ ಪದ್ಯ
ಗಳನ್ನಷ್ಟೇ ಆರಿಸಿಕೊಳ್ಳುವುದು,ತೀರ ಮಿತಸಂಖ್ಯೆಯ ಪದ್ಯಗಳನ್ನಷ್ಟೆ
ಆರಿಸುವುದೂ ಒಂದು ಪದ್ಧತಿಯಾಗಿ, 1950-1970ರ ಅವಧಿಯಲ್ಲಿ
- ಬಳಕೆಗೆ ಬಂದಿತು. - ಈ ಪದ್ಧತಿಯಂತೆ, ಸುಧನ್ವ ಕಾಳಗದ ಪ್ರಭಾವತಿಯ
- ಪ್ರವೇಶದ 'ಪದ್ಯ, (ಸತಿ ಶಿರೋಮಣಿ ಪ್ರಭಾವತಿ ಸೊಬಗಿನಲಿ) ಕೃಷ್ಣನ
ಪ್ರವೇಶದ ಪದ್ಯ (ಬಂದ ತತ್ಕ್ಷಣದೊಳಲ್ಲಿಗೆ) ಭೀಷ್ಮಾರ್ಜುನದ ಭೀಷ್ಮ-
- ಅರ್ಜುನರ ಸಂವಾದದ ಹತ್ತಾರು ಪದ್ಯಗಳು, ವಾಲಿವಧೆಯ ಹನುಮಂತನ
ಕೆಲವು ಪದ್ಯಗಳು (ಭಾನುನಂದನ/ವಾನರೇಶ್ವರ ಇತ್ಯಾದಿ) ಕರ್ಣಪರ್ವ
ಪ್ರಸಂಗದ ಕರ್ಣಾರ್ಜುನರ ಎರಡನೆಯ, ಮೂರನೆಯ ಯುದ್ಧದ ಪದ್ಯಗಳು-
ಮುಂತಾದುವುಗಳಿಗೆ ಸ್ಥಾನವಿಲ್ಲ. ಇದು ತಾಳಮದ್ದಲೆಯೂ ಒಂದು ರಂಗ
ಭೂಮಿ' ಎಂಬ ತಿಳುವಳಿಕೆ ಮರೆಯಾದುದರ ಪ್ರಭಾವ, ಕಥೆ ಸಾಗುವ
ಹಿಮ್ಮೇಳದ ಸೊಗಸಿಗಾಗಿ ಇರುವ ಪದ್ಯಗಳೂ ಅವಶ್ಯ. ಇಲ್ಲಿ ಪುನಃ
ಸಂಪ್ರದಾಯವನ್ನು ಅಂಗೀಕರಿಸಿ ಅಳವಡಿಸುವುದೇ ಒಂದು ಪ್ರಯೋಗ
ಆಗಬಹುದು. ಇತ್ತೀಚೆಗೆ, ವಿಶೇಷತಃ ಈ ಲೇಖಕನ ಪ್ರಯತ್ನದಿಂದ,
ಪದ್ಯಗಳ ಆರಿಸುವಿಕೆ, ಅಳವಡಿಕೆಗಳಲ್ಲಿ ಹೆಚ್ಚು ಪದ್ಯಗಳಿಗೆ ಸ್ಥಾನ ದೊರೆತಿದೆ,
ಮಾತ್ರವಲ್ಲ ಅಮುಖ್ಯವೆಂದೆಣಿಸಲಾಗಿದ್ದ ಪದ್ಯಗಳೂ ಪುನಃ ಬಳಕೆಗೆ ಬಂದಿವೆ.
ಉದಾಹರಣೆಗೆ ಕೃಷ್ಣ ಸಂಧಾನದಲ್ಲಿ (ದೇವೀದಾಸಕವಿ) ದುರ್ಯೋಧನನು,
ಬಲರಾಮನ ಆಶ್ವಾಸನೆಗೆ ಪ್ರತಿಕ್ರಿಯೆಯಾಗಿ, ತನ್ನ ಸಂದೇಹಗಳನ್ನು
ಮುಂದಿಡುವ ಈ ಪದ್ಯಗಳನ್ನು ನೋಡಿ :
1. ಹಲಧರನೆಂದುದ ಕೇಳಿ 1 ಕುರು ಕುಲಪತಿ ಸಂಶಯತಾಳಿ
ಬಲರಾಮನೊಳರುಹಿದನು । ಮನ | ವೊಲಿಸುತ ಕೌರವತಾನು ।।
2.ನಿಮ್ಮಯ ನುಡಿಯನು ಕೇಳಿ ।ನಾ। ಧಿಮ್ಮನೆ ಬರೆ ಮುದತಾಳಿ।
ತಮ್ಮನ ಬಳವಿಲಿ ಶಚಿಯ ಪತಿ ಮೊಮ್ಮನಿಗಿತ್ತಿರೆ ಸಂತೆಯ।
-ಇವುಗಳಲ್ಲಿ ಒಂದನೆಯ ಪದ್ಯದಲ್ಲಿ ಅರ್ಥಗಾರಿಕೆಗೆ ವಿಷಯವೇನೂ ಇಲ್ಲವೆಂಬುದರಿಂದ, ನೇರವಾಗಿ ಎರಡನೇ ಪದ್ಯವನ್ನೇ ಎತ್ತಿಕೊಳ್ಳುವ ರೂಢಿ