ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
143


ಖಳನಾಯಕರ ಚಿತ್ರಣದಲ್ಲಿ ಪರಿಷ್ಕಾರವು ಬಂದ ಬಳಿಕ, ಮೂಡಿದ
ವಿಮರ್ಶೆ. ಇದರಲ್ಲಿ ನಿಜಾಂಶವಿದೆ. ಆದರೆ, ನಾವು ವಸ್ತು
ವೊಂದನ್ನು ಶಾಸ್ತ್ರೀಯ ಅಥವಾ ಜಾನಪದ ಮಾಧ್ಯಮದಲ್ಲಿ
ಪುನಃ ಸೃಷ್ಟಿಗೆ ಒಳಪಡಿಸಿದಾಗ ನಾಯಕನೂ ಕೂಡ, ಸ್ಥಾನಾಂತರ
ಹೊಂದಿ, ಅವನ ಬದುಕೂ `ಬಯಲಾಗುವುದೂ ಅಂದರೆ
'expose' ಆಗುವುದೂ, ಒಂದು ಪ್ರಕ್ರಿಯೆ. ಇದು ವಸ್ತುವಿನ
ಬೆಳವಣಿಗೆಗೆ ಸಹಕಾರಿ (ಈ ವಿಚಾರವನ್ನು ನನಗೆ ಸೂಚಿಸಿದವರು
ಡಾ. ಬಿ. ಎ. ವಿವೇಕ ರೈಯವರು).
2.ಪ್ರದರ್ಶನದ ಆಧಾರವಾಗಿ ನವರಿಗೆ, ಬರೆದಿಟ್ಟ ಪದ್ಯಗಳ ಪ್ರಸಂಗ
ಅದು ನಮ್ಮ ಪಠ್ಯ-text. ಇದು ಸ್ಥಿರ ಪಾಠ ಎಂದೆವು.
ಆದರೆ, ಅದೂ ಪೂರ್ತಿಸ್ಥಿರವಲ್ಲ. ಒಂದು ಪ್ರಸಂಗದಿಂದ ನಾವು
ಆಯ್ದ ಪದ್ಯಗಳು ಒಂದು ಪ್ರತ್ಯೇಕ ಪ್ರಸಂಗವೇ, ಒಂದು
ಬೇರೆಯೇ Text ಆಗುತ್ತದೆ. ಅದು ಪ್ರದರ್ಶನದಿಂದ ಪ್ರದರ್ಶ
ನಕ್ಕೆ ಬೇರೆ ಬೇರೆ ಆಗಬಹುದು. ಕೃಷ್ಣಸಂಧಾನದ ಉತ್ತರಾರ್ಧ
ವೊಂದನ್ನೆ, 15, 20, 25, 30-ಹೀಗೆ ಸಂಖ್ಯೆಯ ಪದ್ಯ
ಗಳನ್ನಾಯ್ದು ವಿಭಿನ್ನ ಪಠ್ಯಗಳಾಗಿಸಬಹುದು. 'ಭೀಷ್ಮ
ವಿಜಯ'ದಲ್ಲಿ ಭೀಷ್ಮ ಅಂಬೆ ಸಂವಾದ, ಸಾಲ್ವ-ಅಂಬೆ, ಪುನಃ
ಭೀಷ್ಮ-ಅಂಬೆ ಸಂವಾದ ; ಅಂಬೆಯ ಪ್ರತಿಜ್ಞೆ-ಇಲ್ಲಿಗೇ ನಿಲ್ಲಿ
ಸಿದರೂ, ಅದೊಂದು ಪ್ರಸಂಗ ಪಠ್ಯವೇ ಆಗುತ್ತದೆ. ಅರ್ಥದ
ಒಟ್ಟು ಮೊತ್ತವಂತೂ ನಿತ್ಯ ನಿತ್ಯ ಪ್ರತ್ಯೇಕ ಪಾಠವೇ ಆಗಿದೆ.
3.ಪುನರಾವರ್ತನೆ ಎಂಬುದು ನಮ್ಮ ಪುರಾಣ, ಕಥಾಸಾಹಿತ್ಯ, ಕಲೆ
ಗಳಲ್ಲಿ ಇರುವ ಒಂದು ಮುಖ್ಯ ಅಂಶ. ರಸದ ನಿರ್ಮಾಣಕ್ಕೆ,
ಕಥೆ ತಿಳಿಯುವುದಕ್ಕೆ ಇದು ಬೇಕು ಎಂಬುದರಿಂದ ಭಾರತೀಯ
ಕಲೆಗಳಲ್ಲಿ ಇದಕ್ಕೆ ಪ್ರಾಧಾನ್ಯ ದೊರೆತಿದೆ. ಪ್ರಸಂಗಗಳಲ್ಲಿ
ಇದು ಇದೆಯಷ್ಟೆ. ಉದಾ-'ವಾಲಿವಧೆ' ಒಂದು ಪ್ರಸಂಗದಲ್ಲಿ