ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
144
ಮಾರುಮಾಲೆ


ಆವರೆಗಿನ ರಾಮನಕಥೆ, ವಾಲಿ ಸುಗ್ರೀವರ ಕಲಹದ ಕಥೆ-
ಐದೈದು ಬಾರಿ ಬರುತ್ತದೆ.
ಇದು ಸಹಜವೇ. ಆಧುನಿಕ
ಸಂಸ್ಕಾರಕ್ಕೆ ಹೊಂದಿ, ಈ ಪುನರಾವರ್ತನೆಗಳನ್ನು, ಭಾಷೆ,
ಭಾವ, ನೋಟ, ವ್ಯಾಖ್ಯೆಗಳಲ್ಲಿ ಭಿನ್ನವಾಗಿ ಮೂಡಿಸುವುದೂ,
ಪ್ರಯೋಗಶೀಲನಾದ ಕಲಾವಿದನಿಗೆ ಒಂದು ಒಳ್ಳೆಯ ಸಂದರ್ಭ,
ಅನುಭವ ಕೂಡ.
4. ಪ್ರಸಂಗ ಕಾವ್ಯದ ಶಬ್ದಗಳನ್ನೇ ಹಿಡಿದು, ಅದಕ್ಕೆ ಹೊಸ ಅರ್ಥದ
ಜೀವ ತುಂಬುವ ಪ್ರಯೋಗವನ್ನು ವಿಶೇಷವಾಗಿ ತೊಡಗಿದವರು
ದಿ। ಕೀರಿಕ್ಕಾಡು ವಿಷ್ಣು ಮಾಸ್ಟರರು. ಒಂದು ಉದಾಹರಣೆ-
ಕರ್ಣಪರ್ವದಲ್ಲಿ ಕರ್ಣಾರ್ಜುನರು ಪರಸ್ಪರರ ರಥಗಳನ್ನು
ಹಾರಿಸುವ ಸನ್ನಿವೇಶ “ಈಪರಿಯೊಳಾರವಿಜಫಲುಗುಣರು....
ಈ ಪರಂಪರೆಯ ಮೇಲೆ ಪತ್ತು ಬಿಲ್ಲಂತರಂ ಪಿಂತೆ ಸರಿದುದು
ಧಿರನೆ” ಇಲ್ಲಿ, ಅರ್ಜುನನು ಕರ್ಣನ ರಥವನ್ನು ಬುಗರಿಯಂತೆ
ಹಾರಿಸಿದ್ದು, ಆಕಾಶದಲ್ಲಿ. ಆದರೆ ಕರ್ಣನು ನೆಲದಮೇಲೆಯೇ
ಹಿಂದೆ ತಳ್ಳಿದಂತೆ ದೂಡಿದುದು ಎಂಬುದನ್ನು ವಿವರಿಸಿ, ಈ ನೆಲದ
ಮೇಲೆ, ಮನುಷ್ಯನೇ ಆಗಿ, ಕರ್ಣನ ಸಾಧನೆಯೇ ಲೌಕಿಕ
ಮಟ್ಟದ್ದು, ಶ್ರೇಷ್ಠವಾದದ್ದು ಎಂಬ ವಿವರಣೆ, ಇದು ತುಂಬ
ಮಾರ್ಮಿಕವಾದದ್ದು. ಇದನ್ನೆ ಶೇಣಿ ಅವರು ಇನ್ನಷ್ಟು
ವಿಸ್ತರಿಸಿ ನೆಲದಮೇಲೆ, ಅಂದರೆ 'ಮಣ್ಣಿನ ಮಗ'ನಾಗಿ ಮಾಡಿದ
ಸಾಧನೆ, ಅರ್ಜುನನದು ಚಮತ್ಕಾರ ಪವಾಡ, ಕರ್ಣನದು
ವಿಕ್ರಮದ ಸಿದ್ಧಿ-ಎಂದೆಲ್ಲ ವಿವರಿಸುತ್ತಾರೆ.
5. ಪನ್ನೀರ ರಾಮನಿಗೆ । ಪಂಕಜಾಕ್ಷಿಯ ಕಿರೆಯ । ಚಿನ್ನಗಳ ತೊಡಿ
ಸಿದರು । ಬೆನು ಮಯಾತ್ಮಕೆ ।।-ಇದು ಪಾರ್ತಿಸುಬ್ಬ ಕವಿಯ
ಪಟ್ಟಾಭಿಷೇಕ ಪ್ರಸಂಗದ ಪದ್ಯ. ರಾಮನು ಪಟ್ಟಕ್ಕೆ ಸಿದ್ಧ
ನಾಗುತ್ತಿರುವ ಸಂದರ್ಭ. ಇಲ್ಲಿ, ಬಹಳ ದೊಡ್ಡ ಪರಂಪರೆ