ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ
೪೫

ಸಂಪಾದನ ಮಾಡುವ ಮತ್ತು ಬೇರೆ ಪದ್ಯಗಳನ್ನು ಪ್ರಸಂಗದ ಮಧ್ಯೆ ಸೇರಿಸಿ, 'ಕಸಿ' ಮಾಡುವ ವಿಧಾನಗಳಿಗೂ, ಉಳಿದವರ ರೀತಿಗಳಿಗೂ ವ್ಯತ್ಯಾಸವಿದೆ.
11. ಬಡಗು ತಿಟ್ಟಿನಲ್ಲಿ ಗದಾಪರ್ವದಲ್ಲಿ, ಭೀಮನು ಸೋತಾಗ ಕೌರ ವನ, ಕೌರವನು ಸೋತಾಗ ಭೀಮನೂ ಮೂದಲಿಸುವ ಪದ್ಯಗಳನ್ನು ಮುಖ್ಯವಾಗಿ ಗಣಿಸುತ್ತಾರೆ. ಅಲ್ಲಿನ ಅಭಿನಯ ಪದ್ಧತಿ ಅದಕ್ಕೆ ಕಾರಣ.
12. ನೋಡಿ : ಮುಳಿಯ ಮಹಾಬಲ ಭಟ್ಟರ ಲೇಖನ: ನೇತ್ರಾವತಿ ದ.ಕ. ಜಿಲ್ಲಾ ದ್ವಿ, ಸಾಹಿತ್ಯ ಸಮ್ಮೇಲನ ಸ್ಮರಣ ಸಂಚಿಕೆ, 1985.
13. ನೋಡಿ : ದಿ॥ ದೇರಾಜೆ ಸೀತಾರಾಮಯ್ಯನವರ ಅರ್ಥಸಹಿತ ಭೀಷ್ಮಾರ್ಜುನ, ಕೆರೆಮನೆ ವೆಂಕಟಾಚಲ ಭಟ್ಟ, ಸಾಸನೂರು ಸಿದ್ದಾಪುರ ಉ.ಕ.-ಇವರು ಭಿನ್ನ ಕರ್ತೃಕ ಕರ್ಣಾರ್ಜುನ ಸಂಯೋಜಿಸಿ ಪ್ರಕಟಿಸಿದ ಕರ್ಣಾರ್ಜುನ.
14. ಈ ಪ್ರಯೋಗವನ್ನು ಬಳಕೆಗೆ ತಂದವರು ದಿ॥ ಹಿರಿಯ ಬಲಿಪ ನಾರಾಯಣ ಭಾಗವತರೆಂದು ಹೇಳುವರು.
15. ಇಂತಹ ಸೂಕ್ಷ್ಮವಾದ ಅನುಸರಣೆಯ ಕೌಶಲ ದಿ॥ ತಿಮ್ಮಪ್ಪ ನಾಯಕ, ನೆಡೆ ನರಸಿಂಹ ಭಟ್, ದಿ॥ ಕುದ್ರೆಕೂಡ್ಲು ರಾಮಭಟ್, ಚಪ್ಪಾರು ಕೃಷ್ಣಯ್ಯ ಬಲ್ಲಾಳರಂತಹ ಮದ್ದಲೆಗಾರರ ವಾದನದಲ್ಲಿ ಪ್ರಬುದ್ಧವಾಗಿರುವು ದನ್ನು ಸಹೃದಯರು ಗಮನಿಸಿರುವರು.
16. ಪ್ರಸಂಗದ ಪದ್ಯಗಳ ಬಂಧವನ್ನು ಅತ್ಯಂತ ಸಮರ್ಪಕವಾಗಿ ಹಾಡುಗಾರಿಕೆಯಲ್ಲಿ ಬಳಸುವ ಭಾಗವತರೆಂದರೆ-ಬಲಿಪ ನಾರಾಯಣ ಭಾಗ ವತರು, ಕಡತೋಕ ಮಂಜುನಾಥ, ಅಗರಿ ಶ್ರೀನಿವಾಸ ಭಾಗವತರು ಮರವಂತೆ ನರಸಿಂಹದಾಸ ಮತ್ತು ವಿಠಲ ಪಾಬೀಲರು.
17. ನೋಡಿ: ಅರ್ಥಗಾರಿಕೆ: ಸ್ವರೂಪ ಸಮೀಕ್ಷೆ, ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, ಮಂಗಳೂರು 1981.
18. ಸೇಡಿಯಾಪು ಕೃಷ್ಣಭಟ್ಟರ ಲೇಖನ: ತಾಳಮದ್ದಲೆಯ ಸುಧಾ ರಣೆ, ರಾಷ್ಟ್ರಬಂಧು 1930- 28-7-1930, 4-8-1930, 11-8-1930.