ಪುಟ:ಮಾಲತಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾಲತೀ

ಅವನ ಆಶ್ರಿತೆ ಮಾತ್ರವಾಗಿದ್ದಳೇ ಹೊರ್ತು ಅವರವರಿಗೆ ಪರಸ್ಪರ ರಕ್ತಸಂ
ಬಂಧವಾವದೂ ಇಲ್ಲ-ಈ ಕಾರಣಗಳಿಂದಲೂ ಅವಳ ಹೃದಯದಲ್ಲಿ
ವ್ಯಥೆಯುಂಟಾಗಿರಬಹುದು. ಆದರೆ ಆ ಕಾರಣಗಳೆಲ್ಲಾ ಅವಳ ಮನಸ್ಸಿಗೆ
ಹೊಳಿಯಲಿಲ್ಲ.ತನಗೇನು ಕಷ್ಟ ಬಂದಿತೋ ರಮೇಶನು ನುಡಿದ ದುಃಖಕರ
ವಾದ ಮಾತುಗಳಾವವೋ,ಅವಾವೂ ಅವಳಿಗೆ ಗೊತ್ತಾಗಲಿಲ್ಲ. ಅಕಾರಣ
ವಾಗಿ ಮರ್ಮವನ್ನು ಭೇದಿಸುವ ತೀವ್ರವಾದಾವದೋ ಒಂದು ಯಾತನೆಯು
ಅವಳ ಹೃದಯವನ್ನು ಪೀಡಿಸುತ್ತಿದ್ದಿತು.
ನೋಡುತ್ತಿದ್ದ ಹಾಗೆ ಚೌತಿಯ ಚಂದ್ರನು ಮೇಘದಲ್ಲಿಮುಚ್ಚಿ
ಹೋದನು. ಉದ್ಯಾನವನ್ನೂ ನದಿಯನ್ನೂ ಪೃಥ್ವಿಯನ್ನೂ ಅವುಗಳೊಂದಿಗೆ
ಚಿರಹಾಸ್ಯಮಯಿಯಾಗಿದ್ದಾ ಮಾಲತಿಯ ಹೃದಯವನ್ನೂ ಅಂಧಕಾರದಿಂದ
ಮುಚ್ಚಿ ಚಂದ್ರನು ಅಸ್ತಮಿತನಾದನು. ಹುಡುಗಿಯು ದುಃಖಾತಿಶಯ
ದಿಂದ ಜ್ಞಾನವಿಲ್ಲದವಳ೦ತೆ ಮೌನವಾಗಿ ಅಳುವುದಕ್ಕೆ ತೊಡಗಿದಳು.
ರಮೇಶನು ಅವಳ ಮನದ ಭಾವವನ್ನು ತಿಳಿದವನಾಗಿ, ಮಾಲತಿ!
ಅಳುವುದೇಕೆ? ನೀನೆನಗೆ ಸೋದರಿಯಾಗದಿದ್ದರೂ ತಂಗಿಯಾಗಿರುತ್ತಿ?
ನಾನು ನಿನಗೆ ಸೋದರನಾಗದಿದ್ದರೂ ಅಣ್ಣನಾಗಿದ್ದೇನೆ, ನಿನಗೂ ನನಗೂ
ಸಂಬಂಧವಿಲ್ಲದಿದ್ದರೂ ಚಿಕ್ಕಂದಿನಿಂದ ಬೆಳೆದುಬಂದ ಸ್ನೇಹವಾವಾಗಲೂ
ಹೋಗದು, ಅದು ಸಾಯುವತನಕ ಹೃದಯದಲ್ಲಿ ಬದ್ದ ಮೂಲವುಳ್ಳದು
ದಾಗಿರುವುದು. ನೀನೆನಗೆ ಸೋದರಿಯಾಗಿದ್ದರೂ ನಾನೀಗ ನಿನ್ನನ್ನು
ಪ್ರೀತಿಸುವುದಕ್ಕಿಂತ ಹೆಚ್ಚು ಪ್ರೀತಿಸುತ್ತಿರಲಿಲ್ಲ, ಈಗ ನಿನ್ನ ಮೇಲಿ
ರುವ ನನ್ನ ವಿಶ್ವಾಸವು ಶುದ್ಧವಾದುದು, ಎಂದಿಗೂ ವಿಚ್ಛೇದವಾಗತಕ್ಕು
ದಲ್ಲ,ದೇವತೆಗಳಲ್ಲಿಯೂ ಅಂತಹ ವಿಶ್ವಾಸವು ದುರ್ಲಭವಾದುದು ಎಂದು
ಹೇಳಿದನು.
ಮಾಲತಿಯ ಕಣ್ಣೀರನ್ನೊರಸಿದನು. ದುಃಖಮಯವಾಗಿದ್ದ ಮಾಲ
ತಿಯ ಮೂರ್ತಿಯು ಪುನಃ ಪ್ರಫುಲ್ಲವಾಯಿತು. ಮಾಲತಿಗೆ ಮತ್ತೇನು
ಬೇಕಾಗಿದ್ದಿತು? ಮೊದಲಿನ ಸ್ನೇಹ-ಮೊದಲಿನ ಮಮತೆ ಅವಳಿಗೆ ಮತ್ತಾ
ವದರ ದುಃಖ!