ಪುಟ:ಮಾಲತಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಮಾಲತೀ

ದುಲ್ಲ ಹಜಣಅನುರಾಜ ಲಜ್ಞಾ ಗುರುಇವರನ್ನಸೋಅಪ | ವಿಅಸಹಿ ವಿಸಮಂಪೆಮ್ಮಂ ಮರಣಂ ಶರಣಂ ೧೦ವರಿಅಮೆಕ್ಕಲ | ಇಷ್ಟು ಓದಿ ಅದರ ಅರ್ಥವನ್ನು ಹೇಳುತ್ತಿದ್ದಾಗ ಅವನ ದೃಷ್ಟಿಯು ಶೋಭ ನೆಯಮೇಲೆ ಬಿದ್ದಿತು. ನೋಡಲಾಗಿ ಅವಳ ಕಣ್ಣುಗಳಲ್ಲಿ ಎರಡು ಬಿಂದು ಕಣ್ಣೀರು ಬಂದಿದ್ದಿತು. “ಯುವಕನು, ಕೋಭನೆ ! ಇದ್ದ ಹಾಗೆ ಪದ್ಮಸದೃಶ ನಯನದಲ್ಲಿ ತಿಶಿರಕೋಭಾ ! ಶ್ಲೋಕಾರ್ಥವು ಮನದಲ್ಲಿ ನಾಟಿದಂತಿದೆ ಎಂದನು. ಶೋಭನೆಯು ಬೆಚ್ಚಿ, ಆವ ಶ್ಲೋಕವೆಂದು ಕೇಳಿದಳು. ಶೋಭನೆಯು ಶ್ಲೋಕವನ್ನು ಕೇಳುತ್ತಿರಲಿಲ್ಲ. ಅನ್ಯಮನಸ್ಕಳಾಗಿ ಬೇರೆ ಚಿಂತೆಯಲ್ಲಿ ಮುಳುಗಿದ್ದಳು. ಯುವ- ನು ಓದುವುದು ಮುಂದಕ್ಕೆ ಸಾಗಲಿಲ್ಲ. ಪುಸ್ತಕವನ್ನು ಮುಚ್ಚಿಟ್ಟು ಶೋಭನೆಯನ್ನು ಹತ್ತಿರ ಎಳೆದು ಕೊಂಡು, “ ಶೋಧನೆ! ನಿನ್ನ ಮೊದಲ ನಗುವಲ್ಲಿ ಹೋಯಿತು? ಮದುವೆಗೆ ಮೊದಲು ನಾನು ನಿಮ್ಮ ಮನೆಗೆ ಬಂದಿದ್ದಾಗ ನಿನ್ನ ಮುಖವು ಹರ್ಷದಿಂದ ಅರಳಿದ್ದಂತಿರುವುದು. ಈಚೆಗೆ ಆ ಭಾವವು ಕಾಣುವುದಿಲ್ಲವೇಕೆ? ನೀನು ಸರ್ವದಾ ವ್ಯಸನಾಕಾಂತೆಯಾಗಿರುವಂತೆ ತೋರುತ್ತದೆ. ಕೇಳಿದರೆ ಹೇಳು ವುದಿಲ್ಲ. ಶೋಭನೆ! ನನ್ನನ್ನು ಮದುವೆಯಾದುದಕ್ಕೆ ಅನುತಾಪವೇನಾದರೂ ಹುಟ್ಟಿತೆ?' ಎಂದು ಕೇಳಿದನು. ಶೋಭನೆಯ ಕಣ್ಣುಗಳಿಂದ ಧಾರೆಯಾಗಿ ನೀರು ಹರಿಸಿತು. ಅವಳು ಗದ್ದ ದಸರದಿಂದ, “ನನ್ನ ಸರ್ವಸ್ಪನೆ ! ನಿನ್ನನ್ನು ಮದುವೆಯಾಗಿ ನನಗೆ ಅನು ತಾಪವೆ! ನಿನ್ನೊಂದಿಗೆ ನರಕವಾಸವೂ ಅನುತಾಪಕ್ಕೆ ಕಾರಣವಾಗದು ! ಅದೂ ನನ್ನ ಪಕ್ಷಕ್ಕೆ ಸ್ವರ್ಗವಾಗಿರುವುದು! ನಿನ್ನನ್ನು ಮದುವೆಯಾದುದಕ್ಕೆ ನನಗೆ ಅನುತಾಪವುಂಟ? ಆದರೆ:- ಯುವಕ-ಅವರೆ, ಏನು? ಹೊಟ್ಟು, ಕೋಭನೆ! ನಿನ್ನ ಭಾವವನ್ನು ನೋ ಡಿದರೆ ನನಗೆ ಉಂಟಾಗುವ ಯಾತನೆಯನ್ನು ನೀನು ತಿಳಿಯುವವಳಾದರೆ:- ಮಾತು ಶೋಧನೆಯ ಮನಕೆ ತಟ್ಟಿತು, ಅವಳು ವ್ಯಥೆಯಿಂದ, 'ನನ್ನಿಂ ದೇನಾಗಿದೆಯೋ ನಾನದನ್ನು ಅರಿಯೆನು - ಆದರೆ ನನ್ನನ್ನು ಮದುವೆಯಾಗಿ ನೀವು ಸುಖ ಪಡಲಿಲ್ಲ” ಎಂದಳು. (8) - GV