ಪುಟ:ಮಿಂಚು.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

202

ಮಿಂಚು

....ಸಂಜೆ ಜೀಪು ಪಾಲಂ ವಿಮಾನ ನಿಲ್ದಾಣ ತಲಪಿ ಮುಖ್ಯಮಂತ್ರಿ ಮತ್ತಿತ
ರರು ಇಳಿದಾಗ, ಯಾರೋ ಒಬ್ಬ ಮಧ್ಯ ವಯಸ್ಕ ಫೆರ್ನಾಂಡೀಸ್‌ನನ್ನು ಸಮೀಪಿಸಿ
ಕೇಳಿದ :
“ಅವರು ಕಿಷ್ಕಂಧೆಯ ಸಿಎಂ, ಅಲ್ವ ? ನಾನು ಮುದ್ದು ಕೃಷ್ಣ ಐ.ಎ.ಎಸ್.
ಗಣಿ ಇಲಾಖೆ ಜಂಟಿಕಾರ್ಯದರ್ಶಿ, ಒಂದು ನಿಮಿುಷ ಅವರ ಜತ ಮಾತಾಡ
ಬಹುದೆ ?”
ಸೌದಾಮಿನಿ ಒಪ್ಪಿದಳು, ಅವನೆಂದ :
“ನನಗೆ ನನ್ನ ಮಾತೃರಾಜ್ಯಕ್ಕೆ ಬರುವ ಆಸೆ ನನ್ನ ಬಂಧುಗಳೆಲ್ಲ ಅಲ್ಲಿಯೇ
ಇದ್ದಾರೆ. ಚೌಗುಲೆಯವರು ನನಗೆ ಗೊತ್ತು. ಅವರ ಕೆಳಗೆ ಸೂಕ್ತ ಜಾಗಕ್ಕೆ ನನ್ನನ್ನು
ಕರೆಸಿಕೊಂಡರೆ ತಮ್ಮ ಸೇವೆ ಮಾಡಿ ಧನ್ಯನಾಗ್ತೇನೆ.”
“ಆಗಲಿ, ನೋಡೋಣ.”
ಇನ್ನೊಂದು ಸಣ್ಣ ವಿಷಯ. ಹೋದ ತಿಂಗಳು, ಒಂದು ಸೈಟು ದಯೆ
ಪಾಲಿಸಬೇಕೂಂತ ಅರ್ಜಿ ಹಾಕಿದ್ದೆ.”
“ಆಗಲಿ, ನೋಡೋಣ.”