ಟಿಪ್ಪಣಿಗಳು
೧೨೧
ಶಶಕಪುರದ ಹತ್ತಿರ ವಾಸಂತಿಕಾ ದೇವಾಲಯವಿತ್ತು. ಅಲ್ಲಿಗೆ ಒಮ್ಮೆ ಸಳ
ಹೋದಾಗ ಅಲ್ಲಿ ಒಬ್ಬ ಜೈನಗುರು ಧ್ಯಾನಾಸಕ್ತರಾಗಿದ್ದರು. ಅವರ ದರ್ಶನವನ್ನು
ಪಡೆಯುತ್ತಿರಲು ಅಷ್ಟರಲ್ಲಿ ಹುಲಿಯೊಂದು ಅಲ್ಲಿಗೆ ಬಂದು ಮೇಲೆ ಬೀಳಲು
ಉದ್ಯುಕ್ತವಾಯಿತು. ಅದನ್ನು ಕಂಡ ಯತಿ 'ಹೊಯ್ ಸಳ' ಅಂದರೆ 'ಎಲೈ
ಸಳನೇ ಹೊಡೆ' ಎಂದನು. ಆ ಕೂಡಲೇ ಸಳನು ಕೈಲಿದ್ದ ಆಯುಧದಿಂದ
ಹುಲಿಯನ್ನು ಹೊಡೆದು ಕೊಂದುಹಾಕಿದನು. ಅವನ ಧೈರ್ಯಕ್ಕೆ ಮೆಚ್ಚಿ ಜೈನಯತಿ
ವಾಸಂತಿಕಾದೇವಿಯ ಅನುಗ್ರಹವು ಆತನಿಗೆ ಲಭಿಸುವಂತೆ ಮಾಡಿದನು; ಸುತ್ತಮುತ್ತಲ
ಪ್ರದೇಶಕ್ಕೆಲ್ಲ ರಾಜನಾಗುವಂತೆ ಆಶೀರ್ವದಿಸಿದನು. ಸಳನಿಗೆ ಅಲ್ಲಿಂದ ಮುಂದೆ
ಪೊಯ್ಸಳ ಅಥವಾ ಹೊಯ್ಸಳನೆಂದೂ ಆತನ ವಂಶಕ್ಕೆ ಹೊಯ್ಸಳ ವಂಶವೆಂದೂ
ಹೆಸರಾಯಿತು. (ಪು. ೧೨೬-೧೨೭)
ಇಲ್ಲಿ ಜನ್ನ ಸಳನು ಯತಿಯ ಕುಂಚದ ಸೆಳೆಯಿಂದ ಹೊಯ್ದನು ಎಂದಿದ್ದಾನೆ.
೬. ಎರೆಯಂಗನಿಗೂ ಏಚಲದೇವಿಗೂ ಮಗನಾದ ಕಾರಣವೇ ವಿಷ್ಣು
ನೃಪಾಲನು ಉದಾರನೂ, ವೀರನೂ, ರಕ್ಷಕನೂ ಆಗಿದ್ದನೆಂದು ತಾತ್ಪರ್ಯ,
ಒಳ್ಳೆಯ ತಾಯಿ ತಂದೆಗಳಿಂದ ಮಕ್ಕಳಿಗೂ ಒಳ್ಳೆಯ ಗುಣಗಳು ಬರುತ್ತವೆ
ಎಂದು ಸೂಚಿತವಾಗಿದೆ.
೭. ಪ್ರತಾಪ ಎಂದರೆ ಬಹಳ ಉರಿ, ಪ್ರತಾಪಚಕ್ರೇಶ್ವರ ಸೂರ್ಯ.
೮. ಮೂಳುವರೆ ರಾಯರು-ನಾಲ್ಕೂ ದಿಕ್ಕುಗಳಲ್ಲಿ ಇರುವ ಪ್ರಮುಖ
ರಾಜರು ನಾಲ್ವರು. ಒಂದು ದಿಕ್ಕಿನಲ್ಲಿ ಬಲ್ಲಾಳನೇ ಇದ್ದಾನೆ. ಉಳಿದ ಮೂರು
ದಿಕ್ಕುಗಳಲ್ಲಿ ಮೂವರು ರಾಜರಿದ್ದಾರೆ. ಇವರಲ್ಲದೆ ಅರೆ ಎಂದರೆ ಕೆಲವು (ಅರೆ
ಎಡೆ ಹಸ್ತಿ ಶಿಕ್ಷಣ ವಿಚಕ್ಷಣರ್ ಎಂಬಲ್ಲಿ ಬರುವ ಅರೆ ಎಂಬುದಕ್ಕೆ ಕೆಲವು
ಎಂಬುದೇ ಅರ್ಥ) ರಾಜರು ಬೇರೆ ಇದ್ದಾರೆ. ಇವರು ಹೆಸರಿಗೆ ಮಾತ್ರ ರಾಜರು.
೯. ಶ್ರೇಷ್ಠ ಕವಿಗಳಲ್ಲಿ ಪರಮೇಶ್ವರನಂತಿದ್ದಾನೆ. ಎಷ್ಟು ಮಂದಿ ಕಲಾನಿಪುಣರು
ತಮ್ಮ ನೈಪುಣ್ಯವನ್ನು ತೋರಿಸಿದರೂ, ಜನ್ನನು ಬೆರಳೆತ್ತಿ ನಿಂತು ಅವರನ್ನು
ಮೀರಿಸಬಲ್ಲವನಾಗಿದ್ದನೆಂದು ಭಾವ.
೧೦. ಯಾದವ ರಾಜಚ್ಛತ್ರ-ಯಾದವರಾಜರ ಛತ್ರದ ಕೆಳಗೆ ಇರುವವನು;
ಅವನ ಆಶ್ರಿತನು.
೧೧. ಸುಮನೋಬಾಣನೆಂದರೆ ಕಾಮ; ಭಾಳಲೋಚನನೆಂದರೆ ಶಿವ.
ಶಿವನು ಕಾಮನನ್ನು ಸುಟ್ಟನೆಂದು ಪೌರಾಣಿಕ ಕಥೆ. ಆದರೆ ಇಲ್ಲಿ
ಸುಮನೋಬಾಣನಿಗೆ ಭಾಳಲೋಚನನು ಮಗನಾಗಿರುವುದು ವಾಣೀ