ಪುಟ:ಯಶೋಧರ ಚರಿತೆ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಯಶೋಧರ ಚರಿತೆ


ಇಂತೆಂಬುದುಮಾ ಕುವರನ
ದಂತಪ್ರಭೆಯೆಂಬ ಶೀತಕರನುದಯದಘ
ಧ್ವಾಂತೌಘಮಧುಪಮಾಲಿಕೆ
ಯಂ ತೊಲಗಿಸಿ ಮುಗಿದುದವನ ಕರಸರಸಿರುಹಂ೬೭

ಧನಮಂ ಕಂಡ ದರಿದ್ರನ
ಮನದವೊಲೆರಗಿದವು ಪರಿಜನಂಗಳ ನೊಸಲಾ
ವಿನಯನಿಧಿಗಾ ಕುಮಾರಕ
ನನುರಾಗದೆ ಮಾರಿದತ್ತ ವಿಭುಗಿಂತೆಂದಂ ೬೮

ಭಲರೆ ನೃಪೇಂದ್ರಾ ದಯೆಯೊಳ್
ನೆಲೆಗೊಳಿಸಿದೆ ಮನಮನಮಮ ನೀನ್ ಕೇಳ್ದುದು ಸ
ತ್ಫಲವಾಯ್ತು ಧರ್ಮಪಥದೊಳ್
ಸಲೆ ಸಂದಪೆ ಕಾಲಲಬ್ಧಿ ಪೊಲಗಡಿಸುವುದೇ ೬೯



ಹೇಳಿದನು ಅಭಯರುಚಿ ೬೭. ಒಡನೆಯೇ ಮಾರಿದತ್ತನ ಕರಕಮಲವು
ಮುಚ್ಚಿಕೊಂಡಿತು. ಅಭಯರುಚಿ ಕುಮಾರನು ಮಾತಾಡುತ್ತಿದ್ದಾಗ ಅವನ ಹಲ್ಲಿನ
ಕಾಂತಿ ಹಬ್ಬಿ ಚಂದ್ರೋದಯವಾಯಿತು. ಆಗ ಪಾಪದ ಕತ್ತಲೆಯ ಮೊತ್ತವಲ್ಲ
ಎತ್ತೆತ್ತಲೋ ಮಾಯವಾಯಿತು. ತಾವರೆ ಮುಚ್ಚಿಕೊಳ್ಳುವಾಗ ಭ್ರಮರಗಳು ಎದ್ದು
ಹೋಗುವಂತೆ ಮಾರಿದತ್ತನ ಪಾಪಗಳು ತೊಲಗಿದವು.೬೮. ಧನವನ್ನು
ಕಂಡಾಗ ದರಿದ್ರನ ಮನಸ್ಸು ಅದಕ್ಕೆರಗುತ್ತದೆ. ಹಾಗೆಯೇ ರಾಜನ ಸೇವಕ
ಜನರೆಲ್ಲರ ಲಲಾಟಗಳೂ ಆ ವಿನಯನಿಧಿಯಾದ ಅಭಯರುಚಿಗೆ ಮಣಿದವು.
ಆಗ ಆ ಕುಮಾರನು ಮಾರಿದತ್ತನಿಗೆ ಪ್ರೀತಿ ಪೂರ್ವಕವಾಗಿ ಹೀಗೆಂದನು. ೬೯.
“ಶಹಭಾಸ್ ರಾಜೇಂದ್ರ ನಿನ್ನ ಮನಸ್ಸನ್ನು ಈಗಲೀಗ ದಯೆಯಲ್ಲಿ ನೆಲೆಗೊಳಿಸಿದೆ.
ಅಹಹಾ! ನೀನು ಪ್ರಶ್ನೆ ಮಾಡಿದುದು ಒಳ್ಳೆಯದಕ್ಕೇ ಆಯಿತು. ಇನ್ನು ಮುಂದೆ
ನೀನು ಧರ್ಮಮಾರ್ಗದಲ್ಲಿ ಸರಿಯಾಗಿ ಸಾಗಲಿರುವೆ. ಕಾಲಲಬ್ದಿ