ಪುಟ:ಯುಗಳಾಂಗುರೀಯ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಹಿರಣ್ಮಯಿಗೆ ವಿವಾಹದ ವಯಸ್ಸು ಅತಿಕ್ರಮಿಸಿದ್ದಿತು. ಅವಳು
ತನಗಿಷ್ಟವಾದ ಗಂಡನನ್ನು ಪಡೆಯಬೇಕೆಂದು, ಹನ್ನೊಂದು ವರ್ಷದ ವಯ
ಸ್ಸಿನಿಂದ, ಕ್ರಮವಾಗಿ ಐದು ವರ್ಷದಿಂದಾ ಸಮುದ್ರದ ತೀರದಲ್ಲಿ ವಾಸ
ಮಾಡುತ್ತ, “ಸಾಗರೇಶ್ವರಿ ” ಎಂಬ ದೇವಿಯನ್ನು ಪೂಜೆ ಮಾಡುತಿದ್ದಳು.
ಆದರೆ ಅವಳ ಮನೋರಥವು ಸಫಲವಾಗಲಿಲ್ಲ. ಯೌವನ ಪ್ರಾಪ್ತೆಯಾದಾ
ಕುಮಾರಿಯು ಏಕಾಂಗಿಯಾಗಿ ಆ ಯೌವನ ಪುರುಷನ ಸಂಗಡ ಮಾತಾಡು
ತಿದ್ದುದೇಕೆಂಬುದು ನಿಮ್ಮೆಲ್ಲರಿಗೂ ಗೊತ್ತಿರಬಹುದು.ಹಿರಣ್ಮಯಿಯು
ನಾಲ್ಕು ವರ್ಷದ ಹುಡುಗಿಯಾಗಿದ್ದಾಗ ಯುವಕನಿಗೆ ಎಂಟು ವರ್ಷ.
ಯುವಕನ ತಂದೆಯಾದ ಶಚೀಸೂತ ಶೆಟ್ಟಿಯು ಧನದಾಸನಿಗೆ ನೆರೆಯವನಾ
ಗಿದ್ದನು. ಅದುಕಾರಣ ಹುಡುಗನೂ ಹುಡುಗಿಯೂ ಏಕತ್ರ ಬಾಲ್ಯ
ಸ್ನೇಹಿತರಾಗಿ ಆಡುತಿದ್ದರು. ಅವರೀರ್ವರೂ ಶಚೀಸೂತನ ಮನೆಯಲ್ಲಾ
ಗಲಿ, ಧನದಾಸನ ಮನೆಯಲ್ಲಾಗಲಿ ಸರ್ವದಾ ಸಂಗಾತಿಗಳಾಗಿ ಆಡುತ್ತಿರು
ವರು. ಈಗಾ ಯುವತಿಗೆ ಹದಿನಾರು ವರ್ಷ ; ಯುವಕನಿಗೆ ಇಪ್ಪತ್ತು
ವರ್ಷ ; ಆದರೂ ಅವರಿಬ್ಬರೂ ತಮ್ಮ ಬಾಲ್ಯಸಖಿತ್ವದ ಸಂಬಂಧವನ್ನು
ಬಿಟ್ಟಿರಲಿಲ್ಲ. ಸ್ವಲ್ಪಕಾಲದ ವರೆಗೆ ಆ ಸಂಬಂಧವು ವಿಚ್ಛಿನ್ನವಾಗಿದ್ದಿತು.
ಯಥಾಕಾಲದಲ್ಲಿ ಅವರಿಬ್ಬರ ತಂದೆತಾಯಿಗಳು ಆ ಯುವಕ ಯುವತಿಯ
ರಿಗೆ ವಿವಾಹವನ್ನು ಮಾಡಲು ನಿಷ್ಕರ್ಷೆ ಮಾಡಿದ್ದರು- ವಿವಾಹಕ್ಕೆ ಲಗ್ನವೂ
ಗೊತ್ತಾಗಿದ್ದಿತು. ಅಕಸ್ಮಾತ್ತಾಗಿ ಒ೦ದುದಿನ ಹಿರಣ್ಮಯಿಯ ತಂದೆಯು,
ತಾನು ವಿವಾಹವನ್ನು ಮಾಡುವುದಿಲ್ಲವೆಂದು ಹೇಳಿಬಿಟ್ಟನು. ಅಂದಿನ
ಮೊದಲ್ಗೊಂಡು ಹಿರಣ್ಮಯಿಯು ಪುನಃ ಪುರಂದರನನ್ನು ನೋಡಿರಲಿಲ್ಲ.
ಅಂದೊಂದು ವಿಶೇಷ ವಿಷಯವಾಗಿ ಮಾತಾಡುವುದಿದೆಯೆಂತಲೂ ದಯವಿಟ್ಟು
ಬಂದು ಹೋಗಬೇಕೆಂದೂ ಅವಳಿಗೆ ಪುರಂದರನು ಹೇಳಿ ಕಳುಹಿದ್ದನು.
ಹಿರಣ್ಮಯಿಯು ಲತಾ ಮಂಟಪದ ಬಳಿ ಬಂದು, “ ನನ್ನನ್ನು ಕರೆಯಿಸಿದು
ದೇಕೆ? ನಾನೀಗ ಬಾಲೆಯಲ್ಲ, ವಿಜನವಾದೀ ಪುಪ್ಪವಾಟಕ್ಗೆ ನಾನೊಬ್ಬಳೇ
ಬಂದು ನಿನ್ನ ಸಂಗಡ ಮಾತಾಡುವುದು ಸರಿಯಾಗಿ ಕಾಣುವುದಿಲ್ಲ ; ಪುನಃ
ಕರೆಯಿಸಿದರೆ ನಾನು ಬರುವುದಿಲ್ಲ" ವೆ೦ದು ಹೇಳಿದಳು.

ಹದಿನಾರು ವರ್ಷದ ಬಾಲೆಯು, ತಾನು ಬಾಲೆಯಲ್ಲವೆಂದು ಹೇಳು