ಪುಟ:ಯುಗಳಾಂಗುರೀಯ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವುದು ಬಹಳ ಪುಷ್ಕಳ ಸುರಸ ಪುಷ್ಟವಾದ ಮಾತು. ಆದರೆ ಆ ರಸವನ್ನು
ಅನುಭವಿಸುವವರು ಅಲ್ಲಾರೂ ಇರಲಿಲ್ಲ. ಪುರಂದರನ ವಯಸ್ಸು ಅಥವಾ
ಅವನ ಮನೋಭಾವವು ಅಂತಹದುದಾಗಿರಲಿಲ್ಲ.
ಪುರಂದರನಾ ಪುಷ್ಪವಾಟಕೆಯ ಮೇಲೆ ಹಬ್ಬಿದ್ದ ಲತೆಯಿಂದೊಂದು
ಪುಷ್ಪವನ್ನು ಕಿತ್ತುಕೊಂಡು, ಅದನ್ನು ಛಿನ್ನ ಛಿನ್ನವಾಗಿ ಹರಿದುಹಾಕುತ್ತ,
“ ನಾನು ಪುನಃ ಕರೆಯಿಸುವುದಿಲ್ಲ, ನಾನು ದೂರದೇಶ ಹೊರಟುಹೋಗು
ತೇನೆ, ನಿನಗೆ ಹೇಳಿ ಹೋಗೋಣವೆಂದು ಇಲ್ಲಿಗೆ ಬಂದೆನು ” ಎಂದನು.

ಹಿರಣ್ಮಯಿ-ದೂರದೇಶಕ್ಕೆ? ಎಲ್ಲಿಗೆ ?

ಪುರಂದರ-ಸಿ೦ಹಳದ್ವೀಪಕ್ಕೆ.

ಹಿರಣ್ಮಯಿ-ಸಿಂಹಳಕ್ಕೆ? ಏಕೆ ? ಸಿಂಹಳಕ್ಕೆ ಹೋಗಲೇಕೆ ?

ಪುರಂದರ-ಏಕೆ ಹೋಗಬೇಕೆ ? ನಾನು ಶೆಟ್ಟಿ, ವ್ಯಾಪಾರಕ್ಕೆ

ಸಲವಾಗಿ ಹೋಗುವೆನು.

ಹೀಗೆಂದು ಹೇಳುತಿದ್ದಹಾಗೆ ಪುರಂದರನ ಕಣ್ಣುಗಳಲ್ಲಿ ದರದರನೆ

ನೀರು ಸುರಿಯಿತು.

ಹಿರಣ್ಮಯಿಯು ವಿಮನೆಯಾಗಿ, ಆವ ಮಾತನ್ನೂ ಹೇಳದೆ, ಎವೆ

ಇಕ್ಕದೆ ತನ್ನೆದುರಿಗಿದ್ದ ಸಾಗರದ ತರಂಗದಲ್ಲಿ ಸೂರ್ಯನ ಕಿರಣಗಳು
ಕ್ರೀಡಿಸುತಿದ್ದುದನ್ನು ನೋಡತೊಡಗಿದಳು ; ಪ್ರಾತಃಕಾಲ, ತಂಗೊಳ್ದ
ತಂಗಾಳಿಯು ಬೀಸುತಿದ್ದಿತು ; ಮೃದುಪವನೋಸ್ಥಿತವಾದಾ ಚಿಕ್ಕ ಚಿಕ್ಕ
ತರಂಗಗಳಲ್ಲಿ ಬಾಲಾರುಣ ಕಿರಣಗಳು ಬಿದ್ದು ಕಂಪಿತವಾಗುತ್ತಿದ್ದುವು ;
ಸಮುದ್ರದ ನೀರಿನಲ್ಲಿ ಆ ಕಿರಣಗಳ ಅನಂತ ಉಜ್ವಲ ರೇಖೆಗಳು ಪ್ರಸ
ರಿಸುತಿದ್ದುವು ; ಶ್ಯಾಮಾಂಗಿಯ ಅಂಗದಲ್ಲಿ ಶುಭ್ರವಾದ ಬೆಳ್ಳಿಯ ಆಭರಣ
ಗಳಂತೆ ಸಮುದ್ರದ ನೊರೆಯು ಶೋಭಿಸುತ್ತಿದ್ದಿತು ; ಸಮುದ್ರದ ತೀರ
ದಲ್ಲಿ ಜಲಚರ ಪಕ್ಷಿಗಳು ಬಿಳುಪಾದ ರೇಖೆಯಂತೆ ಸಾಲಿಟ್ಟುಕೊಂಡು
ಹಾರಾಡುತಿದ್ದುವು ; ಹಿರಣ್ಮಯಿಯು ಅವುಗಳನ್ನು ನೋಡಿದಳು, ನೀಲ
ವಾದಾ ಜಲರಾಶಿಯನ್ನು ನೋಡಿದಳು, ತರಂಗಗಳ ಶಿರದಲ್ಲಿ ಫೇನಮಾಲೆ
ಯನ್ನು ನೋಡಿದಳು, ಸೂರ್ಯಕಿರಣಗಳ ಕ್ರೀಡೆಯನ್ನು ನೋಡಿದಳು,
ದೂರದಲ್ಲಿದ್ದ ಹಡಗುಗಳನ್ನು ನೋಡಿದಳು, ನೀಲಾಂಬರದಲ್ಲಿ ಕಪ್ಪುಚು