ಪುಟ:ಯುಗಳಾಂಗುರೀಯ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಕಿಯಂತೆ ಹಾರುತಿದ್ದ ಹಕ್ಕಿಯನ್ನು ನೋಡಿದಳು ; ಕಡೆಗೆ ನೆಲದಮೇಲೆ
ಬಿದ್ದಿದ್ದೊಂದು ಒಣಗಿದ ಹೂವಿನಮೇಲೆ ದೃಷ್ಟಿಯಿಟ್ಟುಕೊಂಡು, “ ನೀನೇ
ಕೆ ಹೋಗುಬೇಕು ? ಮಿಕ್ಕತಡವೆಯಲ್ಲೆಲ್ಲಾ ನಿಮ್ಮ ತಂದೆಯೇ ಹೋಗು
ತ್ತಿದ್ದರು ” ಎಂದಳು.
ಪುರಂದರ-ನಮ್ಮ ತಂದೆಗೆ ವಯಸ್ಸಾಗುತ್ತ ಬಂತು ; ನನಗೆ ಹಣ
ವನ್ನು ಸಂಪಾದಿಸುವ ವಯಸ್ಸು ಬಂದಿದೆ ; ನಮ್ಮ ತಂದೆಯ ಅನುಮತಿ
ಯನ್ನು ತೆಗೆದುಕೊಂಡಿದ್ದೇನೆ.
ಹಿರಣ್ಮಯಿಯು ಲತಾಮಂಟಪದ ಅಡ್ಡಮರದ ಮೇಲೆ ತಲೆಯನ್ನಿ
ಟ್ಟುಕೊಂಡು ಕತ್ತುರುಗಾದಂತವಳಾಗಿ ನಿಂತಳು. ಪುರಂದರನು ನೋಡು
ತಿದ್ದಹಾಗೆ ಸುಂದರವಾದ ಮನ್ಮಥನ ರಂಗಭೂಮಿಯಂತಿದ್ದವಳಾ ಲಲಾಟವು
ಕುಂಚಿತವಾಯಿತು, ಅಧರವು ಸ್ಪುರಿತವಾಯಿತು, ನಾಸಿಕಾರಂಧ್ರಗಳು ಅರ
ಳಿದುವು, ಹಿರಣ್ಮಯಿಯು ಅತ್ತುಬಿಟ್ಟಳು.
ಪುರಂದರನು ಮುಖವನ್ನು ತಿರುಗಿಸಿಕೊಂಡನು. ಅವನೂ ಒಂದು
ತಡವೆ ಆಕಾಶವನ್ನು ನೋಡಿದನು, ನೆಲವನ್ನು ನೋಡಿದನು, ನಗರವನ್ನು
ನೋಡಿದನು, ಸಮುದ್ರವನ್ನು ನೋಡಿದನು, ಎಲ್ಲವನ್ನೂ ನೋಡಿದನು,
ಅದಾವದರಿಂದಲೂ ನಿಲ್ಲದ ಕಣ್ಣೀರು ಹರಿದು ಅವನ ಕಪಾಲವು ತೋಯಿದು
ಹೋಯಿತು. ಪುರಂದರನು ಕಣ್ಣೀರನ್ನೊ ರಸಿಕೊಂಡು, “ನಿನಗೆ ಸಂಗತಿ
ಯನ್ನು ತಿಳಿಸಿ ಹೋಗೋಣವೆಂದು ಇಲ್ಲಿಗೆ ಪುನಃ ಬಂದೆನು, ನಿಮ್ಮ
ತಂದೆಯು ನಿನ್ನನ್ನೆನಗೆ ಕೊಟ್ಟು ಮದುವೆಯನ್ನು ಮಾಡುವುದಿಲ್ಲವೆಂದು
ಎಂದು ಹೇಳಿದನೋ, ಅಂದಿನದ ಮೊದಲ್ಗೊಂಡು ಸಿಂಹಳ ದ್ವೀಪಕ್ಕೆ ಹೊರಟು
ಹೋಗುಬೇಕೆಂದು ಸಂಕಲ್ಪವಂ ಮಾಡಿಕೊಂಡೆನು. ನಿಂಹಳದ್ವೀಪದಿಂದ
ಹಿಂದಿರುಗಿ ಬರಕೂಡದೆಂತಲೂ ಯೋಚಿಸಿಕೊಂಡಿದೇನೆ, ನಿನ್ನ ಜ್ಞಾಪಕವು
ಶುದ್ಧವಾಗಿ ಮರೆತುಹೋದರೆ ಆಗ ಹಿಂದಿರುಗಿ ಬರುವೆನು; ನನಗೆ ಹೆಚ್ಚು
ಮಾತುಗಳನ್ನು ಹೇಳುವುದಕ್ಕೆ ತೋಚುವುದಿಲ್ಲ, ಹೆಚ್ಚು ಮಾತುಗಳನ್ನು
ಹೇಳಿದರೆ ನೀನೂ ತಿಳಯಲಾರೆ; ಇಷ್ಟೊಂದು ಮಾತ್ರ ತಿಳಯಹೇಳು
ವೆನು ; ಏನೆಂದರೆ, ನನ್ನ ಪಾಲಿಗೆ ಜಗತ್ತಿನ ಸಂಸಾರವೆಲ್ಲ ಒಂದು ತೂಕ,
ನೀನೊಂದು ತೂಕ, ಆದರೆ ಜಗತ್ತೆಲ್ಲ ಸೇರಿದರೂ ನಿನ್ನ ತೂಕಕ್ಕೆ ಸಮ