ಪುಟ:ಯುಗಳಾಂಗುರೀಯ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಗದು, ಅಷ್ಟೊಂದು ಹೇಳಬಲ್ಲೆನು ; ಹೆಚ್ಚು ಹೇಳಲಾರೆನು " ಎಂದು
ಹೇಳಿ ಬೇರೆಕಡೆ ತಿರುಗಿ ಹತ್ತು ಹೆಜ್ಜೆಗಳು ಹೋಗಿ ಮತ್ತೊಂದು ಮರ
ದೊಂದೆಲೆಯನ್ನು ಕಿತ್ತುಕೊಂಡನು ; ಕಣ್ಣೀರಿನ ವೇಗವು ಸ್ವಲ್ಪ ಕಡಿಮೆ
ಯಾದ ಬಳಿಕ ಹಿಂದಿರುಗಿ ಬಂದು, " ನೀನೆನ್ನನ್ನು ಬಹಳವಾಗಿ ಪ್ರೀತಿಸು
ತ್ತಿಯೆಂದು ಚೆನ್ನಾಗಿ ಬಲ್ಲೆನು ; ಆದರೆ ನೀನೊಂದು ದಿನ ಅನ್ಯನಿಗೆ ಪತ್ನಿ
ಯಾಗುವೆಯಾದಕಾರಣ ನನ್ನನ್ನು ಜ್ಞಾಪಿಸಿಕೊಳ್ಳಬೇಡ, ಮರೆತುಬಿಡು.
ನಿನಗೂ ನನಗೂ ಇದೇ ಕಡೆಯ ಸಂದರ್ಶನ, ಪುನಃ ನಾನು ನಿನ್ನನ್ನು
ನೋಡಲಾರೆನೆಂದು ತೋರುತ್ತದೆ " ಎಂದು ಹೇಳಿದನು.
ಅಷ್ಟು ಹೇಳಿ ಪುರಂದರನು ಹೊರಟುಹೋದನು. ಹಿರಣ್ಮಯಿಯು
ಅಳುವುದಕ್ಕೆ ಪ್ರಾರಂಭಿಸಿದಳು. ಅಳುವನ್ನು ನಿಲ್ಲಿಸಿ, ಮನಸ್ಸಿನಲ್ಲಿ,
" ನಾನಿಂದು ಸತ್ತು ಹೋದರೆ ಪುರಂದರನು ಸಿಂಹಳದ್ವೀಪಕ್ಕೆ ಹೋಗಬ
ಲ್ಲನೆ ? ನಾನು ಕುತ್ತಿಗೆಗೆ ಲತೆಯನ್ನು ಬಿಗಿದುಕೊಂಡು ಸಾಯಕೂಡ
ದೇಕೆ ? ಅಥವಾ ಸಮುದ್ರದಲ್ಲಿ ಮುಣುಗಿ ಹೋಗಕೂಡದೇಕೆ ? " ಎಂದು
ಭಾವಿಸಿಕೊಂಡು, ಪುನಃ " ನಾನು ಸತ್ತ ಬಳಿಕ ಪುರಂದರನು ಸಿಂಹಳದ್ವೀ
ಪಕ್ಕೆ ಹೋದರೇನು, ಬಿಟ್ಟರೇನು ? ಅದರಿಂದ ನನಗೇನಾದಂತಾಯಿತು ? "
ಎಂದಂದುಕೊಂಡು ಪುನಃ ಅಳುತ್ತ ಕುಳಿತುಕೊಂಡಳು.

ಎರಡನೆಯ ಪರಿಚ್ಚೇದ.

——————

ಧನದಾಸನು ಮಗಳನ್ನು ಪುರಂದರನಿಗೆ ಕೊಟ್ಟು ಮದುವೆ ಮಾಡು
ವುದಿಲ್ಲವೆಂದೇಕೆ ಹೇಳಿದನೋ ಅದಾರಿಗೂ ತಿಳಿಯದು. ಅವನಾ ವಿಚಾರ
ವನ್ನಾರ ಸಂಗಡಲೂ ಹೇಳಲಿಲ್ಲ. ಅವನವರಾರಾದರೂ ಕೇಳಿದರೆ, "ವಿಶೇ
ಷವಾದೊಂದು ಕಾರಣವಿದೆ " ಎಂದು ಹೇಳುತ್ತಿದ್ದನು. ಅನೇಕರು ಬಂದು
ಹೆಣ್ಣನ್ನು ಕೇಳಿದರು. ಧನದಾಸನು ಅವರಾರ ಸಂಬಂಧವನ್ನು ಬೆಳಯಿಸು
ವುದಕ್ಕೂ ಸಮ್ಮತಿಸಲಿಲ್ಲ. ವಿವಾಹದ ಪ್ರಸ್ತಾವವನ್ನೇ ಕಿವಿಗೆ ಹಾಕಿಕೊ
ಳ್ಳನು. ಹುಡುಗಿಯು ದೊಡ್ಡವಳಾದಳೆಂದವಳ ತಾಯಿಯು ಆಕ್ಷೆಪಣೆಯಂ