ಪುಟ:ಯುಗಳಾಂಗುರೀಯ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡದಾಗಿದ್ದಿತು. ಧನದಾಸನ ಹೆಂಡತಿಯು ಅದರಲ್ಲಿ ತನ್ನ ಒಡವೆಗಳ
ನ್ನಿಡುವಳು. ಧನದಾಸನು ಹೊಸದಾಗಿ ಕೆಲವು ಒಡವೆಗಳನ್ನು ಮಾಡಿಸಿ
ಹೆಂಡತಿಗೆ ಉಪಹಾರವಾಗಿ ಕೊಟ್ಟನು. ಶ್ರೇಷ್ಠಿಯ ಪತ್ನಿಯು ಹಳೆಯ
ಒಡವೆಗಳನ್ನೆಲ್ಲ ಭರಣಿಯ ಸಮೇತವಾಗಿ ಮಗಳಿಗೆ ಕೊಟ್ಟಳು. ಹಿರಣ್ಮ
ಯಿಯು ಆ ಆಭರಣಗಳನ್ನು ಇಟ್ಟು ತೆಗೆಯುವುದರಲ್ಲಿ ಅವಳಿಗೊಂದು ಬರೆ
ದಿದ್ದ ಕಾಗದದ ಚೂರು ಸಿಕ್ಕಿತು. ಬರವಣಿಗೆಯು ಪೂರ್ತಿಯಾಗಿರಲಿಲ್ಲ.
ಹಿರಣ್ಮಯಿಗೆ ಓದುವುದಕ್ಕೆ ಬರುತಿದ್ದಿತು. ಆ ಚೂರು ಕಾಗದದಲ್ಲಿ
ಪ್ರಾರಂಭದಲ್ಲೇ ತನ್ನ ಸ್ವಂತ ಹೆಸರು ಬರೆದಿತ್ತಾದುದರಿಂದ ಕೌತೂಹಲಾ
ವಿಷ್ಟೆಯಾಗಿ ಅದನ್ನೋದಿದಳು. ಕಾಗದವು ಅರ್ಧವೇ ಇದ್ದುದರಿಂದ
ಪೂರಾ ಅರ್ಥವಾಗಲಿಲ್ಲ. ಅದಾರಾರಿಗೆ ಬರೆದುದು, ಬರೆದಿದ್ದುದೇಕೆಂಬು
ದು ಗೊತ್ತಾಗಲಿಲ್ಲ. ಆದರೂ ಅದರಲ್ಲಿದ್ದಷ್ಟು ಓದಿದುದರಿಂದ ಅವಳಿಗೆ
ಬಹು ಭಯ ಉಂಟಾಯಿತು ; ಹರಿದ ಚೂರು ಕಾಗದದಲ್ಲಿ ಬರೆದಿದ್ದುದೇ
ನೆಂದರೆ :-
ಜಾತಕವನ್ನು ಗುಣಿಸಿನೋಡಲಾ.........
......ಹಿರಣ್ಮಯಿಯಂತಹ ಸುವರ್ಣ ಪುತ್ತಲಿ.........
......ವಾಹವಾದರೆ ಭಯಂಕರವಾದ ವಿಪತ್ತು......... •...
.....ರುಷ......ಮುಖವನ್ನು ಪರಸ್ಪರ.........
...ಗಬಹುದು.......
ಹಿರಣ್ಮಯಿಯು ಗೋಚರವಿಲ್ಲದ ವಿಪತ್ತಿನ ಶಂಕೆಯನ್ನು ಹಚ್ಚಿ
ಕೊಂಡು ಅತ್ಯಂತ ಭೀತೆಯಾದಳು. ಅವಳಾರಿಗೂ ಏನನ್ನೂ ಹೇಳದೆ
ಕಾಗದದ ಚೂರನ್ನು ತೆಗೆದಿಟ್ಟುಕೊಂಡಳು.

ಮೂರನೆಯ ಹರಿಚ್ಛೇದ


__________

ಎರಡು ವರ್ಷಗಳ ಮೇಲೆ ಮತ್ತೊಂದು ವರ್ಷವಾಯಿತು : ಆದರೂ
ಪುರಂದರನು ಸಿಂಹಳದಿಂದ ಹಿಂದಿರಿಗಿ ಬರುವ ಸಮಾಚಾರವಿಲ್ಲ; ಆದರೆ