ಪುಟ:ಯುಗಳಾಂಗುರೀಯ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಿರಣ್ಮಯಿಯ ಹೃದಯದಲ್ಲಿ ಅವನಾ ಮನ್ಮಥ ಸದೃಶವಾದ ಮೂರ್ತಿಯು
ಪೂರ್ವದಂತೆ ಉಜ್ವಲವಾಗಿದ್ದಿತು. ಅವಳು ತನ್ನ ಮನಸ್ಸಿನಲ್ಲಿ, “ ಪುರಂ
ದರನು ನನ್ನನ್ನು ಮರೆತಿರಲಾರನು, ಹಾಗೆ ಮರೆತಿದ್ದರೆ ಹಿಂದಿರುಗುತಿದ್ದ
ನು” ಎಂದು ತಿಳಿದುಕೊಂಡಳು.
ಹೀಗೆ ಎರಡು ವರ್ಷಗಳು ಕಳೆದುವು. ಮತ್ತೊಂದು ವರ್ಷವೂ
ಕಳೆಯಿತು. ಒಂದು ದಿನ ಅಕಸ್ಮಾತ್ತಾಗಿ ಧನದಾಸನು, “ ಎಲ್ಲರೂ ಹೊ
ರಡಿ, ಸಪರಿವಾರವಾಗಿ ಕಾಶಿಗೆ ಹೋಗುಬೇಕು, ಗುರುಗಳ ಸನ್ನಿಧಿಯಿಂದ
ಶಿಷ್ಯನು ಬಂದಿದ್ದಾನೆ, ಅಲ್ಲಿಗೆ ಬರಬೇಕೆಂದು ಗುರುಗಳ ಅನುಜ್ಞೆಯಾಗಿದೆ,
ಅಲ್ಲೇ ಹಿರಣ್ಮಯಿಗೆ ಮದುವೆಯಾಗಬೇಕು, ಅಲ್ಲಿ ಮೂರು ವರಗಳನ್ನು
ಗೊತ್ತು ಮಾಡಿದ್ದಾರೆ” ಎಂದು ಹೇಳಿದನು.
ಧನದಾಸನು ಹೆಂಡತಿಯನ್ನೂ ಮಗಳನ್ನೂ ಸಂಗಡ ಕರೆದುಕೊಂಡು
ಕಾಶೀಗೆ ಹೊರಟನು. ಸರಿಯಾದ ಕಾಲದಲ್ಲಿ ಕಾಶೀಗೆ ಸೇರಿದ ಬಳಿಕ
ಧನವಾಸನ ಗುರುವಾದ ಆನಂದಸ್ವಾಮಿಯು ಬಂದು ದರ್ಶನವಂ ಕೊಟ್ಟು
ವಿವಾಹಕ್ಕೆ ಲಗ್ನವನ್ನು ನಿಷ್ಕರ್ಷೆ ಮಾಡಿ ಶಾಸ್ತ್ರೋಕ್ತವಾಗಿ ಅಣಿಮಾಡಬೇ
ಕೆಂದು ಅಪ್ಪಣೆಯಂ ಕೊಟ್ಟನು.
ಮದುವೆಗೆ ಶಾಸ್ತ್ರೋಕ್ತವಾಗಿ ಬೇಕಾದುದೆಲ್ಲ ಹವಣರಿತು ಅಚ್ಚುಗ
ಟ್ಟಾಗಿ ಹವಣಿಸಲ್ಪಟ್ಟಿದ್ದಿತು ; ಆದರೆ ಗದ್ದಲವಿಲ್ಲ; ಗುಂಪು ಕೂಡಲಿಲ್ಲ;
ಧನದಾಸನ ಜನರಿಗೆ ಹೊರತು ಮತ್ತಾರಿಗೂ ಮದುವೆಯ ಸಮಾಚಾರವು
ತಿಳಿಯದು ; ಕೇವಲ ಶಾಸ್ತ್ರೀಯವಾಗಿ ಆಗಬೇಕಾದುದು ಸಿದ್ಧವಾಯಿತು.
ವಿವಾಹದ ದಿನ ಸಾಯಂಕಾಲವೂ ಬಂತು. ರಾತ್ರಿ ಧನುರ್ಲಗ್ನ
ದಲ್ಲಿ ಮುಹೂರ್ತವಿಟ್ಟಿದ್ದಿತು. ಮನೆಯಲ್ಲಿದ್ದವರು ಹೊರತು ಮತ್ತಾರೂ
ಬಂದಿರಲಿಲ್ಲ, ನೆರೆಹೊರೆಯವರೂ ಬಂದಿರಲಿಲ್ಲ, ಅದುವರೆಗೆ ಧನದಾಸ
ನಿಗೆ ಹೊರ್ತು ಮತ್ತಾರಿಗೂ ವರನಾರೆಂಬುದು ಗೊತ್ತಾಗಲಿಲ್ಲ; ಅವನಾವ
ಊರಿನವನೆಂಬುದೂ ತಿಳಿಯದು. ಆದರೆ ಆನಂದಸ್ವಾಮಿಯು ವರನನ್ನು
ಗೊತ್ತು ಮಾಡಿದ್ದುದರಿಂದ ಅಪಾತ್ರನಾಗಿರನೆಂದು ಎಲ್ಲರಿಗೂ ಚೆನ್ನಾಗಿ ನಂ
ಬಗೆಯಿದ್ದಿತು. ಅವನು ವರನ ಪರಿಚಯವನ್ನೇಕೆ ಹೇಳಲಿಲ್ಲವೋ ಅದನ
ನಿಗೆ ತಿಳಿಯಬೇಕು. ಅವನ ಮನಸ್ಸಿನಲ್ಲಿರುವುದು ಇತರರಿಗೆ ತಿಳಿಯುವ