ಪುಟ:ಯುಗಳಾಂಗುರೀಯ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಸಿರುವನು ; ಕ್ಲಪ್ತವಾದ ಕಾಲಾನಂತರ ಅವನನ್ನು ನೀನು ನೋಡಿದರೂ
ನೋಡಬಹುದು ; ಹಾಗೆ ನೋಡದೆಹೋದರೆ, ನೀನೀಗ ಬಾಲೆಯಲ್ಲ, ಈ
ಪ್ರಪಂಚದಲ್ಲಿ ಮುಖ್ಯವಾದ ಸಹಕಾರಿಯೆಂದು ಹೇಳುವ ಧನವೆಂಬುದು
ನಿನಗೆ ಅತುಲವಾಗಿದೆ ; ಯೋಚನೆಯಂ ಮಾಡಬೇಡ " ವೆಂದು ಹೇಳಿದಳು.
ಆದರೆ ಆ ಆಶೆಯು ವಿಫಲವಾಗಿ ಹೋಯಿತು. ಧನದಾಸನ ಮರ
ಣಾನಂತರ ನೋಡಲಾಗಿ, ಅವನೇನೂ ಹೆಚ್ಚು ಧನವನ್ನಿಟ್ಟುಹೋಗಿರಲಿಲ್ಲ.
ಒಂದು ದೊಡ್ಡಮನೆ, ಸಂಸಾರದ ಸಾಮಗ್ರಿಗಳು, ಕೆಲವು ಅಭರಣಗಳು
ಇವು ಹೊರತು ಮತ್ತೇನೂ ಇರಲಿಲ್ಲ. ಹಿರಣ್ಮಯಿಯು ವಿಚಾರಮಾಡಿದು
ದರಲ್ಲಿ, ಧನದಾಸನ ವ್ಯಾಪಾರದಲ್ಲಿ ಕೆಲವು ವರ್ಷಗಳಿಂದ ನಷ್ಟವೇ ಉಂಟಾಗಿ
ಅದನ್ನಾರಿಗೂ ತಿಳಿಸದೆ, ಅದರಿಂದುಂಟಾದ ಸಾಲಗಳನ್ನು ತೀರಿಸುವ ಪ್ರಯ
ತ್ನವ೦ ಮಾಡುತಿದ್ದನು; ಅದೇ ಅವನಿಗೆ ಚಿ೦ತೆಯನ್ನುಂಟುಮಾಡುವುದಕ್ಕೆ
ಕಾರಣವಾಯಿತು ; ಸಾಲವನ್ನು ಹರಿಸುವುದು ಅಸಾಧ್ಯವಾಗಿ ಚಿಂತೆಯು
ಹೆಚ್ಚಾಗುತಬಂದು ಕಡೆಗೆ ಅವನ ಮರಣಕ್ಕೂ ಅದೇ ಕಾರಣವಾಯಿತೆಂದು
ತಿಳಿಯಬಂತು.
ಧನದಾಸನ ಮರಣದ ಸಮಾಚಾರವು ಮಿಕ್ಕ ಶ್ರೇಷ್ಠಿಗಳಿಗೆ ತಿಳಿ
ಯಿತು ; ಅವರು ಹಿರಣ್ಮಯಿಯ ಬಳಿ ಬ೦ದು, " ನಿಮ್ಮ ತಂದೆಯು ನಮಗೆ
ಸಾಲಗಾರನಾಗಿ ಸತ್ತು ಹೋಗಿದ್ದಾನೆ, ನಮ್ಮ ಸಾಲಗಳನ್ನು ಹರಿಸಬೇಕು "
ಎಂದು ಕೇಳಿದರು. ಹಿರಣ್ಮಯಿಯು ವಿಚಾರಮಾಡಿದಳು ; ಅವರ ಮಾತು
ನಿಜವಾದುದೆಂದು ತಿಳಿಯಬಂತು. ಆಗವಳು ಸರ್ವಸ್ವವನ್ನೂ ವಿಕ್ರ
ಯಿಸಿ ತಂದೆಯ ಸಾಲಗಳನ್ನೆಲ್ಲ ಹರಿಸಿದಳು. ವಾಸಗ್ರಹವೂ ಮಾರಿಹೋ
ಯಿತು.
ಅನಂತರ ಹಿರಣ್ಮಯಿಯು ಅನ್ನವಸ್ತ್ರಕ್ಕೆ ಮಾರ್ಗವಿಲ್ಲದೆ ಪಟ್ಟಣದ
ಹೊರಗೆ ಬಂದು ಕುಟೀರದಲ್ಲಿ ಒಬ್ಬಳೇ ವಾಸಮಾಡಿಕೊಂಡಿದ್ದಳು. ಅವ
ಳಿಗೆ ಪರಮ ಸಹಕಾರಿಯಾದವನು ಆನಂದಸ್ವಾಮಿ ; ಅವನು ದೂರದೇಶದಲ್ಲಿ
ದ್ದನು. ಅವನಿದ್ದಲ್ಲಿಗೆ ಅವಳನ್ನು ಕರೆದುಕೊಂಡು ಹೋಗುವರಾರೂ ಇಲ್ಲ.