ಪುಟ:ಯುಗಳಾಂಗುರೀಯ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩

ಐದನೆಯ ಪರಿಚ್ಛೇದ.

——————

ಹಿರಣ್ಮಯಿಯು ಯುವತಿಯೂ ಸುಂದರಿಯೂ ಆಗಿದ್ದಳು. ಒಂದು
ಮನೆಯಲ್ಲೊಬ್ಬಳೇ ಮಲಗುವುದು ಸರಿಯಾಗಿರಲಿಲ್ಲ. ಅದರಿಂದ ಅಪಾಯ
ವುಂಟು, ಕಳಂಕಕ್ಕೂ ಕಾರಣ. ಅಮಲೆಯಂಬೊಬ್ಬ ಹೆಂಗಸು ಅವಳ ನೆರೆ
ಮನೆಯಲ್ಲಿ ವಾಸಮಾಡುತ್ತಿದ್ದಳು ; ಅವಳು ವಿತಂತು ; ಅವಳಿಗೊಬ್ಬಸಣ್ಣ
ಗಂಡುಹುಡುಗ, ನಾಲ್ಕೈದುಹೆಣ್ಣು ಮಕ್ಕಳು. ಅಮಲೆಗೆ ಯೌವನದ ಕಾಲವು
ಅತೀತವಾಗಿದ್ದಿತು ; ಸಚ್ಚರಿತ್ರೆಯೆಂದು ಖ್ಯಾತಿಗೊಂಡಿದ್ದಳು. ಹಿರಣ್ಮಯಿ
ಯು ರಾತ್ರಿಯ ಕಾಲದಲ್ಲಿ ಹೋಗಿ ಅವಳ ಮನೆಯಲ್ಲಿ ಮಲಗುತ್ತಿದ್ದಳು.
ಒಂದುದಿನ ಹಿರಣ್ಮಯಿಯು ಅಮಲೆಯ ಮನೆಯಲ್ಲಿ ಮಲಗುವು
ದಕ್ಕೆ ಹೋದಬಳಿಕ ಪ್ರಸ್ತಾವದಮೇಲೆ ಅಮಲೆಯು, " ಪುರಂದರಶ್ರೇಷ್ಠಿ
ಯು ಊರು ಬಿಟ್ಟು ಹೋಗಿ ಎಂಟು ವರ್ಷಗಳ ಬಳಿಕ ಪುನಃ ಬಂದಿದ್ದ
ನೆಂದು ಊರಲ್ಲಿ ಸುದ್ದಿಯು ಹುಟ್ಟಿದೆ " ಎಂದಳು. ಅದನ್ನು ಕೇಳಿ ಹಿರಣ್ಮ
ಯಿಗೆ ಕಣ್ಣೀರು ತುಂಬಿ ಹರಿದುಹೋಯಿತು. ಅಮಲೆಗದು ಕಾಣಲಿಲ್ಲ. ಈ
ಪೃಥ್ವಿಯಲ್ಲಿ ಅವಳಿಗೆ ಉಳಿದಿದ್ದೊಂದುಕಡೆಯ ಸಂಬಂಧವೂ ನಿವೃತ್ತಿಯಾಗಿ
ಹೋಯಿತು ; ಪುರಂದರನು ಅವಳನ್ನು ಮರೆತುಬಿಟ್ಟನು ; ಮರೆಯದೆ ಅವ
ನವಳನ್ನು ಜ್ಞಾಪಕದಲ್ಲಿಟ್ಟಿದ್ದರೆ, ಹಿಂದಿರುಗಿ ಬರುತ್ತಿರಲಿಲ್ಲ ; ಪುರಂದರನು
ಈಗವಳನ್ನು ಮರೆತಿದ್ದರೆ ನಷ್ಟವೆಷ್ಟೋ ಜ್ಞಾಪಿಸಿಕೊಂಡಿದ್ದರೆ ಲಾಭವೂ
ಅಷ್ಟೆ ; ಅವಳಿಗೇನು ಪ್ರಯೋಜನ? ಆದರೆ ಆರ ಬಾಲ್ಯಸ್ನೇಹವನ್ನು ಸದಾ
ಮನಸ್ಸಿನಲ್ಲಿಟ್ಟುಕೊಂಡು ಜ್ಞಾಪಿಸಿಕೊಳ್ಳುತ್ತ ಯಾವಜ್ಜೀವವೂ ಕಾಲಹರ
ಣೆಯನ್ನು ಮಾಡುತಿದ್ದಳೋ ಅಂಥವನು ಮರೆತನೆಂದು ಭಾವಿಸಿ ಹಿರಣ್ಮಯಿಗೆ
ಮನಸ್ಸಿನಲ್ಲಿ ವ್ಯಥೆಯುಂಟಾಯಿತು. ಹಿರಣ್ಮಯಿಯು, ಮನಸ್ಸಿನಲ್ಲಿ " ಅವನು
ಮರೆತಿರನು, ನನಗೋಸ್ಕರ ಅವನೆಷ್ಟು ದಿನ ವಿದೇಶದಲ್ಲಿರಲಾಪನು ? ಅದ
ಲ್ಲದೆ ಅವನ ತಂದೆಯೂ ಹೋಗಿದ್ದನು; ಊರಿಗೆಬಾರದೆ ಮತ್ತೆಲ್ಲಿಗೆ ಹೋ
ಗುವನು ? " ಎಂದು ಯೋಚಿಸಿಕೊಳ್ಳುವಳು. ಪುನಃ, " ನಾನು ವ್ಯಭಿಚಾರಿ
ಣಿಯ ದೋಷಕ್ಕೆ ಗುರಿಯಾದೆನು ; ಹಾಗಿಲ್ಲದಿದ್ದರೆ, ಪುರಂದರನ ಸ್ಮರಣೆಯು
ಪದೇಪದೆ ಬರಲೇಕೆ ? " ಎಂದು ತನಗೆ ತಾನೇ ತಿರಸ್ಕರಿಸಿಕೊಳ್ಳುವಳು,