ಪುಟ:ಯುಗಳಾಂಗುರೀಯ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಅಮಲೆ - ಪುರಂದರನೆಂಬುವನು ನಿನಗೆ ಜ್ಞಾಪಕಕ್ಕೆ ಬರಲಿಲ್ಲವೆ ?
ಪುರಂದರನು ಈಗ್ಗೆ ಕೆಲವು ತಿಂಗಳಿಗೆ ಮುಂಚೆ ಕಾಲವಾದ ಶಚೀಸೂತಶೆ
ಟ್ಟಿಯ ಮಗನಲ್ಲವೆ?
ಹಿರಣ್ಮಯಿ - ಬಲ್ಲೆನು.
ಅಮಲೆ - ಅವನೇ ಈಗ ಹಿಂದಿರುಗಿ ಬಂದಿರುವನು_ಎಷ್ಟೋ ಹಡಗಿ
ನಮೇಲೆ ಎಷ್ಟೋ ದ್ರವ್ಯವನ್ನು ಸಂಪಾದಿಸಿಕೊಂಡು ಬಂದಿದ್ದಾನಂತೆ,
ಅದನ್ನು ಲೆಕ್ಕಮಾಡುವುದಕ್ಕೆ ಆಗುವುದಿಲ್ಲವಂತೆ, ಅಷ್ಟು ಹಣವನ್ನು
ನಮ್ಮೀ ತಾಮಲಿಪಿನಗರದಲ್ಲಿ ಆವಾಗಲೂ ಆರೂ ಕಂಡಿಲ್ಲವಂತೆ !
ಹಿರಣ್ಮಯಿಯ ದೇಹದಲ್ಲಿ ರಕ್ತದ ವೇಗವು ಹೆಚ್ಚಾಯಿತು. ತನ್ನ
ದಾರಿದ್ರ್ಯದ ದೆಸೆಯು ಮನದಲ್ಲಿ ಬಂತು ; ತನ್ನ ಪೂರ್ವಸ್ಥಿತಿಯೂ ಜ್ಞಾಪ
ಕಕ್ಕೆ ಬಂತು ; ದಾರಿದ್ರ್ಯದ ಜ್ವಾಲೆಯು ಅತಿಮಹತ್ತಾದ ಜ್ವಾಲೆ - ಅವರ
ಜ್ವಾಲೆಗೆ ಅತುಲವಾದಾ ಧನಾರಾಶಿಯು ಅವಳದಾದರೆ ಎಷ್ಟೋ ವಾಶಿ ಆಗ
ಕೂಡದೆ ? ಹೀಗೆ ಯೋಚಿಸಿಕೊಂಡರೆ ರಕ್ತದ ವೇಗವು ಆರಿಗೆ ಹೆಚ್ಚಾಗದಿ ರುವುದು ? ಹಾಗೆ ಹೆಚ್ಚಾಗದಿರುವುದು ಹೆಂಗಸರಲ್ಲಿ ವಿರಳ. ಹಿರಣ್ಮಯಿಯು
ಕೆಲವು ನಿಮಿಷಗಳ ತನಕ ಮರೆತವಳಂತಿದ್ದು ಬಳಿಕ ಬೇರೆ ಪ್ರಸ್ತಾವವನ್ನೆ
ತ್ತಿದಳು. ಕಡೆಗೆ ನಿದ್ರೆಯು ಬರುವ ಸಮಯದಲ್ಲಿ, " ಅಮಲೆ ! ಆ ಶೆಟ್ಟಿ
ಯ ಮಗನು ಮದುವೆಯಾಗಿರುವನೆ ? " ಎಂದು ಕೇಳಿದಳು. ಅಮಲೆಯು,
" ಇಲ್ಲ, ಇನ್ನೂ ಮದುವೆಯಲ್ಲಿವಂತೆ " ಎಂದಳು.
ಹಿರಣ್ಮಯಿಯ ಇಂದ್ರಿಯಗಳೆಲ್ಲಾ ವಿವಶವಾದುವು, ಆ ರಾತ್ರಿ ಮತ್ತಾವ
ಮಾತು ಕಥೆಯು ನಡೆಯಲಿಲ್ಲ.

ಆರನೆಯ ಪರಿಚ್ಛೇದ

——————

ಅನಂತರ ಒಂದುದಿನ ಅಮಲೆಯು ಹಸನ್ಮುಖಿಯಾಗಿ ಹಿರಣ್ಮಯಿಯ
ಬಳಿ ಬಂದು ಮೃದುವಾದ ಭರ್ತ್ಸನೆಯಿಂದ " ಏನೆ, ಹುಡುಗಿ ! ಅಂಥಾ ಧರ್ಮ
ವುಳ್ಳವಳೆ, ನೀನು ? ಅಂಥಾ ಕೆಲಸವನ್ನು ಮಾಡುವುದುಂಟೇನೆ ? " ಎಂದಳು.