ಪುಟ:ಯುಗಳಾಂಗುರೀಯ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫

ಹಿರಣ್ಮಯಿ-ನಾನೇನನ್ನು ಮಾಡಿದೆನು ?
ಅಮಲೆ - ಇಷ್ಟು ದಿನವಾದರೂ ನನಗೆ ಹೇಳಬೇಡವೆ ?
ಹಿರಣ್ಮಯಿ - ನಾನಾವದನ್ನು ಹೇಳಲಿಲ್ಲ ?
ಅಮಲೆ - ಪುರಂದರಶೆಟ್ಟಿಗೂ ನಿನಗೂ ಅಷ್ಟೊಂದು ಸ್ನೇಹವೆ ?
ಹಿರಣ್ಮಯಿಯು ಸ್ವಲ್ಪ ಲಜ್ಜಿತೆಯಾಗಿ, " ನಾವಿಬ್ಬರೂ ಚಿಕ್ಕವರಾಗಿ
ದ್ದಾಗ ಅವನು ನಮ್ಮ ನೆರೆಯವನಾಗಿದ್ದನು ; ಅದನ್ನು ಕುರಿತು ಹೇಳಲೆ? "
ಎಂದಳು.
ಅಮಲೆ - ಬರಿ ನೆರೆಯವನಾಗಿದ್ದನೆ? ನೋಡು, ಏನನ್ನು ತಂದಿದ್ದೇನೆ?
ಹೀಗೆಂದು ಹೇಳಿ ಅಮಲೆಯು ಒಂದು ಭರಣಿಯನ್ನು ತೆಗೆದು ಬಹಳ
ಅಪೂರ್ವವಾದ ಮಹಾಪ್ರಕಾಶಗೊಂಡಿದ್ದು ಅತ್ಯಂತ ಬೆಲೆಯುಳ್ಳೊಂದು
ವಜ್ರದ ಹಾರವನ್ನು ಹಿರಣ್ಮಯಿಗೆ ತೋರಿದಳು. ಶೆಟ್ಟಿಯ ಮಗಳಿಗೆ ವಜ್ರದ
ಬೆಲೆಯು ಚೆನ್ನಾಗಿ ಗೊತ್ತು. ನೋಡಿ ವಿಸ್ಮಿತೆಯಾಗಿ, " ಇದು ಬಹಳ ಬೆಲೆ
ಯುಳ್ಳುದುದು : ಅದನ್ನೆಲ್ಲಿಂದ ತಂದೆ " ಎಂದಳು,
ಅಮಲೆ -- ಅದನ್ನು ಪುರಂದರನು ನಿನಗೆಂದು ಕಳುಹಿದ್ದಾನೆ. ನೀನೆನ್ನ
ಮನೆಯಲ್ಲಿರುವುದನ್ನು ಕೇಳಿ ನನ್ನನ್ನು ಕರೆಯಿಸಿ ನಿನಗದನ್ನು ಕೊಡೆಂದು
ಹೇಳಿ ಕೊಟ್ಟಿದ್ದಾನೆ.
ಹಿರಣ್ಮಯಿಯು ನೋಡಿ, ಅದನ್ನು ತೆಗೆದುಕೊಂಡರೆ ಯಾವಜ್ಜೀ
ನವೂ ತನ್ನ ದಾರಿದ್ರ್ಯವು ತೊಲಗುವುದೆಂದು ತಿಳಿವಳು. ಧನದಾಸನ ಆದ
ರದಿಂದ ಬೆಳದ ಮಗಳು ಅನ್ನವಸ್ತ್ರಕ್ಕೆ ಕಷ್ಟಪಡುತ್ತ, ಆ ಕಷ್ಟವು ಕೊನೆ
ಗಾಣುವುದಕ್ಕೆ ಅವಕಾಶವೊದಗಿದ್ದರೂ, ಕ್ಷಣೈಕ ವಿಮನೆಯಾಗಿದ್ದು ಕಡೆಗೆ
ನಿಟ್ಟೂರ್ಪನ್ನು ಬಿಟ್ಟು. " ಅಮಲೆ ! ಆ ವರ್ತಕರಿಗೆ ನಾನದನ್ನು ತೆಗೆದು
ಕೊಳ್ಳಲೊಪ್ಪಲಿಲ್ಲವೆಂದು ಹೇಳು " ಎಂದಳು.
ಅಮಲೆಯು ಆಶ್ಚರ್ಯಪಟ್ಟು, " ನಿನಗೇನು ಹುಚ್ಚೆ? ಇಲ್ಲವಾ
ದರೆ ನಾನು ಹೇಳುವ ಮಾತಿನಲ್ಲಿ ನಂಬುಗೆಯಿಲ್ಲವೊ ? " ಎಂದು ಕೇಳಿ
ದಳು.
ಹಿರಣ್ಮಯಿ - ನೀನು ಹೇಳುವುದನ್ನು ನಂಬುತ್ತೇನೆ. ನಾನು ಹುಚ್ಚಿ
ಯಲ್ಲ ; ನಾನದನ್ನು ತೆಗೆದುಕೊಳ್ಳುವುದಿಲ್ಲ,