ಪುಟ:ಯುಗಳಾಂಗುರೀಯ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಅಮಲೆಯು ಬಹಳ ಬೇಸರಗೊಂಡು ಹೇಳಿದಳು ; ಆದರೂ ಹಿರಣ್ಮ
ಯಿಯು ಅದನ್ನು ತೆಗೆದುಕೊಳ್ಳಲಿಲ್ಲ. ಬಳಿಕ ಅಮಲೆಯು ಹಾರವನ್ನು
ಕೊಂಡೊಯ್ಧು ರಾಜನಾದ ಮದನದೇವನ ಬಳಿ ಹೋಗಿ ಪ್ರಣಾಮವನ್ನು
ಮಾಡಿ ಅವನಿಗದನ್ನು ಉಪಹಾರವಾಗಿ ಒಪ್ಪಿಸಿ, " ತಾವು ಅದನ್ನು ದಯ
ವಿಟ್ಟು ಗ್ರಹಣಮಾಡಬೇಕು. ಅದು ತಮಗೆ ಯೋಗ್ಯವಾದುದು " ಎಂದು
ಬಿನ್ನೈಸಿದಳು. ರಾಜನು ಹಾರವನ್ನಂಗೀಕರಿಸಿ, ಅಮಲೆಗೆ ಯಥೇಷ್ಟ ದ್ರವ್ಯ
ವನ್ನು ಕೊಟ್ಟನು. ಹಿರಣ್ಮಯಿಗೆ ಅದಾವದೂ ಗೊತ್ತಿರಲಿಲ್ಲ.
ಇದಾದ ಕೆಲವು ದಿನಗಳಾದ ಬಳಿಕ ಪುರಂದರನ ಪರಿಚಾರಿಕೆಯ
ಲ್ಲೊಬ್ಬಳು ಹಿರಣ್ಮಯಿಯ ಬಳಿ ಬಂದು, " ನೀವು ಪರ್ಣಕುಟೀರದಲ್ಲಿರು
ವುದನ್ನು ಕೇಳಿ ನಮ್ಮ ಯಜಮಾನರಿಗೆ ಬಹಳ ಸಂಕಟವಾಯಿತು, ತಾವು
ಅವರ ಬಾಲ್ಯಸ್ನೇಹಿತರು. ಅವರ ಮನೆಯೇ ತಮ್ಮ ಮನೆಯಾಗಿದೆ, ಆದರೂ
ತಾವು ಅಲ್ಲಿ ಬಂದಿರಬೇಕೆಂದು ಕೇಳುವುದಿಲ್ಲ, ಅವರು ನಿಮ್ಮ ತಂದೆಗಳ
ಮನೆಯನ್ನು ಸಾಲಗಾರರಿಂದ ಬೆಲೆಗೆ ಪುನಃ ಪಡೆದುಕೊಂಡಿದ್ದಾರೆ, ಅದನ್ನು
ನಿಮಗೆ ದಾನವಾಗಿ ಕೊಟ್ಟಿದ್ದಾರೆ, ಆದುದರಿಂದ ನೀವು ಹೋಗಿ ಅಲ್ಲಿ ವಾಸ
ವಾಗಿರಲು ಪ್ರಾರ್ಥಿಸಿದೆನೆಂದು ತಮಗೆ ತಿಳಿಸುವಂತೆ ಹೇಳಿ ಕಳುಹಿಸಿದ್ದಾರೆ "
ಎಂದಳು,
ಹಿರಣ್ಮಯಿಗೆ ದಾರಿದ್ರ್ಯದ ದುಃಖಕ್ಕಿಂತ ತಂದೆಯ ಮನೆಯನ್ನು
ಬಿಟ್ಟು ಬಂದುದು ಹೆಚ್ಚು ದುಃಖಕರವಾಗಿದ್ದಿತು. ಬಾಲ್ಯದಲ್ಲೆಲ್ಲಿ ಆಡುತ್ತಿ
ದ್ದಳೋ, ತಾಯಿತಂದೆಗಳೊಂದಿಗೆಲ್ಲಿ ವಾಸವಾಗಿದ್ದಳೋ, ತನ್ನ ತಾಯಿತಂದೆ
ಗಳೆಲ್ಲಿ ಕಾಲವಾದರೋ, ಅಲ್ಲಿ ಪುನಃ ಅವಳಾಗಿನ ಸ್ಥಿತಿಯಲ್ಲಿ ಹೋಗಿ ವಾಸ
ಮಾಡುವುದು ಹೆಚ್ಚು ಕಷ್ಟವಾದುದಾಗಿ ಬೋಧೆಯಾಯಿತು. ಆ ಮನೆಯ
ಮಾತು ಹೇಳುತಲೇ ಅವಳ ಕಣ್ಣುಗಳಲ್ಲಿ ನೀರು ತುಂಬಿ ತಟತಟ ಸುರಿ
ಯಿತು. ಅವಳು ಪರಿಚಾರಿಕೆಗೆ ಆಶೀರ್ವಾದವಂ ಮಾಡಿ, " ನಾನಾ ದಾನ
ವನ್ನು ಗ್ರಹಣಮಾಡುವುದುಚಿತವಲ್ಲ ; ಆದರೆ ಆಕೆಯನ್ನಣಗಿಸಲಾರೆನು,
ನಿಮ್ಮ ಪ್ರಭುವಿಗೆ ಸರ್ವಪ್ರಕಾರವಾದ ಮಂಗಳತರಂಗಗಳುಂಟಾಗುವಂತೆ
ಹರಸಿದೆನೆಂದು ಹೇಳು " ಎಂದಳು.
ಪರಿಚಾರಿಕೆಯು ಪ್ರಣಾಮವನ್ನು ಮಾಡಿ ಬೀಳ್ಗೊಂಡು ಹೊರಟು
ಹೋದಳು, ಆಗಲ್ಲಿ ಅಮಲೆಯು ಕುಳಿತಿದ್ದಳು. ಹಿರಣ್ಮಯಿಯು ಅವಳನ್ನು