ಪುಟ:ಯುಗಳಾಂಗುರೀಯ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ಹತ್ತನೆಯ ಪರಿಚ್ಛೇದ.

——————

ಹಿರಣ್ಮಯಿಯು ರಾಜನ ಆಜ್ಞೆಯನ್ನು ಪಡೆದು ತನ್ನ ಮನೆಗೆ ಬಂದು
ಮೊದಲು ಹೇಳಿದ್ದ ಪತ್ರಾರ್ಧವನ್ನು ತೆಗೆದುಕೊಂಡು ಪುನಶ್ಚ ರಾಜಸನ್ನಿಧಾ
ನಕ್ಕೆ ಬಂದಳು. ರಾಜನು ಆ ಪತ್ರಾರ್ಧವನ್ನು ನೋಡಿ ಭರಣಿಯಿಂದದರ
ಮತ್ತೊಂದು ಅರ್ಧವನ್ನು ತೆಗೆದು ಹಿರಣ್ಮಯಿಯಕೈಯಲ್ಲಿ ಕೊಟ್ಟು, " ಎರ
ಡನ್ನೂ ಸೇರಿಸು " ಎಂದನು. ಹಿರಣ್ಮಯಿಯು ಸೇರಿಸಿದಳು ; ಎರಡು ತುಂ
ಡುಗಳೂ ಕೂಡಿದುವು. ಎರಡು ತುಂಡನ್ನು ಸೇರಿಸಿ ಓದೆಂದು ರಾಜನು ಹೇ
ಳಿದ ಪ್ರಕಾರ ಹಿರಣ್ಮಯಿಯು ಓದಿದಳು, ಏನೆಂದರೆ__
" (ಜಾತಕವನ್ನು ಗುಣಿಸಿ ನೋಡಲಾಗಿ) ನಿವು ಯೋಚಿಸಿರುವಂತೆ
ನಡೆಯಿಸತಕ್ಕುದಲ್ಲ. (ಹಿರಣ್ಮಯಿಯಂತಿರುವ ಸುವರ್ಣಪುತ್ತಳಿ) ಕೆಯ
ನ್ನು ಚಿರಕಾಲ ಕಷ್ಟದಲ್ಲಿ ಹಾಕುವುದು ಸರಿಯಲ್ಲ. ಅವಳಿಗೆ (ವಿವಾಹ
ವಾದರೆ ಭಯಂಕರವಾದ ವಿಪತ್ತು) ಉಂಟಾಗಿ, ಯಾವಜ್ಜೀವವೂ ಕಷ್ಟ
ವುಂಟಾಗುವುದೆಂದು ಗುಣಿಸುವುದರಲ್ಲಿ ಗೊತ್ತಾಯಿತು. ಐದುವರ್ಷಗಳ
ಪರ್ಯಂತ ದಂಪತಿಗಳು ( ಮುಖವನ್ನು ಪರಸ್ಪರ ) ದರ್ಶನ ಮಾಡದಿದ್ದರೆ
ಈ ಗ್ರಹದಿಂದ ನಿಷ್ಕೃತಿಯುಂಟಾ (ಗಬಹುದು.) ಅದರ ವಿಧಾನವನ್ನು ನಾನು
ಮಾಡುತ್ತೇನೆ " -
ಓದಿ ಪೂರೈಸಿದ ಬಳಿಕ ರಾಜನು, " ಆ ಕಾಗದವನ್ನು ಆನಂದಸ್ವಾ
ಮಿಯು ನಿಮ್ಮ ತಂದೆಗೆ ಬರೆದುದು " ಎಂದು ಹೇಳಿದನು.
ಹಿರಣ್ಮಯಿ - ಅದೀಗ ಗೊತ್ತಾಯಿತು. ನನಗೆ ವಿವಾಹಕಾಲದಲ್ಲಿ
ಕಣ್ಣುಗಳನ್ನು ಕಟ್ಟಿದ್ದರೇಕೆಂಬುದೂ ಗೋಪನವಾಗಿ ಅದ್ಭುತವಾದಾ
ವಿವಾಹವು ಹಾಗೇಕೆ ಆಯಿತು, ಐದುವರ್ಷಗಳಾಗುವತನಕ ಉಂಗುರ
ವನ್ನೇಕೆ ಹಾಕಿಕೊಳ್ಳಕೂಡದೆಂದು ನಿಷಿದ್ಧವಾಗಿತ್ತೆಂಬುದೂ ನನಗೀಗ
ಗೊತ್ತಾಯಿತು. ಮತ್ತೇನನ್ನೂ ಅರಿಯೆನು.
ರಾಜ - ಕಾಗದವು ಬಂದಕೂಡಲೆ ನಿಮ್ಮ ತಂದೆಯು ನಿನ್ನನ್ನು ಪುರಂ
ದರನಿಗೆ ಕೊಟ್ಟು ಮಾಡಬೇಕೆಂದು ನಿಷ್ಕರ್ಷೆಯಾಗಿದ್ದ ಮದುವೆಯನ್ನು