ಪುಟ:ಯುಗಳಾಂಗುರೀಯ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫

ನಿಲ್ಲಿಸಿಬಿಟ್ಟುದುದು ನಿನಗೆ ತಿಳಿದಿದೆ. ಪುರಂದರನಾ ದುಃಖದಿಂದ ಸಿಂಹಳ
ದ್ವೀಪಕ್ಕೆ ಹೊರಟು ಹೋದನು. ಅದನ್ನು ನೀನು ತಿಳಿದಿರಬೇಕು.
ಇತ್ತಲಾಗಿ ಆನಂದಸ್ವಾಮಿಯು ವರಾನ್ವೇಷಣವನ್ನು ಮಾಡಿ ವರನ
ಜಾತಕವನ್ನು ಶೋಧಿಸಿ ನೋಡಿದನು ; ವರನಿಗೆ ಎಂಭತ್ತೈದು ವರ್ಷದ
ಮೇಲೆ ಆಯುಸ್ಸೆಂದು ಗೊತ್ತಾಯಿತು. ಆದರೆ ಅವನಿಗೆ ಇಪ್ಪತ್ತೆಂಟು ವರ್ಷ
ಗಳಿಗೆ ಮುಂಚೆ ಒಂದು ದೊಡ್ಡ ಗಂಡವಿದ್ದಿತು. ಅದಲ್ಲದೆ, ಇಪ್ಪತ್ತೆಂಟು
ವರ್ಷಕ್ಕೆ ಮುಂಚೆ, ಮತ್ತು ವಿವಾಹವಾದ ಐದುವರ್ಷಗಳೊಳಗೆ ಪತ್ನಿಯ
ಶಯ್ಯೆಯಲ್ಲಿ ಮಲಗಿದರೆ ಅವನಿಗೆ ಮರಣವುಂಟೆಂತಲೂ ಅದು ಕಳೆದರೆ
ದೀರ್ಘಜೀವಿಯೆಂತಲೂ ಗೊತ್ತಾಗಿದ್ದಿತು.
ಆದುದರಿಂದ ವರನಿಗೆ ಇಪ್ಪತ್ತು ಮೂರು ವರ್ಷವಾದ ಬಳಿಕ ವಿವಾ
ಹವು ಗೊತ್ತುಮಾಡಲ್ಪಟ್ಟಿದ್ದಿತು. ಆದರೆ ಅದುವರೆಗೆ ನೀನು ವಿವಾಹಿತೆಯಾ
ಗದಿದ್ದರೆ, ಚಂಚಲೆಯಾಗುವೆ ಎಂತಲೂ ಅಥವಾ ಗೋಪ್ಯವಾಗಿ ಬೇರೆ ವಿವಾ
ಹವನ್ನು ಮಾಡಿಕೊಳ್ಳದಿರಬೇಕೆಂತಲೂ ನಿನಗೆ ಭಯವಿರಲೆಂದು ಆ ಪತ್ರಾ
ರ್ಧವು ನಿನ್ನ ಆಭರಣಗಳಲ್ಲಿ ಇಡಲ್ಪಟ್ಟಿತು.
ಅಲ್ಲದೆ ವಿವಾಹವಾದ ಐದು ವರ್ಷಗಳು ಪರಸ್ಪರ ನೋಡದಿರುವು
ದಕ್ಕೆ ಬೇಕಾದ ಉಪಾಯಗಳನ್ನು ಕಲ್ಪಿಸಿದುದು ನಿನಗೆ ಗೊತ್ತಿದೆ. ಅದು
ಕಾರಣ ಗಂಡಹೆಂಡಂದಿರಿಗೆ ಪರಸ್ಪರ ಪರಿಚಯವಾಗಲಿಲ್ಲ.
ಆದರೆ ಈಗ ಐದಾರು ತಿಂಗಳಿಂದ ಸ್ವಲ್ಪ ರಗಳೆಗಿಟ್ಟಿತು. ಆನಂದ
ಸ್ವಾಮಿಯು ಇಲ್ಲಿಗೆ ಬಂದವನು ನೀನು ದಾರಿದ್ರ್ಯಾವಸ್ಥೆಯಲ್ಲಿರುವುದನ್ನು
ಕೇಳಿ ದುಃಖಿತನಾದನು ; ಅವನು ನಿನ್ನನ್ನು ನೋಡುವುದಕ್ಕೆ ಬಂದನು ;
ಆದರೆ ನೋಡಲಿಲ್ಲ ; ಅವನು ಬಂದು ನನ್ನನ್ನು ನೋಡಿ ನಿನ್ನ ವಿವಾಹದ
ವೃತ್ತಾಂತವನ್ನು ಅನುಪೂರ್ವಕವಾಗಿ ಹೇಳಿ, " ಹಿರಣ್ಮಯಿಯು ದಾರಿದ್ರ್ಯಾ
ವಸ್ಥೆಯಲ್ಲಿದ್ದುದು ನನಗೆ ತಿಳಿದಿದ್ದರೆ ಅದಕ್ಕೇನಾದರೂ ಮಾಡುತಿದ್ದೆನು ;
ತಾವೇನಾದರೂ ಅದಕ್ಕೆ ಪ್ರತೀಕಾರವನ್ನು ಮಾಡಿದರೆ ಬಹಳ ಬಾಧ್ಯಪಡು
ತ್ತೇನೆ. ಹಿರಣ್ಮಯಿಯು ಮತ್ತು ಅವಳ ಗಂಡನು ಪರಸ್ಪರ ನೋಡದಿರುವ
ರೀತಿ ಮಾಡಬೇಕು " ಎಂದು ಹೇಳಿದನು. ನಿನ್ನ ಸ್ವಾಮಿಯ ಪರಿಚಯ
ವನ್ನೂ ಹೇಳಿದನು. ತದಾರಭ್ಯ, ಅಮಲೆಯು ನಿನ್ನ ಮನೆಯ ವೆಚ್ಛವನ್ನು