ಪುಟ:ಯುಗಳಾಂಗುರೀಯ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ನಡೆಯಿಸುವಂತೆ ನಾನೇ ಏರ್ಪಾಡನ್ನು ಮಾಡಿದೆನು ; ನಿಮ್ಮ ತಂದೆಯ ಮನೆ
ಯನ್ನು ನಾನೇ ಬೆಲೆಗೆ ತೆಗೆದು ನಿನಗೆ ವಾಸಕ್ಕೆ ಕೊಟ್ಟೆನು. ವಜ್ರದ ಹಾರ
ವನ್ನು ನಾನೇ ನಿನ್ನಲ್ಲಿಗೆ ಕಳುಹಿಸಿದೆನು, ಅದು ನಿನ್ನ ಪರೀಕ್ಷಾರ್ಥವಾಗಿ.
ಹಿರಣ್ಮಯಿ - ಹಾಗಾದರೆ ತಮಗೆ ಆ ಉಂಗುರವೆಲ್ಲಿದ್ದಿತು? ತಾವೇ
ನನ್ನ ಸ್ವಾಮಿಯೆಂದು ಪರಿಚಯವಂ ಕೊಟ್ಟು ನನಗೆ ಮೋಸಗೊಳಿಸಿದಿ
ರೇಕೆ ? ಪುರಂದರನ ಮನೆಯಲ್ಲಿ ಕ್ರಯದ ಹಣವನ್ನು ಕೊಡದೆ ವಾಸಮಾ
ಡುವುದು ಸರಿಯಲ್ಲವೆಂದು ಆಕ್ಷೇಪಿಸೋಣವಾಯಿತೇಕೆ ?
ರಾಜ - ಆನಂದಸ್ವಾಮಿಯು ಬಂದು ನನಗೆ ಆ ವೃತ್ತಾಂತವನ್ನೆಲ್ಲ
ಹೇಳಿದ ಬಳಿಕ ನಿನ್ನಮೇಲೆ ಕಾವಲಿರುವುದಕ್ಕೆ ಜನರನ್ನು ನೇಮಕಮಾಡಿ
ದೆನು. ಅಂದು ಅಮಲೆಯ ಮುಖಾಂತರವಾಗಿ ಹಾರವನ್ನು ನಿನ್ನ ಬಳಿಗೆ
ಕಳುಹಿದೆನು ; ಇಂದಿಗೆ ಐದು ವರ್ಷವು ಪೂರೈಸುವುದರಿಂದ ನಿನ್ನ ಸ್ವಾಮಿ
ಯನ್ನು ಕರೆಯಿಸಿ ಅವನ ಮದುವೆಯ ವೃತ್ತಾಂತವನ್ನೆಲ್ಲಾ ಅವನಿಗೆ ಹೇಳಿ,
ರಾತ್ರಿ ಹನ್ನೊಂದು ಘುಳಿಗೆಗೆ ಸರಿಯಾಗಿ ಉಂಗುರವನ್ನು ತಂದಿಟ್ಟುಕೊಂಡಿ
ದ್ದರೆ ಹೆಂಡತಿಯೊಡನೆ ಸೇರಬಹುದೆಂದು ಹೇಳಿದುದಕ್ಕೆ, ಅವನು, ಮಹಾರಾ
ಜರ ಅಪ್ಪಣೆಯು ಶಿರೋಧಾರ್ಯವಾದುದಾದರೂ ಸಂಸಾರದಿಂದ ಸೇರಿರಲು
ತನಗಿಷ್ಟವಿಲ್ಲವೆಂತಲೂ, ಏಕಾಂಗಿಯಾಗಿರುವೆನೆಂತಲೂ ಹೇಳಿದನು. ಅದು
ಸರಿಯಲ್ಲ, " ನನ್ನ ಅಪ್ಪಣೆಯಪ್ರಕಾರ ನಡೆದುಕೊಳ್ಳತಕ್ಕುದು " ಎಂದು
ಹೇಳಿದುದಕ್ಕೆ ಅವನೊಪ್ಪಿಕೊಂಡಿದ್ದಾನೆ ; ಆದರೆ ಆ ಹೆಂಗಸು ಸಚ್ಚರಿತ್ರದ
ವಳೋ, ದುಶ್ಚರಿತ್ರದವಳೋ ಚೆನ್ನಾಗಿ ವಿಚಾರಿಸಬೇಕೆಂದೂ ದುಶ್ಚರಿತ್ರದ
ವಳನ್ನು ತನ್ನ ಸಂಗಡ ಕೂಡಿ ಹಾಕಿದರೆ ರಾಜನಿಗೆ ಪಾಪಸ್ಪರ್ಶವಾಗುವು
ದೆಂದೂ ಹೇಳಿದನು. ಅದಕ್ಕೆ " ನಾನು ಉಂಗುರವನ್ನು ಕೊಟ್ಟು ಹೋಗು,
ಅವಳ ಚರಿತ್ರೆಯನ್ನು ಪರೀಕ್ಷಿಸಿ ಹೇಳುವೆನು " ಎಂದೆನು. ಅವನು, " ಉಂ
ಗುರವನ್ನಾರಿಗೂ ನಂಬಿ ಕೊಡಲಾರೆನು ; ಆದರೆ ತಮ್ಮಲ್ಲಿ ನಂಬಿ ಕೊಡುವೆ
ನು " ಎಂದು ಹೇಳಿ ಉಂಗುರವನ್ನು ಕೊಟ್ಟನು. ನಾನು ಉಂಗುರವನ್ನು
ಇಟ್ಟುಕೊಂಡು ನಿನ್ನನ್ನು ಪರೀಕ್ಷೆ ಮಾಡಿದುದರಲ್ಲಿ ನೀನು ಗೆದ್ದೆ.
ಹಿರಣ್ಮಯಿ - ತಾವು ಆವ ಪರೀಕ್ಷೆಯನ್ನು ಹೇಗೆ ಮಾಡೋಣವಾ
ಯಿತೋ, ನಾನು ಹೇಗೆ ಜಯಿಸಿದೆನೋ ಅದೆನಗೆ ಗೊತ್ತಾಗಲಿಲ್ಲ.