ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೨

ರಂಗಣ್ಣನ ಕನಸಿನ ದಿನಗಳು


ಸರಕಾರಿ ಪ್ರೈಮರಿ ಪಾಠಶಾಲೆಗಳನ್ನು 'ಬೇಗ ಸರಿಯಾದ ಕಡೆಗಳಿಗೆ ಹಂಚಿ, ವರದಿಯನ್ನು ಕಳಿಸಿಕೊಡಬೇಕು' ಎಂದು ಹೇಳಿದರು. ರಂಗಣ್ಣನು, “ಆಗಲಿ ಸಾರ್ !' ಎಂದು ಹೇಳಿದನು. ಸಾಹೇಬರು ಗಂಗೇ ಗೌಡರ ಕೈ ಕುಲುಕಿ, ಎಲ್ಲರಿಗೂ ವಂದನೆಮಾಡಿ ಬಸ್ ಹತ್ತಿದರು. ಬಸ್ ಹೊರಟಿತು. ಜಯಕಾರಗಳು ನಭೋಮಂಡಲವನ್ನು ಭೇದಿಸಿದುವು !